• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದಲ್ಲಿ ಪ್ರಭುತ್ವ ಬದಲಾಗುತ್ತದೆ, ಆದರೆ ತನಿಖಾ ಸಂಸ್ಥೆಗಳು ಶಾಶ್ವತ : ಸಿಬಿಐ’ಗೆ ಸಿಜಿಐ ರಮಣ ಕಿವಿಮಾತು

ಫಾತಿಮಾ by ಫಾತಿಮಾ
April 2, 2022
in ದೇಶ
0
ದೇಶದಲ್ಲಿ ಪ್ರಭುತ್ವ ಬದಲಾಗುತ್ತದೆ, ಆದರೆ ತನಿಖಾ ಸಂಸ್ಥೆಗಳು ಶಾಶ್ವತ : ಸಿಬಿಐ’ಗೆ ಸಿಜಿಐ ರಮಣ ಕಿವಿಮಾತು
Share on WhatsAppShare on FacebookShare on Telegram

ಕೇಂದ್ರೀಯ ಸಂಸ್ಥೆಯ ಸಮಾರಂಭವೊಂದರಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು,  ಕೇಂದ್ರೀಯ ತನಿಖಾ ದಳವು ತನ್ನ ‘ಕ್ರಿಯೆಗಳು ಮತ್ತು ನಿಷ್ಕ್ರಿಯತೆಗಳ’ ಮೂಲಕ ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತಿದೆ ಎಂದು ಹೇಳಿದ್ದು ‘ಸಾಮಾಜಿಕ ನ್ಯಾಯಸಮ್ಮತತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಮರುಪಡೆಯುವುದು’ ಈ ಸಮಯದ ಅಗತ್ಯವಾಗಿದೆ ಮತ್ತು ಅದಕ್ಕೆ ಮೊದಲ ಹೆಜ್ಜೆ ‘ರಾಜಕಾರಣಿಗಳು ಮತ್ತು ಎಕ್ಸಿಕ್ಯುಟಿವ್‌ಗಳ ಜೊತೆಗೆ ಸಂಬಂಧವನ್ನು ಮುರಿಯುವುದು’ ಎಂದು ಸಲಹೆ ನೀಡಿದ್ದಾರೆ.

ADVERTISEMENT

“CBI, SFIO, ED ಮುಂತಾದ ವಿವಿಧ ಏಜೆನ್ಸಿಗಳನ್ನು ಒಂದೇ ಸೂರಿನಡಿ ತರಲು ಸ್ವತಂತ್ರ ಸಂಸ್ಥೆಯ ರಚನೆ ತಕ್ಷಣದ ಅವಶ್ಯಕತೆ. ಮತ್ತು ಆ ಸಂಸ್ಥೆಯ ಅಧಿಕಾರಗಳು, ಕಾರ್ಯಗಳು ಮತ್ತು ನ್ಯಾಯವ್ಯಾಪ್ತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಶಾಸಕಾಂಗದ ಮೇಲುಸ್ತುವಾರಿಗೆ ಇಂತಹ ಸಂಸ್ಥೆಯ ಅಗತ್ಯವಿದೆ” ಎಂದೂ ಅವರು ಹೇಳಿದ್ದಾರೆ.

ಈ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಅಧಿಕಾರವನ್ನು, ಸಿಬಿಐನ ನಿರ್ದೇಶಕರನ್ನು ನೇಮಿಸುವ ಸಮಿತಿಗೆ ಹೋಲುವ ಸಮಿತಿಯಿಂದ ನೇಮಿಸಬೇಕು. ಸಂಸ್ಥೆಯ ಮುಖ್ಯಸ್ಥರು ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಡೆಪ್ಯೂಟಿಗಳಿಂದ ಸಹಾಯ ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

“ಪ್ರಜಾಪ್ರಭುತ್ವ: ತನಿಖಾ ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದ, ನ್ಯಾಯಮೂರ್ತಿ ರಮಣ ಬ್ರಿಟಿಷರ ಕಾಲದಿಂದ ಭಾರತದಲ್ಲಿ ಪೊಲೀಸ್ ವ್ಯವಸ್ಥೆಯು ಹೇಗೆ ವಿಕಸನಗೊಂಡಿತು ಎಂಬುದನ್ನು ವಿವರಿಸುತ್ತಾ, ಕಾಲಾನಂತರದಲ್ಲಿ, ಸಿಬಿಐ “ಆಳವಾದ ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿದೆ” ಎಂದು ಹೇಳಿದ್ದಾರೆ.

“ಭ್ರಷ್ಟಾಚಾರ ಇತ್ಯಾದಿ ಆರೋಪಗಳಿಂದ ಪೋಲೀಸರ ಇಮೇಜ್ ಹಾಳಾಗುತ್ತಿದೆ. ಅಧಿಕಾರ ಬದಲಾವಣೆಯಿಂದ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸುತ್ತಾರೆ. ಕಾಲಕ್ಕೆ ತಕ್ಕಂತೆ ದೇಶದಲ್ಲಿ ಪ್ರಭುತ್ವ ಬದಲಾಗುತ್ತದೆ, ಆದರೆ ತನಿಖಾ ಸಂಸ್ಥೆಗಳು ಶಾಶ್ವತ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪೊಲೀಸರನ್ನು ಉದ್ದೇಶಿಸಿ ಹೇಳಿದರು.

ಇದೇ ಸಂದರ್ಭದಲ್ಲಿ, ಪೊಲೀಸರಂತೆ ತನಿಖಾ ಸಂಸ್ಥೆಗಳು ಸಾಂವಿಧಾನಿಕ ಬೆಂಬಲವನ್ನು ಹೊಂದಿಲ್ಲ ಎಂಬುವುದನ್ನು ಒಪ್ಪಿಕೊಂಡ ಮುಖ್ಯ ನ್ಯಾಯಮೂರ್ತಿ  “ಪೊಲೀಸ್ ವ್ಯವಸ್ಥೆಯು ತನ್ನ ಕಾನೂನುಬದ್ಧತೆಯನ್ನು ಸಂವಿಧಾನದಿಂದ ಪಡೆದುಕೊಂಡಿದೆ. ದುರದೃಷ್ಟವಶಾತ್ ತನಿಖಾ ಸಂಸ್ಥೆಗಳು ಕಾನೂನಿನ ಮಾರ್ಗದರ್ಶನದ ಪ್ರಯೋಜನವನ್ನು ಇನ್ನೂ ಹೊಂದಿಲ್ಲ ”ಎಂದು  ಹೇಳಿದರು. ತನಿಖಾ ಸಂಸ್ಥೆಗಳು ಎದುರಿಸುತ್ತಿರುವ ಇತರ ಸವಾಲುಗಳನ್ನೂ ವಿವರಿಸಿದ ಅವರು, ಮೂಲಸೌಕರ್ಯ, ಮಾನವಶಕ್ತಿ, ಆಧುನಿಕ ಉಪಕರಣಗಳ ಕೊರತೆ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ  ವಿಧಾನಗಳು, ರಾಜಕೀಯ ಬದಲಾವಣೆಗಳೊಂದಿಗೆ ಆದ್ಯತೆಗಳಲ್ಲಿ ಬದಲಾವಣೆ ಮತ್ತು ಅಧಿಕಾರಿಗಳ ಪುನರಾವರ್ತಿತ ವರ್ಗಾವಣೆ ಮುಂತಾದವುಗಳವೂ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಗಳ ಮೇಲೆ ಪರುಣಾಮ ಬೀರುತ್ತವೆ ಎಂದಿದ್ದಾರೆ. “ಈ ಸಮಸ್ಯೆಗಳು ಸಾಮಾನ್ಯವಾಗಿ ತಪ್ಪಿತಸ್ಥರನ್ನು ಖುಲಾಸೆಗೊಳಿಸಲು ಮತ್ತು ಅಮಾಯಕರ ಸೆರೆವಾಸಕ್ಕೆ ಕಾರಣವಾಗುತ್ತವೆ. ನ್ಯಾಯಾಲಯಗಳು ಪ್ರತಿ ಹಂತವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಆದರೆ ಯಾವುದೇ ಸಂಸ್ಥೆಯ ಕಾರ್ಯಕ್ಷಮತೆಯು ಅದರ ನಾಯಕತ್ವ ವಹಿಸಿಕೊಂಡಿರುವವರ ಮೇಲೆ ಅವಲಂಬಿತವಾಗಿದ್ದು ಒಳ್ಳೆಯದು ಅಥವಾ ಕೆಟ್ಟದ್ದಾಗಿರುತ್ತದೆ ಎಂದ ಅವರು ಕೆಲವೇ ಅಧಿಕಾರಿಗಳಿಂದ ಬದಲಾವಣೆ ತರಲು ಸಾಧ್ಯವಿದೆ ಎಂದು ಹೇಳಿದ್ದಾರೆ.

Tags: BJPCongress PartyCovid 19ಎನ್ ವಿ ರಮಣದೇಶದಲ್ಲಿ ಪ್ರಭುತ್ವನರೇಂದ್ರ ಮೋದಿನಿಖಾ ಸಂಸ್ಥೆಬಿಜೆಪಿಸಿಜಿಐ ರಮಣಸಿಬಿಐ ರಮಣ
Previous Post

ಹಲಾಲ್ v/s ಜಟ್ಕಾ ಕಟ್ ವಿವಾದದ ನಡುವೆಯೇ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ ಎಂದು ಆದೇಶ ಹೊರಡಿಸಿದ ಪಶುಸಂಗೋಪನಾ ಇಲಾಖೆ

Next Post

ಕಾಂಗ್ರೆಸ್‌ 10% ಲಂಚ ಕೇಳುತ್ತದೆಂದು ಬಿಜೆಪಿಗೆ ಮತ ಹಾಕಿದೆವು, ಆದರೆ ಬಿಜೆಪಿ 40% ಲಂಚ ಕೇಳುತ್ತಿದೆ : ಗುತ್ತಿಗೆದಾರರ ಆರೋಪ

Related Posts

Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
0

ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ 50 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಸಿ ಜಿ (ECG...

Read moreDetails
ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

November 3, 2025

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025
Next Post
ಕಾಂಗ್ರೆಸ್‌ 10% ಲಂಚ ಕೇಳುತ್ತದೆಂದು ಬಿಜೆಪಿಗೆ ಮತ ಹಾಕಿದೆವು, ಆದರೆ ಬಿಜೆಪಿ 40% ಲಂಚ ಕೇಳುತ್ತಿದೆ : ಗುತ್ತಿಗೆದಾರರ ಆರೋಪ

ಕಾಂಗ್ರೆಸ್‌ 10% ಲಂಚ ಕೇಳುತ್ತದೆಂದು ಬಿಜೆಪಿಗೆ ಮತ ಹಾಕಿದೆವು, ಆದರೆ ಬಿಜೆಪಿ 40% ಲಂಚ ಕೇಳುತ್ತಿದೆ : ಗುತ್ತಿಗೆದಾರರ ಆರೋಪ

Please login to join discussion

Recent News

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ
Top Story

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

by ಪ್ರತಿಧ್ವನಿ
November 3, 2025
Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ
Top Story

ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ

by ಪ್ರತಿಧ್ವನಿ
November 3, 2025
ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!
Top Story

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

by ಪ್ರತಿಧ್ವನಿ
November 3, 2025
ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು
Top Story

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada