ಪೊಲೀಸರಿಗೆ(Police) ಧಮ್ಮಿ ಹಾಕಿದ ಪ್ರಕರಣ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ (Harish poonja) ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ರು. ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಹರೀಶ್ ಪೂಂಜರನ್ನು ಸ್ಟೇಷನ್ ಜಾಮೀನಿನ (Station bail) ಮೇಲೆ ಬಿಡುಗಡೆ ಮಾಡಿದರು.

ಈ ವೇಳೆ ಶಾಸಕ ವೇದವ್ಯಾಸ ಕಾಮತ್ (Vedavyas kamath), ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ (Brijesh Chouta), ಮಾಜಿ ಎಂಎಲ್ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (Ganesh karnik), ಬಿಜೆಪಿ ನಾಯಕರಾದ ಹರಿಕೃಷ್ಣ ಬಂಟ್ವಾಳ್, ಸತೀಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಪೊಲೀಸ್ ಠಾಣೆಯಿಂದ ಹೊರ ಬಂದ ಹರೀಶ್ ಪೂಂಜ, ಕೇಳಿದ ಪ್ರಶ್ನೆಗಳಿಗೆ ಸರ್ಮಪಕವಾದ ಉತ್ತರ ಕೊಟ್ಟಿದ್ದೇನೆ ಎಂದ್ರು.

ಬಿಜೆಪಿ ಶಾಸಕ ಹರೀಶ್ ಪೂಂಜ ಬೆಂಬಲಕ್ಕೆ ನಿಂತು ಪೊಲೀಸ್ ಠಾಣೆವರೆಗೂ ಬಂದಿದ್ದ ಮಾಜಿ ಸಚಿವ ಸುನೀಲ್ (Sunil Kumar) ಕುಮಾರ್, ಪೊಲೀಸರ ವಿರುದ್ಧವೇ ವಾಗ್ದಾಳಿ ನಡೆಸಿದ್ರು. ಪಾಕಿಸ್ತಾನ್ (pakistan) ಜಿಂದಾಬಾದ್ ಎಂದವರ ಮೇಲೆ ಎಫ್ಐಆರ್ (FIR) ಹಾಕಲು 4 ದಿನ ತೆಗೆದುಕೊಂಡ್ರು.. ಒಬ್ಬ ಶಾಸಕನಿಗೆ ನೋಟಿಸ್ ಕೂಡ ನೀಡದೆ ಬಂಧಿಸಲು(Arrest) ಬಂದಿದ್ದಾರೆ. ಇದ್ದನ್ನೆಲ್ಲಾ ಗಮನಿಸಿದ್ರೆ ಪೊಲೀಸರು ಸರ್ಕಾರದ ಕೈಗೊಂಬೆಯಾಗಿರೋದು ಗೊತ್ತಾಗ್ತಿದೆ ಅಂತಾ ಅಂತಾ ಸುನೀಲ್ ಕುಮಾರ್ ಆರೋಪಿಸಿದ್ರು.