ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ದೇವರಾಜೇಗೌಡ ಹೆದ್ದಾರಿಯಲ್ಲಿ ಹೋಗುವಾಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸ್ ದಾಖಲಾಗಿತ್ತು. ಕಳೆದ ಏಪ್ರಿಲ್ 1 ರಂದು ಹೊಳೇನರಸೀಪುರದಲ್ಲಿ ಸಂತ್ರಸ್ತೆ ಒಬ್ಬರು ಲೈಂಗಿಕ ಕಿರುಕುಳ ದೂರು ನೀಡಿದ್ದರು. ಅದೇ ದೂರಿನ ಆಧಾರದ ಮೇಲೆ ವಕೀಲ ಹಾಗು ಬಿಜೆಪಿ ನಾಯಕ ದೇವರಾಜೇಗೌಡರನ್ನು ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ವಿಶೇಷ ಅಂದ್ರೆ ಪೊಲೀದ್ರು ದೂರುದಾರನನ್ನೇ ಅರೆಸ್ಟ್ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬಿಗ್ ಆಫರ್ ಕೊಟ್ಟರು ಎಂದು ಹೇಳುವ ಮೂಲಕ 2ನೇ ಹಂತದ ಲೋಕಸಭಾ ಚುನಾವಣೆಗೂ ಹಿಂದಿನ ದಿನ ಕಾಂಗ್ರೆಸ್ ಪಕ್ಷವನ್ನೇ ಮುಜುಗರಕ್ಕೆ ಸಿಲುಕಿಸಿದ್ದ ದೇವರಾಜೇಗೌಡ, ಸಂತ್ರಸ್ತೆ ದೂರು ದಾಖಲು ಮಾಡುವ ಮೊದಲೇ ದೂರು ನೀಡಿದ್ದರು. ಮಾರ್ಚ್ 29ಕ್ಕೆ ದೇವರಾಜೇಗೌಡ ದೂರು ದಾಖಲು ಮಾಡಿದ್ದು, ಹನಿಟ್ರ್ಯಾಪ್ ಎಂದು ಉಲ್ಲೇಖ ಮಾಡಿದ್ದಾರೆ. ಹೆಬ್ಬಾಳ ಠಾಣೆಯಲ್ಲಿ ವಕೀಲ ದೇವರಾಜೇಗೌಡ ದೂರು ನೀಡಿದ ಬಳಿಕ ಹೊಳೆನರಸೀಪುರದಲ್ಲಿ ಸಂತ್ರಸ್ತ ಮಹಿಳೆ ಲೈಂಗಿಕ ಕಿರುಕುಳ ಕೇಸ್ ನೀಡಿದ್ದರು. ಇದೀಗ ಕೌಂಟರ್ ಕೇಸ್ ಆಧಾರದಲ್ಲಿ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿ ಹನಿಟ್ರ್ಯಾಪ್ ಕೇಸ್ ಕೊಟ್ಟರೂ ಪೊಲೀಸ್ರು ಆ ಬಗ್ಗೆ ಗಮನ ಹರಿಸಿಲ್ಲ, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಗೋಜಿಗೆ ಹೋಗಿಲ್ಲ. ಆದರೆ ಮೂರು ದಿನ ತಡವಾಗಿ ಕಂಪ್ಲೆಂಟ್ ಆಗಿದೆ ಎನ್ನುವ ಕಾರಣಕ್ಕೆ ಲೈಂಗಿಕ ಕಿರುಕುಳ ಕೇಸ್ ಕೊಟ್ಟಿರುವ ಕೇಸ್ ತಿಂಗಳ ಬಳಿ ಭಾರೀ ವೇಗ ಪಡೆದುಕೊಂಡಿದೆ. ಹೊಳೆನರಸೀಪುರ ಪೊಲೀಸರು ದೇವರಾಜೇಗೌಡನನ್ನು ಅರೆಸ್ಟ್ ಮಾಡಿ ಹಾಸನಕ್ಕೆ ಕರೆದೊಯ್ಯುಯ್ದಿದ್ದಾರೆ. ದೇವರಾಜೇಗೌಡ ನಾಪತ್ತೆ ಅನ್ನೋ ಸುದ್ದಿಯನ್ನು ಹರಿಡಿಸಿದ್ದ ಪೊಲೀಸರು, ದೇವರಾಜೇಗೌಡರಿಂದ ಪ್ರತಿಕ್ರಿಯೆ ಬರುವಂತೆ ಮಾಡಿ, ಮೊಬೈಲ್ ಸಿಗ್ನಲ್ ಟವರ್ ಆಧಾರದಲ್ಲಿ ಹಿರಿಯೂರು ಪೊಲೀಸ್ರ ಸಹಕಾರದಿಂದ ಅರೆಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಂತ ಕಾರಣಕ್ಕೆ ಅರೆಸ್ಟ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅರೆಸ್ಟ್ ಮಾಡಬೇಕು ಅನ್ನೋ ಸೂಚನೆಯಂತೆ ಅರೆಸ್ಟ್ ಕೂಡ ಮಾಡಿರುವ ಸಾಧ್ಯತೆಯಿದೆ. ಸರ್ಕಾರದ ಉದ್ದೇಶ ಅರಿತಿದ್ದ ದೇವರಾಜೇಗೌಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಜಾಮೀನು ಸಿಗುವ ಮೊದಲೇ ಅರೆಸ್ಟ್ ಮಾಡಲಾಗಿದೆ. ಇನ್ನು ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಟಿ ನಡೆಸುವುದಾಗಿ ತಿಳಿಸಿದ್ದ ಪೊಲೀಸರು ಅರೆಸ್ಟ್ ಮಾಡುವ ಸೂಚನೆ ಅರಿತು ಏಕಾಏಕಿ ರದ್ದು ಮಾಡಿದ್ದರು. ಆ ಬಳಿಕ ಎರಡೂ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಹಿರಿಯೂರಿನ ಗುಹಿಲಾಳ್ ಟೋಲ್ ಬಳಿ ವಶಕ್ಕೆ ಪಡೆದಿದ್ದು, ಇಂದು ಹಿರಿಯೂರಿನಿಂದ ಹೊಳೇನರಸೀಪುರಕ್ಕೆ ತಂದು ವಿಚಾರಣೆ ನಡೆಸಲಿದ್ದಾರೆ. ಆ ಬಳಿಕ ಕೋರ್ಟ್ಗೆ ಹಾಜರು ಮಾಡುವ ಪ್ರಕ್ರಿಯೆ ನಡೆಯಲಿದೆ.
ಕೃಷ್ಣಮಣಿ