ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗರೀಬ್ ಕಲ್ಯಾಣ ವರ್ಚುವಲ್ ಸಭೆಯಲ್ಲಿ ಕಲಬುರ್ಗಿಯ ಮಹಿಳೆಯನ್ನು ಹಾಡಿ ಹೊಗಳಿದ್ದಾರೆ.
ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಮಹಿಳೆ ಸಂತೋಷಿ ಜೊತೆಗೆ ಪ್ರಧಾನಿ ಮೋದಿ ಕೆಲಕಾಲ ಸಂವಾದ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸಂತೋಷಿ ತಮ್ಮ ತಾಯಿ ಅನಾರೋಗ್ಯ ಪೀಡಿತರಾಗಿದ್ದರು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ತಮ್ಮ ತಾಯಿಗೆ ಉಚಿತ ಚಿಕಿತ್ಸೆ ಹಾಗು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ಅಗ್ಗದ ದರಕ್ಕೆ ಔಷಧಿಗಳು ದೊರೆತವು ಎಂದು ಫಲಾನುಭವಿ ಕನ್ನಡದಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಇದನ್ನು ಪ್ರಧಾನಿಗೆ ಅರ್ಥವಾಗುವಂತೆ ಅಧಿಕಾರಿಯೊಬ್ಬರು ಹಿಂದಿಗೆ ತರ್ಜುಮೆ ಮಾಡಿದ್ದರು.
ನಂತರ ಮಾತನಾಡಿದ ಪ್ರಧಾನಿ ನಿಮ್ಮ ಮುಖದಲ್ಲಿರುವ ಸಂತಸವನ್ನು ನೋಡಿದರೆ ನಾನು ಹೇಳಬಲ್ಲೆ ನಾನು ಕರ್ನಾಟಕದಲ್ಲಿ ಇದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮ ಸಂತೋಷದಲ್ಲಿ ಭಾಗಿಯಾಗುತ್ತಿದೆ ಮತ್ತು ನಿಮ್ಮಗೆ ನಾಯಕಿಯಾಗುವ ಎಲ್ಲ ಲಕ್ಷಣಗಳಿವೆ ಎಂದು ಹೇಳಿದ್ದಾರೆ.











