ಬಿಜೆಪಿಯಲ್ಲಿ ಯಾರಾದರೂ ವಿವಾದಾತ್ಮಕ ನಾಯಕರು ಇದ್ದರೆ ಅದರ ಪ್ರಮುಖ ಸ್ಥಾನವನ್ನ ಸುಬ್ರಮಣಿಸ್ವಾಮಿ ವಹಿಸುವುದರಲ್ಲಿ ಅನುಮಾನವಿಲ್ಲ, ಕೆಲವೊಮ್ಮೆ ಸುಬ್ರಮಣಿಯನ್ ಸ್ವಾಮಿ ಸೃಷ್ಟಿಸುವ ವಿವಾದ ಅಷ್ಟಿಷ್ಟಲ್ಲ.. ಅವರು ಸೃಷ್ಟಿಸುವ ವಿವಾದದಿಂದ ಅವರ ಪಕ್ಷದ ಆಂತರಿಕದಲ್ಲಿ ಹಲವು ಭಿನ್ನಾಭಿಪ್ರಾಯಗಳು ಕೂಡ ಸೃಷ್ಟಿಯಾಗುತ್ತವೆ. ಹಲವು ಬಾರಿ ಅವರು ಪ್ರಧಾನಿ ಮೋದಿ ಅವರ ವಿರುದ್ಧವೇ ಪರೋಕ್ಷವಾಗಿ ಟೀಕಾ ಪ್ರಹಾರವನ್ನ ನಡೆಸಿರುವ ಉದಾಹರಣೆಗಳು ಸಾಕಷ್ಟು ಇವೆ.
ಇದೀಗ ಇಂತಹದ್ದೇ ಒಂದು ವಿವಾದವನ್ನು ಮತ್ತೊಮ್ಮೆ ಸುಬ್ರಮಣಿಯನ್ ಸ್ವಾಮಿ ಸೃಷ್ಟಿಸಿದ್ದಾರೆ ಆದರೆ ಈ ಬಾರಿ ಅವರು ನೇರವಾಗಿ ಪ್ರಧಾನಿ ಮೋದಿ ಅವರ ವಿರುದ್ಧ ಅಪಹಾಸ್ಯ ಮಾಡಿರುವುದು ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ”ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಗೇಲಿ ಮಾಡಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಭಾರತ ಆರ್ಥಿಕತೆಗೆ ಪ್ರತಿವರ್ಷ ಜಿಡಿಪಿಯ ಶೇ. 10 ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗ ಮತ್ತು ಬಡತನವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಆದರೆ, ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ. ಎಂದ ಪರೋಕ್ಷವಾಗಿ ಕೇಂದ್ರದ ಆರ್ಥಿಕ ನೀತಿಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿ ಹಾಗೂ ಹಣಕಾಸು ಇಲಾಖೆ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸುವ ಮೂಲಕ ಸುಬ್ರಮಣಿಸ್ವಾಮಿ ಆಗಾಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ.
ಇದೀಗ ಅವರ ಟೀಕೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದು ಪ್ರಧಾನಿ ಮೋದಿ ಅವರ ಬಗೆಗಿನ ಈ ಮಾತು ಸರಿಯಲ್ಲ ಬಿಜೆಪಿಯ ನಾಯಕರಾಗಿ ನೀವೇ ಈ ರೀತಿ ವರ್ತಿಸುವ ಪ್ರವೃತ್ತಿ ಬೆಳೆಸಿಕೊಂಡಿರುವುದು ನಿಜಕ್ಕೂ ದುರಂತ ಎಂದು ಮೋದಿ ಅಭಿಮಾನಿಗಳು ಟ್ವಿಟ್ ಮಾಡಿದ್ದಾರೆ