• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

PIL ʼನ್ಯಾಯಾಂಗ ಕ್ರಿಯಾಶೀಲತೆʼ ಗೆ‌ ಹಿಡಿದ ಕೈಗನ್ನಡಿ : ಅಟಾರ್ನಿ ಜನರಲ್‌ ವೇಣುಗೋಪಾಲ್

by
May 8, 2020
in ದೇಶ
0
PIL ʼನ್ಯಾಯಾಂಗ ಕ್ರಿಯಾಶೀಲತೆʼ ಗೆ‌ ಹಿಡಿದ ಕೈಗನ್ನಡಿ : ಅಟಾರ್ನಿ ಜನರಲ್‌ ವೇಣುಗೋಪಾಲ್
Share on WhatsAppShare on FacebookShare on Telegram

ʼಸಾರ್ವಜನಿಕ ಹಿತಾಸಕ್ತಿ ಅರ್ಜಿʼ (PIL)ಯನ್ನು ಆಧುನಿಕ ಪ್ರಜಾಪ್ರಭುತ್ವಕ್ಕೆ ಪರಿಚಯಿಸಿದ ಭಾರತದ ʼನ್ಯಾಯಾಂಗ ಕ್ರಿಯಾಶೀಲತೆʼಯು ಇತಿಹಾಸದಲ್ಲಿ ಮರೆಯಲಾಗದ್ದು ಎಂದು ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್‌ ಬೆಂಬಲಿತ ವಕೀಲರ ಸಂಘ ʼಅಖಿಲ ಭಾರತೀಯ ಅಧಿವಕ್ತ ಪರಿಷದ್‌ʼ ನಡೆಸಿದ ಪ್ರೊ. NR ಮಾಧವ ಮೆನನ್‌ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ಉನ್ನತ ನ್ಯಾಯಾಲಯಗಳು ದೇಶದ ಏಳಿಗೆಗೆ ಉತ್ತಮ ಕೆಲಸ ಮಾಡಿದೆ, ಅದರಲ್ಲೂ ಸುಪ್ರೀಂ ಕೋರ್ಟ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿರುವ ಅನಕ್ಷರಸ್ಥರ, ಹಿಂದುಳಿದ ವರ್ಗದವರ ಕಣ್ಣೀರು ಒರೆಸಿಕೊಳ್ಳುವ ಕೆಲಸ ಮಾಡಿದೆ. ಅದೆಷ್ಟೋ ಬಾರಿ ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಅಧಿಕಾರವಿದ್ದರೂ, ಅದು ತನ್ನ ನ್ಯಾಯಾಂಗ ಕ್ರಿಯಾಶೀಲತೆ ಹೊರತಾಗಿ ಕಾರ್ಯ ನಿರ್ವಹಿಸಿಲ್ಲ” ಎಂದರು.

ADVERTISEMENT

ತುರ್ತು ಪರಿಸ್ಥಿತಿಯ ನಂತರ ಸುಪ್ರೀಂ ಕೋರ್ಟ್‌ ಹೊಸ ಯುಗಕ್ಕೆ ಸಾಕ್ಷಿಯಾಯಿತು. ಪಿಐಎಲ್‌ ನಂತಹ ಮಹತ್ವದ ಹೊಸ ಬಗೆಯನ್ನ ಅಳವಡಿಸಿಕೊಂಡಿದ್ದು ನ್ಯಾಯಾಂಗ ಇತಿಹಾಸದಲ್ಲೇ ಒಂದು ದಿಟ್ಟ ನಿರ್ಧಾರ.

ಮಾಜಿ ಮುಖ್ಯ ನ್ಯಾಯಾಧೀಶ ಪಿಎನ್‌ ಭಗವತಿ ಕೂಡಾ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರ ʼನ್ಯಾಯಾಂಗ್‌ ಕ್ರಿಯಾಶೀಲತೆʼಗೆ ಧ್ವನಿಗೂಡಿಸಿ, ಸುಪ್ರೀಂ ಕೋರ್ಟ್‌ ನಿಂದಾಗಿಯೇ ʼನ್ಯಾಯಾಂಗ ಕ್ರಿಯಾಶೀಲತೆʼ ಜಗತ್ತಿನಲ್ಲಿಯೇ ಅತಿ ಹೆಚ್ಚು ಪವರ್‌ ಫುಲ್‌ ಆಗಿದೆ ಎಂದು ತಿಳಿಸಿದರು.

“ನಿವೃತ್ತ ಮುಖ್ಯ ನ್ಯಾಯಾಧೀಶರು ಹೇಳಿದ್ದರಿಂದ ನಾನು ಒಪ್ಪಿಕೊಳ್ಳಲೇಬೇಕು. ನಾನು ಕೂಡಾ ಸುಪ್ರೀಂ ಕೋರ್ಟ್‌ ಸರಕಾರದ ಅತ್ಯಂತ ಪವರ್‌ ಫುಲ್‌ ಅಂಗ ಅನ್ನೋದನ್ನ ಒಪ್ಪುತ್ತೇನೆ. ಯಾಕೆಂದರೆ ಇಲ್ಲಿ ನೀಡಲಾಗುವ ತೀರ್ಪುಗಳು ಒಂದೊಮ್ಮೆ ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೂ ಪ್ರಭಾವ ಬೀರುತ್ತದೆ ಎಂದು ವೇಣುಗೋಪಾಲ್‌ ತಿಳಿಸಿದರು.

ಅಲ್ಲದೇ ಸುಪ್ರೀಂ ಕೋರ್ಟ್‌ ಸರಕಾರದ ಇನ್ನಿತರ ಅಂಗಗಳ ಬಗ್ಗೆ ತೀರ್ಮಾನ ನೀಡುವ ಅಂತಗರ್ತ ಶಕ್ತಿಯನ್ನ ಹೊಂದಿದೆ, ಜೊತೆಗೆ ಶಾಸಕಾಂಗ ಹಾಗು ಕಾರ್ಯಾಂಗಗಳು ಸಮರ್ಪಕವಾಗಿಲ್ಲದಿದ್ದಾಗ ಅಸಾಂವಿಧಾನಿಕ ಎಂದು ಕ್ರಮಕೈಗೊಳ್ಳುವ ಅಧಿಕಾರವೂ ಹೊಂದಿದೆ. ಇದು ಪ್ರಜಾಪ್ರಭುತ್ವ ದೇಶವೊಂದರ ಸಂವಿಧಾನ ದೇಶದ ಉನ್ನತ ನ್ಯಾಯಾಲಯಕ್ಕೆ ನೀಡಿದ ನಿಜವಾದ ಶಕ್ತಿಯಾಗಿದೆ ಎಂದರು.

ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಈ ಮೂರು ಅಂಗಗಳು ಸಮಾನವಾದದು ಮತ್ತು ಸಮನ್ವಯತೆಯಿಂದ ಸಾಗಬೇಕಾದುದು ಅಗತ್ಯ. ಇಲ್ಲಿ ಯಾರೊಬ್ಬರೂ ಇನ್ನೊಬ್ಬ ಅಧಿಕಾರದ ಮೇಲೆ ಅತಿಕ್ರಮಣ ನಡೆಸುವಂತಿಲ್ಲ. ಇನ್ನು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೆನನ್‌, ಸೋನಿಯಾ ಮಾಥುರ್‌ ಅವರ ಸೇವೆಯ ಅಮೋಘ. ಮೆನನ್‌ ಓರ್ವ ಪ್ರಖ್ಯಾತ ಶಿಕ್ಷಣ ತಜ್ಞರಾಗಿದ್ದುಕೊಂಡು ಆಧುನಿಕತೆಯನ್ನ ಅಳವಡಿಸಲು ಪ್ರೇರೇಪಿಸಿದರು. 3 ವರುಷಗಳಿಗೊಮ್ಮೆ ನಡೆಯುತ್ತಿದ್ದ LLB ಕಾರ್ಯಕ್ರಮವನ್ನ ಐದು ವರುಷಕ್ಕೇರಿಸಿದವರು.

ಭಾರತೀಯ ಕಾನೂನು ಶೀಕ್ಷಣದ ಪಿತಾಮಹ ಅಂತಲೇ ಹೆಸರಾದ ಮೆನನ್‌ ಅವರು ಕಳೆದ 2019ರ ಮೇ ತಿಂಗಳಿನಲ್ಲಿ ವಿಧಿವಶರಾಗಿದ್ದಾರೆ.

Tags: ‌ supreme court‌ ಅಟಾರ್ನಿ ಜನರಲ್‌‌ ಕೆಕೆ ವೇಣುಗೋಪಾಲ್Atorny GeneralKK VenugopalRSSಆರ್‌ಎಸ್‌ಎಸ್‌ಸುಪ್ರೀಂ ಕೋರ್ಟ್
Previous Post

ಪತ್ರಕರ್ತನೊಬ್ಬನ ದೊಡ್ಡ ಶಕ್ತಿಯೇ ಆತನ ನೈತಿಕ ಸ್ಥೈರ್ಯ

Next Post

ಕೋವಿಡ್-19‌ ನಿಯಮ ಉಲ್ಲಂಘಿಸೋ ನ್ಯಾಯಾಲಯದ ಸಿಬ್ಬಂದಿಗಳಿಗೂ ಕಾನೂನು ಕ್ರಮದ ಎಚ್ಚರಿಕೆ

Related Posts

Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
0

16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ...

Read moreDetails

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025

CM Siddaramaiah: ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ..!!

July 12, 2025

Santhosh Lad: ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ..

July 12, 2025
Next Post
ಕೋವಿಡ್-19‌ ನಿಯಮ ಉಲ್ಲಂಘಿಸೋ ನ್ಯಾಯಾಲಯದ ಸಿಬ್ಬಂದಿಗಳಿಗೂ ಕಾನೂನು ಕ್ರಮದ ಎಚ್ಚರಿಕೆ

ಕೋವಿಡ್-19‌ ನಿಯಮ ಉಲ್ಲಂಘಿಸೋ ನ್ಯಾಯಾಲಯದ ಸಿಬ್ಬಂದಿಗಳಿಗೂ ಕಾನೂನು ಕ್ರಮದ ಎಚ್ಚರಿಕೆ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada