Sen ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ (Renukaswamy murder case) A1 ಆರೋಪಿಯಾಗಿರುವ ಪವಿತ್ರ ಗೌಡಗೆ (Pavitra gowda)ಹೈಕೋರ್ಟ್ ನಿಂದ ಜಾಮೀನು ಮಂಜೂರಾದ ಹಿನ್ನಲೆ ಪರಪ್ಪನ ಅಗ್ರಹಾರ (Parappana agrahara) ಜೈಲಿನಿಂದ ಇಂದು ಪವಿತ್ರಗೌಡ ರಿಲೀಸ್ ಆಗಿದ್ದಾರೆ.

ಬೆಳಗ್ಗೆ 9:40 ರ ಸುಮಾರಿಗೆ ಪವಿತ್ರ ಗೌಡ ಜೈಲಿನಿಂದ ಬಿಡುಗಡೆ ಆಗಿದ್ದಾರೆ.ಡಿಸೆಂಬರ್ 13 ರಂದು ಹೈಕೋರ್ಟ್ ನಿಂದ ಜಾಮೀನು ಮಂಜೂರು ಆಗಿತ್ತು.ನಿನ್ನೆ ಸೆಷನ್ಸ್ ಕೋರ್ಟ್ ನಲ್ಲಿ (Sessions court) ಜಾಮೀನಿಗೆ ಷರತ್ತು ಪೂರೈಸಲಾಗಿತ್ತು.
ಆದ್ರೆ ಜೈಲಿಗೆ ಕೋರ್ಟ್ ಆದೇಶ ಪ್ರತಿ ತಲುಪುವುದು ನಿನ್ನೆ ತಡವಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಜೈಲಿನಿಂದ ಪವಿತ್ರಗೌಡ ರಿಲೀಸ್ ಆಗಿದ್ದಾರೆ. ಆ ಮೂಲಕ ಬರೋಬ್ಬರಿ 6 ತಿಂಗಳ ಬಳಿಕ ಪವಿತ್ರ ಗೌಡ ಜೈಲು ವಾಸದಿಂದ ಹೊರ ಬಂದಿದ್ದಾರೆ.