ಸಂಸತ್ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, 32 ವಿಧೇಯಕಗಳನ್ನು ಮಂಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಆದರೆ, ಇಂದು ಮೊದಲ ದಿನದ ಅಧಿವೇಸನದಲ್ಲೇ ಹಲವು ವಿಷಯಗಳು, ಸಾರ್ವಜನಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೌದು, ಇಂದು ಮೊದಲ ದಿನವೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಜಿಎಸ್ಟಿ ಏರಿಕೆ,ಇನ್ನಿತರ ಸಮಸ್ಯೆಗಳನ್ನ ರಾಜ್ಯಸಭೆಯ ಮುಂದಿರಿಸಿ ಪ್ರತಿಭಟನೆ ಮಾಡಿದೆ. ಇದರ ನಡುವೆಯೇ ಸಭಾಧ್ಯಕ್ಷರು ಮಾತನಾಡಿ ಸದನವನ್ನ ನಾಳೆಗೆ ಮುಂದೂಡುವುದಾಗಿ ಹೇಳಿದ್ದಾರೆ.
ಸೋಮವಾರ ಅಂದರೆ ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಒಟ್ಟು 17 ಕೆಲಸದ ದಿನಗಳನ್ನು ಹೊಂದಿದ್ದು, ಆಗಸ್ಟ್ 12 ರವರೆಗೆ ನಡೆಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಬೆಳಿಗ್ಗೆ 11 ಗಂಟೆಯಿಂದ ಕರೆಯಲಾಗಿದೆ.