ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..
ಮುಂದಿನ ದಿನಗಳಲ್ಲಿ ಅನುಭವಿ 'ರಾಜಾಹುಲಿ' ಯಡಿಯೂರಪ್ಪ ಆಡುವ ಆಟಗಳು ತೀವ್ರ ಕುತೂಹಲ ಹುಟ್ಟಿಸಿವೆ. ಆ ಅರ್ಥದಲ್ಲಿ ನಿಜವಾದ ಆಟ ಈಗ ಆರಂಭವಾಗಿದೆ.
Read moreDetailsಮುಂದಿನ ದಿನಗಳಲ್ಲಿ ಅನುಭವಿ 'ರಾಜಾಹುಲಿ' ಯಡಿಯೂರಪ್ಪ ಆಡುವ ಆಟಗಳು ತೀವ್ರ ಕುತೂಹಲ ಹುಟ್ಟಿಸಿವೆ. ಆ ಅರ್ಥದಲ್ಲಿ ನಿಜವಾದ ಆಟ ಈಗ ಆರಂಭವಾಗಿದೆ.
Read moreDetailsಕೇರಳದಲ್ಲಿ ಕರೋನಾ ಸೋಂಕು ಕೈಮೀರಿ ಹೋಗುತ್ತಿರುವ ಸೂಚನೆಗಳು ಲಭಿಸುತ್ತಿವೆ. ದೇಶದ ಹಲವು ರಾಜ್ಯಗಳಲ್ಲಿ ಕೇವಲ ಮೂರಂಕಿಗಳಲ್ಲಿ ಪ್ರತಿದಿನದ ಕರೋನಾ ಪ್ರಕರಣಗಳು ವರದಿಯಾಗುತ್ತಿದ್ದರೆ, ಕೇರಳದಲ್ಲಿ ಮಾತ್ರ ಪ್ರತಿನಿತ್ಯ 10,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ವರ್ಷ ಕರೋನಾ ಸೋಂಕು ನಿಯಂತ್ರಣಕ್ಕೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಎರಡನೇ ಅಲೆಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಮಾತ್ರ ಕೇರಳ ವಿಫಲವಾಗಿರುವಂತೆ ಭಾಸವಾಗುತ್ತಿದೆ. ಈಗ ದೇಶದ 40% ಕೋವಿಡ್ ಪ್ರಕರಣಗಳು ಕೇವಲ ಕೇರಳದಲ್ಲಿವೆ. ಕಳೆದ ಒಂದು ವಾರದಲ್ಲಿ ಕೇರಳದಲ್ಲಿ 1,10,593 ಪ್ರಕರಣಗಳು ವರದಿಯಾಗಿವೆ. ಸದ್ಯಕ್ಕೆ ಕೇರಳದ ಪಾಸಿಟಿವಿಟಿ ರೇಟ್ 11%ದಷ್ಟಿದೆ. ಲಸಿಕಾಕರಣದ ವಿಚಾರಕ್ಕೆ ಬಂದಾಗ ಕೇರಳದಲ್ಲಿ ದೇಶದ ಉಳಿದೆಲ್ಲಾ ರಾಜ್ಯಗಳಿಗಿಂತ ತ್ವರಿತ ಗತಿಯಲ್ಲಿ ಲಸಿಕಾ ಅಭಿಯಾನ ಸಾಗುತ್ತಿದೆ. ಹದಿನೆಂಟು ವರ್ಷ ಮೇಲ್ಪಟ್ಟ 20.9% ಜನರಿಗೆ ಈಗಾಗಲೇ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗಿದೆ. ಆದರೆ, ICMR ನಡೆಸಿರುವ ಸಿರೋ ಸರ್ವೆಯ ಪ್ರಕಾರ, ರಾಜ್ಯದಲ್ಲಿ ಲಸಿಕೆ ಪಡೆದ ಕೇವಲ 42.7% ಜನರಲ್ಲಿ ಮಾತ್ರ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಕರೋನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ತಿರುವಂತನಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪ ಅಧೀಕ್ಷಕರಾದ ಡಾ. ಸಂತೋಷ್ ಕುಮಾರ್ ಅವರು, ಕಳೆದ ಆರು ವಾರಗಳಿಂದ ಪಾಸಿಟಿವಿಟಿ ರೇಟ್ 10-12%ದಷ್ಟಿದೆ. ಪ್ರತಿದಿನ 10,000-15000ಪ್ರಕರಣಗಳು ವರದಿಯಾಗುತ್ತಿದೆ. ಆದರೆ, ಕರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿಂದೆ 800-1000ದಷ್ಟಿದ್ದ ಈ ಸಂಖ್ಯೆ, ಈಗ 250-300ಕ್ಕೆ ಬಂದು ನಿಂತಿದೆ, ಎಂದು ಹೇಳಿದ್ದಾರೆ. “ಲಸಿಕೆಯ ಪ್ರಭಾವವನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಉದಾಹರಣೆಯೆಂದರೆ, 50% ವೆಂಟಿಲೇಟರ್ ಮಾತ್ರ ಬಳಸಲಾಗುತ್ತಿದೆ, 50%ದಷ್ಟು ಐಸಿಯು ಮಾತ್ರ ಭರ್ತಿಯಾಗಿದೆ. ಹೀಗಾಗಿ ಹೆಚ್ಚಿನ ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶ್ಪತ್ರೆಗೆ ಬರುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ. ಇನ್ನು NDTV ಜತೆ ಮಾತನಾಡಿರುವ ಕೇರಳದ ಆರೋಗ್ಯ ಮಂತ್ರಿಯಾಗಿರುವ ವೀಣಾ ಜೋರ್ಜ್ ಅವರು “ಮೊದಲನೇ ಅಲೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಇದು ಆತಂಕಪಡಬೇಕಾದ ವಿಚಾರವಲ್ಲ. ಸೋಂಕಿನ ತೀವ್ರತೆ ಗಣನೀವಾಗಿ ಇಳಿಕೆಯಾಗಿದೆ. ಆದರೆ, ಎರಡನೇ ಅಲೆಯ ಕೊನೆಗೊಳ್ಳುವಿಕೆ ಸ್ವಲ್ಪ ಮುಂದೂಡಲ್ಪಟ್ಟಿದೆ,” ಎಂದು ಅವರು ಹೇಳಿದ್ದಾರೆ. ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯ ಭಾಗದಲ್ಲಿ ಕೇರಳವನ್ನು ಅಪ್ಪಳಿಸಿತ್ತು, ಮೇ 12ರ ವೇಳೆಗೆ ಅದು ಉತ್ತುಂಗಕ್ಕೆ ಏರಿತ್ತು. ಪ್ರತಿ ದಿನ 43,000 ಪ್ರಕರಣಗಳು ವರದಿಯಾಗುತ್ತಿದ್ದವು. ಈಗ 10,000 ಪ್ರಕರಣಗಳು ವರದಿಯಾಗುತ್ತಿದೆ. ಇದು ನಮ್ಮ ಯೋಜನೆಯ ಭಾಗವೇ ಆಗಿತ್ತು. ನಾವು ಎರಡನೇ ಅಲೆಯು ಉತ್ತುಂಗಕ್ಕೆ ಏರುವ ಸಮುಯವನ್ನು ಮುಂದೂಡಲು ಯತ್ನಿಸಿದೆವು. ಈಗ ಅದರ ಕೊನೆಯೂ ಮುಂದೂಡಲ್ಪಡುತ್ತಿದೆ, ಎಂದು ವಿಶ್ಲೇಷಿಸಿದ್ದಾರೆ. ಜನಸಂಖ್ಯೆಯ ಪ್ರಮಾಣ ದೇಶದ ಸರಾಸರಿಗಿಂತ ಕೇರಳದಲ್ಲಿ ದುಪ್ಪಟ್ಟಿದೆ. ಇದರೊಂದಿಗೆ, ರಾಜ್ಯದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗಿರುವ ಅತೀ ದೊಡ್ಡ ಸವಾಲುಗಳು, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ
Read moreDetailsಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರೂ ಬಿ.ಎಸ್. ಯಡಿಯೂರಪ್ಪ ತಮ್ಮ ಬೆಂಬಲಿಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸೋತು ಗೆದ್ದಿದ್ದಾರೆ. ರಾಜಕೀಯದಲ್ಲಿ 'ರಾಜಿ' ಎಂಬುದು ಬಹಳ ಮಹತ್ವವಾದುದು....
Read moreDetailsಇವತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಅವರ ತಂದೆ ಶ್ರೀ ಎಸ್.ಆರ್.ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಆಗಸ್ಟ್ 13, 1988ರಿಂದ ಏಪ್ರಿಲ್...
Read moreDetailsಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಮುಂದಿನ ಸಿಎಂ ಯಾರು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಬಿ ಎಸ್ ಯಡಿಯೂರಪ್ಪ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada
© 2024 www.pratidhvani.com - Analytical News, Opinions, Investigative Stories and Videos in Kannada