• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಒಮಿಕ್ರಾನ್ ವೈರಸ್ ಭೀತಿ : ಮತ್ತೆ ಎರಡನೇ ಅಲೆ ಕರೋನಾ ನಿಯಮಜಾರಿ ಮಾಡಿದ ಬಿಬಿಎಂಪಿ!

ಕರ್ಣ by ಕರ್ಣ
November 30, 2021
in ದೇಶ, ವಿದೇಶ
0
ಒಮಿಕ್ರಾನ್ ವೈರಸ್ ಭೀತಿ : ಮತ್ತೆ ಎರಡನೇ ಅಲೆ ಕರೋನಾ ನಿಯಮಜಾರಿ ಮಾಡಿದ ಬಿಬಿಎಂಪಿ!
Share on WhatsAppShare on FacebookShare on Telegram

ಕರೋನಾದ ಹೊಸ ತಳಿ ಇದೀಗ ಮತ್ತೆ ಬಲಾಢ್ಯ ರಾಷ್ಟಗಳನ್ನ ಗಢಗಢ ನಡಿಗುಸುವಂತೆ ಮಾಡಿದೆ. 14 ರಾಷ್ಟಗಳಿಗೆ ಒಮಿಕ್ರಾನ್ ವೈರಸ್ ವಕ್ಕರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಒಂದು ಕಡೆ ಚಿಂತೆಗೆ ಬಿದ್ದಿದ್ದರೆ ಇತ್ತ ಬಿಬಿಎಂಪಿ ಆಗಲೇ ಫಿಲ್ಡಿಗಿಳಿದು ಮೂರನೇ ಅಲೆ ಬರದಂತೆ ತಡೆಯಲು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ನಾಳೆ ಆರೋಗ್ಯ ಸಚಿವ ಸುಧಾಕರ್ ಇಂದು ಮಂಗಳವಾರ ಮಹತ್ವದ ಮಹತ್ವದ ಸಭೆಯನ್ನೂ ನಡೆಸಲಿದ್ದಾರೆ.

ADVERTISEMENT

ಹೊಸ ಅವತಾರದಲ್ಲಿ ವಕ್ಕರಿಸಿದ ಕರೋನಾ.. ಒಮಿಕ್ರಾನ್ ಕಂಟಕ!

ಇಡೀ ಮನುಕುಲದಲ್ಲೇ ಇದೀಗ ಹೊಸ ತಳಿ ವೈರಸ್ ಸದ್ದು ಶುರುವಾಗಿದೆ. ದಿನೇ ದಿನೇ ಹೊಸ ತಳಿ ಒಮಿಕ್ರಾನ್ ವೈರಸ್ ತನ್ನ ಕಬಂಧಬಾಹುಗಳನ್ನ ಚಾಚತೊಡಗಿದೆ. ಒಟ್ಟು 14 ದೇಶಗಳಿಗೆ ಈಗಾಗಲೇ ವಕ್ಕರಿಸಿದ್ದು, ಇದೀಗ ಗಾರ್ಡನ್ ಸಿಟಿಗೆ ಕಂಟವಾಗಲಿದೆಯಾ ಅನ್ನೋ ಭೀತಿ ಎಲ್ಲರಲ್ಲೂ ಶುರುವಾಗಿದೆ. ದಕ್ಷಿಣ ಆಫ್ರಿಕಾದಿಂದ 95 ಪ್ರಯಾಣಿಕರು ರಾಜಧಾನಿಗೆ ಕಾಲಿರಿಸಿದ್ದು, ಅವರುಗಳಲ್ಲಿ ಇಬ್ಬರಿಗೆ ಕರೋನಾ ಪಾಸಿಟಿವ್ ಎಂದು ದೃಢವಾಗಿದೆ. ಈ ಮೂಲಕ ಸರ್ಕಾರಗಳಿಗೂ ತಲೆ ನೋವು ಶುರುವಾಗಿದೆ. ಪಾಸಿಟಿವ್ ಬಂದಿರುವ ಪ್ರವಾಸಿಗರಿಗೆ ಕರೊನಾ ಟೆಸ್ಟ್ ಮಾಡಲಾಗಿದ್ದು, ಸ್ಯಾಂಪಲ್ಗಳನ್ನ ಜೆನೆಮಿಕ್ ಸೀಕ್ವೆನ್ಸಿಂಗ್ಗೆ ಕಳಸಲಾಗಿದೆ. ಇನ್ನೂ ಇವ್ರ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳ ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ತಜ್ಞರ ಜೊತೆ ಆರೋಗ್ಯ ಸಚಿವರು ಮಹತ್ವದ ಸಭೆ!

ಹೊಸ ತಳಿ ಬಗ್ಗೆ ತಲೆ ಕೆಡಸಿಕೊಂಡಿರೋ ರಾಜ್ಯ ಸರ್ಕಾರ ಇದನ್ನ ಹೇಗಾದ್ರು ಮಾಡಿ ರಾಜ್ಯದ ಗಡಿಯಿಂದಾಚೆಗೆ ಇಡಬೇಕೆಂದು ಸರ್ಕಾರ ಕಸರತ್ತು ನಡೆಸುತ್ತಿದೆ. ಹೀಗಾಗಿ ಆರೋಗ್ಯ ಸಚಿವರು ತಾಂತ್ರಿಕ ಸಲಹಾ ಸಮಿತಿ ಜೊತೆ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ನಾಳೆ ಅಧಿಕಾರಿಗಳ ಜೊತೆ ಸುಧಿರ್ಘವಾಗಿ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಮಾತನಾಡಿದ್ದಾರೆ. ಅವರನ್ನು ಕೂಡ ನಾಳೆ ಸಭೆಗೆ ಕರೆದಿದ್ದೇನೆ ಎಂದರು. ಜೊತೆಗೆ ಹೊಸ ತಳಿ ಹೇಗೆ ಕೆಲಸ ಮಾಡುತ್ತೆ ಅಂತ ಡಿಸೆಂಬರ್ 1ಕ್ಕೆ ಗೊತ್ತಾಗಲಿದೆ. ಅಲ್ದೆ ಅಂತರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೂ ಬರ್ತಿವೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನುಳಿದಂತೆ ಲಾಕ್ಡೌನ್ ಬಗ್ಗೆ ಸರ್ಕಾರ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಈಗಾಗಲೇ ಜನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಇದಿರಿಂದ ಚೇತರಿಕೆ ಕಂಡಿಲ್ಲ. ಜೊತೆಗೆ ಉದ್ಯೋಗ ಕಳೆದುಕೊಂಡಿದ್ದು, ಇನ್ನೂ ಉದ್ಯೋಗ ಸಿಗದೆ ಪರದಾಟದಲ್ಲಿದ್ದಾರೆ. ಸದ್ಯಕ್ಕೆ ಲಾಕ್ಡೌನ್ ಇಲ್ಲ ಎಂದು ತಿಳಿಸಿದರು.

ಒಮಿಕ್ರಾನ್ ಬಡಿದೋಡಿಸಲು ಬಿಬಿಎಂಪಿ ಕಸರತ್ತು!

ಇನ್ನು ಈ ಡೆಡ್ಲಿ ಒಮಿಕ್ರಾನ್ನ ಕೆಂಗಣ್ಣು ಬೆಂಗಳೂರಿನ ಮೇಲೆ ಬೀಳದಿರಲಿ ಎಂಬ ಆಶಯದಿಂದ ಬಿಬಿಎಂಪಿ ಈಗೀಂದೀಗಲೇ ಫೀಲ್ಡಿಗಿಳಿದಿದೆ. ಎರಡನೇ ಅಲೆಯಲ್ಲಿ ನಡೆಸುತ್ತಿದ್ದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.

  • ಮೊಬೈಲ್ ಟೆಸ್ಟಿಂಗ್ ಸೆಂಟರ್ ಪುನರಾರಂಭ
  • ಮೊಬೈಲ್ ಲಸಿಕಾ ಕೇಂದ್ರಗಳ ಹೆಚ್ಚಳ
  • ಕೇರಳ ವಿಧ್ಯಾರ್ಥಿಗಳಿರುವ ಹಾಸ್ಟೆಲ್, ಪಿಜಿಗಳ ಮೇಲೆ ನಿಗಾ
  • ಬೆಂಗಳೂರು ಗಡಿಭಾಗದಲ್ಲಿ 24*7 ಕಟ್ಟೆಚ್ಚರ
  • ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್ಸ್ ನಿಯೋಜನೆ
  • ಸೋಂಕು ಪತ್ತೆಯಾದ ಮನೆ ಹಾಗೂ ವಠಾರ ತಕ್ಷಣವೇ ಸ್ಯಾನಿಟೈಸ್
  • ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ
  • ಹೋಟೇಲು, ರೆಸ್ಟೋರೆಂಟ್ಗಳು, ಚಿತ್ರಮಂದಿರಗಳ ಸಿಬ್ಬಂದಿಗಳ ಸಂಪೂರ್ಣ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸುವುದು
  • ನಗರದ ರೈಲ್ವೇ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಆರೋಗ್ಯ ಸಿಬ್ಬಂದಿಗಳು
  • ವಾರ್ಡ್ ಮಟ್ಟದಲ್ಲಿ ಆಟೋಗಳಿಗೆ ಧ್ವನಿ ವರ್ಧಕ ಕಟ್ಟಿ ಒಮಿಕ್ರಾನ್ ಬಗ್ಗೆ ತಿಳುವಳಿಕೆ

ಒಟ್ಟಾರೆ ದಕ್ಷಿಣ ಆಫ್ರಿಕಾದ ಈ ವೈಸರ್ ಮತ್ತೆ ಎರಡು ವರ್ಷದ ಕಹಿ ಘಟನೆ ನೆನಪು ಮಾಡ್ತಿದ್ದು, ನೊಂದು ಬೆಂದ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ನಾಳೆ ಸಭೆ ಬಳಿಕ ಮತ್ತೆ ಒಮಿಕ್ರಾನ್ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡುವ ಸಾಧ್ಯತೆಯೂ ಇದೆ.

Tags: BJPCongress PartyCovid 19ಎರಡನೇ ಅಲೆಒಮಿಕ್ರಾನ್ ವೈರಸ್ನರೇಂದ್ರ ಮೋದಿಬಿಜೆಪಿಬಿಬಿಎಂಪಿ
Previous Post

ಕೇಂದ್ರದಿಂದ ಕರ್ನಾಟಕಕ್ಕೆ 3,528 ಕೋಟಿ ರುಪಾಯಿ ಜಿಎಸ್‌ಟಿ ಪರಿಹಾರ ಬಾಕಿ

Next Post

ಅಂದು ಪೆರುಮಾಳ್ ಇಂದು ಫಾರೂಖಿ ನಾಳೆ..? : ಅಕ್ಷರ, ಹಾಸ್ಯ, ವ್ಯಂಗ್ಯ, ವಿಡಂಬನೆ ಎಲ್ಲವೂ ದ್ವೇಷಕ್ಕೆ ಬಲಿಯಾಗುತ್ತಿದೆ!

Related Posts

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್
ರಾಜಕೀಯ

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

by ಪ್ರತಿಧ್ವನಿ
January 18, 2026
0

ಅಮೆರಿಕಾ: ಭಾರತಕ್ಕೆ ತೆರಿಗೆ ಶಾಕ್ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಇತರ ದೇಶಗಳಿಗೂ ತೆರಿಗೆಯ ಏಟು ಕೊಟ್ಟಿದ್ದಾರೆ‌. ಬೆಂಗಳೂರು : ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ...

Read moreDetails
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
Next Post
ಅಂದು ಪೆರುಮಾಳ್ ಇಂದು ಫಾರೂಖಿ ನಾಳೆ..? : ಅಕ್ಷರ, ಹಾಸ್ಯ, ವ್ಯಂಗ್ಯ, ವಿಡಂಬನೆ ಎಲ್ಲವೂ ದ್ವೇಷಕ್ಕೆ ಬಲಿಯಾಗುತ್ತಿದೆ!

ಅಂದು ಪೆರುಮಾಳ್ ಇಂದು ಫಾರೂಖಿ ನಾಳೆ..? : ಅಕ್ಷರ, ಹಾಸ್ಯ, ವ್ಯಂಗ್ಯ, ವಿಡಂಬನೆ ಎಲ್ಲವೂ ದ್ವೇಷಕ್ಕೆ ಬಲಿಯಾಗುತ್ತಿದೆ!

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada