ನೂಪುರ್ ಶರ್ಮಾ ಧರ್ಮನಿಂದನೆ ಮಾಡಿದ್ದಾಳೆ, ಆಕೆಗೆ ಶಿಕ್ಷೆಯಾಗಬೇಕು ಎಂದು ಅಲ್ ಖೈದಾ ಹೇಳಿದೆ. ಇದಕ್ಕಾಗಿ ಮುಸ್ಲಿಮರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರೇರೇಪಿಸಿದೆ.. ಅಲ್ ಖೈದಾ ಮುಸ್ಲಿಮರನ್ನು ಜಿಹಾದ್ ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳುವಂತೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ತನ್ನ ಪ್ರಚಾರ ನಿಯತಕಾಲಿಕೆ ‘ನವೈ ಘಜ್ವಾ-ಎ-ಹಿಂದ್’ ನಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಬಗ್ಗೆ ವಿಷಪೂರಿತ ಹೇಳಿಕೆಗಳನ್ನು ನೀಡಲಾಗಿದೆ.
ನೂಪುರ್ ಶರ್ಮಾ ಧರ್ಮನಿಂದನೆ ಮಾಡಿದ್ದಾಳೆ, ಆಕೆಗೆ ಶಿಕ್ಷೆಯಾಗಬೇಕು ಎಂದು ಅಲ್ ಖೈದಾ ಹೇಳಿದೆ. ಇದಕ್ಕಾಗಿ ಮುಸ್ಲಿಮರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರೇರೇಪಿಸಿದೆ. ಅಲ್ ಖೈದಾ ಮುಸ್ಲಿಮರನ್ನು ಜಿಹಾದ್ ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳುವಂತೆ ಹೇಳಿದೆ. ಅದರೊಂದಿಗೆ ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಅಂಶವನ್ನೂ ಕೂಡ ಅಲ್ಖೈದಾ ಪುನರುಚ್ಚರಿಸಿದೆ. ಈ ಹಿಂದೆ ದೆಹಲಿ, ಮುಂಬೈ, ಯುಪಿ ಮತ್ತು ಗುಜರಾತ್ನಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿತ್ತು.
ಅಲ್ಖೈದಾ ನೀಡಿದ ಈ ಬೆದರಿಕೆ ಬಳಿಕ, ಗುಪ್ತಚರ ಇಲಾಖೆಯು ನೂಪುರ್ ಶರ್ಮ ಅವರ ಮೇಲಿನ ಭದ್ರತೆಯನ್ನು ಹೆಚ್ಚಳ ಮಾಡಿದ್ದವು. ಪ್ರಸ್ತುತ ನೂಪುರ್ ಶರ್ಮ ಅವರಿಗೆ ಗುಪ್ತ ಸ್ಥಳದಲ್ಲಿ ಪೊಲೀಸ್ ಭದ್ರತೆಯಲ್ಲಿದ್ದಾರೆ. ಇತ್ತೀಚಿನ ಜೀವ ಬೆದರಿಕೆಯ ಪ್ರಕರಣಗಳ ಬಳಿಕ ಸರ್ಕಾರ, ಆಕೆಗೆ ನೀಡಲಾಗಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಿದೆ.

ಕೆಲವು ದಿನಗಳ ಹಿಂದೆ ಟಿವಿ ಚರ್ಚೆಯ ಸಂದರ್ಭದಲ್ಲಿ ಹಿಂದುತ್ವವಾದಿಯೊಬ್ಬರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಅಲ್-ಖೈದಾ ಜೂನ್ನಲ್ಲಿ ಹೇಳಿತ್ತು. ಅವರ ಹೇಳಿಕೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿವೆ. ಮುಂದೆ ನಾವು ಪ್ರವಾದಿಯವರ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅಲ್ ಖೈದಾ ಹೇಳಿದೆ. ನಾವು ನಮ್ಮ ದೇಹ ಅಥವಾ ನಮ್ಮ ಮಕ್ಕಳ ದೇಹಕ್ಕೆ ಸ್ಪೋಟಕಗಳನ್ನು ಕಟ್ಟಿಕೊಂಡು ಇಂಥ ವ್ಯಕ್ತಿಗಳು ಛಿದ್ರಛಿದ್ರವಾಗುವಂತೆ ನೋಡಿಕೊಳ್ಳುತ್ತೇವೆ