ಮಂಡ್ಯ (Mandya): ನಾನು ಯಾವುದೇ ಚುನಾವಣಾ (Election) ಪ್ರಚಾರಕ್ಕೆ ಹೋಗಲ್ಲ ಎಂದು ನಟ ಡಾಲಿ ಧನಂಜಯ್ (Daali Dhananjay) ಹೇಳಿದ್ದಾರೆ.
ಮಂಡ್ಯದ (Mandya) ಕೆರಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ನಾನು ಭಾಗವಹಿಸಲ್ಲ ಸ್ಟಾರ್ ಚಂದ್ರು (star Chandru) ಗೆ ಒಳ್ಳೆಯದಾಗಲಿ ಎಂದಿದ್ದಾರೆ.
ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಸದ್ಯಕ್ಕೆ ಯಾವುದೇ ಐಡಿಯಾ ನನ್ನಲಿಲ್ಲ, ಪದೇ ಪದೇ ಕೇಳಬೇಡಿ.
ನನ್ನದು ಸಿನಿಮಾ, ಸಿನಿಮಾ ನನ್ನ ಬದುಕು ಅಷ್ಟೇ ಎಂದು ಹೇಳಿದ್ದಾರೆ.
ಮಹಾ ಶಿವರಾತ್ರಿ (Shivaratri) ದಿನ ಒಳ್ಳೆಯ ಕಾರ್ಯಕ್ರಮಕ್ಕೆ ಕರೆದಿದ್ರು ಬಂದೆ ಅಷ್ಟೆ. ಪಂಚಲಿಂಗೇಶ್ವರನ ದರ್ಶನ ಪಡೆದೆ, ಶಿವರಾತ್ರಿ ಸ್ಪೆಷಲ್ ಒಳ್ಳೆಯ ಕಾರ್ಯಕ್ರಮ ಎಂದರು.
ಸಿಎಂ ಸಿದ್ದರಾಮಯ್ಯ (Siddaramaih) ಹಾಗೂ ಡಾಲಿ ಧನಂಜಯ್ ಭೇಟಿ ವಿಚಾರ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಲನಚಿತ್ರೋತ್ಸವದ ಹಿನ್ನಲೆಯಲ್ಲಿ ಭೇಟಿ ಮಾಡಿದ್ದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯಲ್ಲಿ ಯಾರೆಲ್ಲ ಸ್ಪರ್ಧೆ ಮಾಡ್ತಿದ್ದಾರೆ ಅವರಿಗೆಲ್ಲ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ. ಅಧಿಕಾರಕ್ಕೆ ಬರುವವರು ಒಳ್ಳೆಯ ಆಡಳಿತ ಕೊಡಿ, ವಿರೋಧ ಪಕ್ಷಕ್ಕೆ ಯಾರು ಬರ್ತಾರೆ ಅವರು ಕೂಡ ಒಳ್ಳೆಯ ಕೆಲಸ ಮಾಡಲಿ. ಈ ಸಮಾಜದಲ್ಲಿ ಎರಡೂ ಇಂಪಾರ್ಟೆಂಟ್ ಒಳ್ಳೆಯದಾಗಲಿ. ಚುನಾವಣೆ ಪ್ರಚಾರ ಮಾಡಲ್ಲ, ಎಂಎಲ್ ಎ ಚುನಾವಣಾ ವೇಳೆ ಕರೆದಿದ್ರು ನಾನು ಹೋಗಿಲ್ಲ ಎಂದರು.
#karnataka #Mandya #DalliDhananjay #loksabhaelection #campaign