• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಸಿಕೆಗಳ ಲೆಕ್ಕದಲ್ಲಿ ಗೋಲ್ ಮಾಲ್; ಉತ್ಪಾದಿಸುತ್ತಿರುವ ಮತ್ತು ಜನರಿಗೆ ನೀಡುತ್ತಿರುವ ಲೆಕ್ಕಕ್ಕೆ ಹೋಲಿಕೆಯೇ ಇಲ್ಲ

ಯದುನಂದನ by ಯದುನಂದನ
May 25, 2021
in ದೇಶ
0
ಲಸಿಕೆಗಳ ಲೆಕ್ಕದಲ್ಲಿ ಗೋಲ್ ಮಾಲ್; ಉತ್ಪಾದಿಸುತ್ತಿರುವ ಮತ್ತು ಜನರಿಗೆ ನೀಡುತ್ತಿರುವ ಲೆಕ್ಕಕ್ಕೆ ಹೋಲಿಕೆಯೇ ಇಲ್ಲ

Image of Hand holds Coronavirus Covid-19 Vaccine glass bottle.

Share on WhatsAppShare on FacebookShare on Telegram

ದೇಶದಲ್ಲಿ ಈಗ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಕರೋನಾ ಲಸಿಕೆಗಳಿಲ್ಲ. ಆದರೂ ಕೇಂದ್ರ ಸರ್ಕಾರ ವ್ಯವಸ್ಥಿತವಾದ ಯೋಜನೆ ಹಮ್ಮಿಕೊಳ್ಳದೆ 18ರಿಂದ 45 ವರ್ಷದವರಿಗೆ ಲಸಿಕೆ ಕೊಡುವುದಾಗಿ ಘೋಷಿಸಿತು. ಮೇ 1ರಿಂದ ಈ ಕೆಲಸ ಆರಂಭವಾಯಿತು. ಆದರೀಗ ಲಸಿಕೆಗಳ‌ ಕೊರತೆಯಾಗಿದೆ. ಮೂರನೇ ಹಂತದ ಅಭಿಯಾನ ಕುಂಟುತ್ತಾ ಸಾಗಿದೆ. ಇದೂ ಸಾಲದೆಂಬಂತೆ ಕೇಂದ್ರ ಸರ್ಕಾರ ’18ರಿಂದ 45 ವಷರ್ದವರು ನೇರವಾಗಿ ವ್ಯಾಕ್ಸಿನ್ ಸೆಂಟರ್ ಗೆ ಹೋಗಿ ಪಡೆಯಬಹುದು’ ಎಂಬ ಆದೇಶ ಹೊರಡಿಸಿ ಸಮಸ್ಯೆಯ ಜೊತೆಗೆ ಗೊಂದಲವನ್ನೂ ಸೃಷ್ಟಿಸಿದೆ. ಕರೋನಾ ಲಸಿಕೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯದ ಬಗ್ಗೆ ಕೆಲವು ರಾಜ್ಯ ಸರ್ಕಾರಗಳು ನಿರಂತರವಾಗಿ ಅಳಲು ತೋಡಿಕೊಳ್ಳುತ್ತಿವೆ. ಫೀಜರ್ ಮತ್ತು ಮಾಡೆರ್ನಾ ವಿದೇಶಿ ಕಂಪನಿಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ಕೊಡುವುದಿಲ್ಲ ಎಂದಿವೆ. ಹೀಗೆ ಲಸಿಕೆಗಳ ಸಮಸ್ಯೆ ಸಂಕೀರ್ಣವಾಗಿದೆ.‌ ಇದೆಲ್ಲದರ ನಡುವೆ ಲಸಿಕೆಗಳ ಉತ್ಪಾದನೆ ಮತ್ತು ವಿತರಣೆ ಬಗ್ಗೆ ಅನುಮಾನಗಳು ಹುಟ್ಟುಕೊಂಡಿವೆ.

ADVERTISEMENT

ಲಸಿಕೆ ಕೊರತೆ ಸಮಸ್ಯೆ ತಾರಕಕ್ಕೇರಿ, ಕೇಂದ್ರ ಸರ್ಕಾರ ಅನುಸರಿಸುತ್ತಿದ್ದ ತಾರತಮ್ಯ ಮಿತಿ ಮೀರಿದಾಗ ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯ ಸ್ವಯಂ ದೂರು ದಾಖಲಿಸಿಕೊಂಡಿತ್ತು. ಲಸಿಕೆ ವಿತರಣೆಯು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಸಮಿತಿಯೊಂದನ್ನೂ ರಚಿಸಿತ್ತು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿತ್ತು.‌ ಈ ದೂರಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ‘ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸೇರಿ ಪ್ರತಿ ತಿಂಗಳು 8ರಿಂದ 8.5 ಕೋಟಿ ಲಸಿಕೆ ಉತ್ಪಾದನೆ ಆಗಲಿದೆ. ಆ ಲಸಿಕೆಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುವುದು’ ಎಂದು ಹೇಳಿತ್ತು.

ಇದಲ್ಲದೆ ಕೋವಿಶೀಲ್ಡ್ ಉತ್ಪಾದಿಸುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಿಂಗಳಿಗೆ 6ರಿಂದ 7 ಕೋಟಿ ಲಸಿಕೆ ಉತ್ಪಾದಿಸುವುದಾಗಿ ಅಧಿಕೃತವಾಗಿ ತಿಳಿಸಿದೆ. ಭಾರತ್ ಬಯೋಟೆಕ್ ಮುಖ್ಯಸ್ಥ ಡಾ. ರಾಚೆಸ್ ಎಲಾ ಅವರು ‘ತಮ್ಮ ಕಂಪನಿ ತಿಂಗಳಿಗೆ 2 ಕೋಟಿ ಕೋವ್ಯಾಕ್ಸಿನ್ ಉತ್ಪಾದಿಸಲಿದೆ’ ಎಂದು ಆನ್ ರೆಕಾರ್ಡ್ ಹೇಳಿದ್ದರು. ಅಂದರೆ ಎರಡೂ ಸಂಸ್ಥೆಗಳಿಂದ ಪ್ರತಿ ತಿಂಗಳು 8ರಿಂದ 8.5 ಕೋಟಿ ಕರೋನಾ ಲಸಿಕೆ ಉತ್ಪಾದನೆ ಆಗಬೇಕು. ಇದಲ್ಲದೆ ಭಾರತವು ರಷ್ಯಾದಿಂದ 30 ಲಕ್ಷ ಸ್ಪುಟ್ನಿಕ್ ವಿ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ. ಅದನ್ನು ಬಿಟ್ಟು ಹಾಕಿದರೂ ಪ್ರತಿ ದಿನ ಭಾರತದಲ್ಲಿ 27.4 ಲಕ್ಷ ಕೋರೋನಾ ಲಸಿಕೆಗಳ ಉತ್ಪಾದನೆ ಆಗಬೇಕು ಮತ್ತು ಅವುಗಳನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಇದೇ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ಎದುರು 8 ರಿಂದ 8.5 ಕೋಟಿ ಲಸಿಕೆ ಉತ್ಪಾದನೆ ಮತ್ತು ವಿತರಣೆ ಬಗ್ಗೆ’ ಪ್ರಮಾಣ ಪತ್ರ ಸಲ್ಲಿಸಿತ್ತು.

ಆದರೆ ಮೇ ತಿಂಗಳಾಂತ್ಯದವರೆಗೆ ಲಭ್ಯವಾಗುತ್ತಿರುವ ಕರೋನಾ ಲಸಿಕೆಗಳ ಸಂಖ್ಯೆ ಕೇವಲ 5 ಕೋಟಿ. ಕೇಂದ್ರ ಸರ್ಕಾರ ಅಧಿಕೃತವಾಗಿ ಅಭಿವೃದ್ಧಿಪಡಿಸಿರುವ ಕೋವಿನ್ ಆ್ಯಪ್ ಪ್ರಕಾರ ಪ್ರತಿದಿನ ಲಭ್ಯ ಆಗುತ್ತಿರುವುದು ಮತ್ತು ವಿತರಣೆ ಆಗುತ್ತಿರುವುದು 16.2 ಲಕ್ಷ ಕರೋನಾ ಲಸಿಕೆಗಳು ಮಾತ್ರ. ಈ ನಡುವೆ ಮೇ 16ರಿಂದ 22ರವರೆಗೆ ಪ್ರತಿ ದಿನ‌ ಕೇವಲ 13 ಲಕ್ಷ ಲಸಿಕೆಗಳ ರವಾನೆಯಾಗಿದೆ. ಕರೋನಾ ಲಸಿಕೆಗಳ ವಿಷಯದಲ್ಲಿ ಆಗಿರುವ ಈ ‘ಮಿಸ್ ಮ್ಯಾಚ್’ ಕೇಂದ್ರ ಸರ್ಕಾರದ ಮೇಲೆ ಹಲವು ಅನುಮಾನ ಮೂಡುವಂತೆ ಮಾಡುತ್ತದೆ.

ಉತ್ಪಾದಿಸುತ್ತಿರುವ ಮತ್ತು ಜನರಿಗೆ ನೀಡಲಾಗುತ್ತಿರುವ ಕರೋನಾ ಲಸಿಕೆಗಳ ಲೆಕ್ಕಕ್ಕೆ ಹೋಲಿಕೆಯೇ ಇಲ್ಲದಿರುವುದರಿಂದ ನಿಜಕ್ಕೂ ಕೂಡ ದೇಶದಲ್ಲಿ 8ರಿಂದ 8.5 ಕೋಟಿ ಲಸಿಕೆಗಳು ಉತ್ಪಾದನೆ ಆಗುತ್ತಿಲ್ಲವೇ? ಉತ್ಪಾದನೆ ಆಗುತ್ತಿದ್ದರೆ ವ್ಯತ್ಯಾಸ ಕಂಡುಬರುತ್ತಿರುವ ಆ 3.5 ಕೋಟಿ ಲಸಿಕೆಗಳು ಏನಾದವು? ಎಲ್ಲಿಗೆ ಹೋಗುತ್ತಿವೆ? ದೇಶದಲ್ಲೇ ಕೊರತೆ ಇದ್ದರೂ ಕೇಂದ್ರ ಸರ್ಕಾರ ವಿದೇಶಗಳಿಗೆ ಕರೋನಾ ಲಸಿಕೆಗಳನ್ನು ರಫ್ತು ಮಾಡಲಾಗುತ್ತಿದೆಯಾ? ಈ ಬಗ್ಗೆ ಕಂಪನಿಗಳು ಸುಳ್ಳು ಹೇಳುತ್ತಿವೆಯಾ? ಕಂಪನಿಗಳು ಸುಳ್ಳು ಹೇಳಿದರೂ ಕೇಂದ್ರ ಸರ್ಕಾರ ಎಲ್ಲವೂ ಗೊತ್ತಿದ್ದು ಮೌನವಾಗಿರುವುದೇಕೆ? ಎಲ್ಲಕ್ಕಿಂತ ಮಿಗಿಲಾಗಿ ಕೇಂದ್ರ ಸರ್ಕಾರ ಸ್ವತಃ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಜನಕ್ಕೆ ಉತ್ತರದಾಯಿ ಕಂಪನಿಗಳಲ್ಲ, ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಕರೋನಾದಂತಹ ದುರಿತ ಕಾಲದಲ್ಲೂ ಸುಳ್ಳು ಮಾಹಿತಿ ನೀಡಬಾರದು.

Previous Post

ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಭಾಷಾಭಿಮಾನ ಮೆರೆದ ಶಾಸಕ ಎ.ಕೆ.ಎಂ ಅಶ್ರಫ್

Next Post

ಅಲೋಪಥಿ Vs ಆಯುರ್ವೇದ: IMAಗೆ 25 ಪ್ರಶ್ನೆಗಳನ್ನು ಕೇಳಿದ ಬಾಬಾ ರಾಮ್ ದೇವ್

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಅಲೋಪಥಿ Vs ಆಯುರ್ವೇದ: IMAಗೆ 25 ಪ್ರಶ್ನೆಗಳನ್ನು ಕೇಳಿದ ಬಾಬಾ ರಾಮ್ ದೇವ್

ಅಲೋಪಥಿ Vs ಆಯುರ್ವೇದ: IMAಗೆ 25 ಪ್ರಶ್ನೆಗಳನ್ನು ಕೇಳಿದ ಬಾಬಾ ರಾಮ್ ದೇವ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada