
ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುವ ಮೂಲಕ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುತ್ತೇನೆ.ಒಂದು ವೇಳೆ ಹೊಸ ಪಕ್ಷ ಬೇಕು ಅಂದ್ರೆ ಹೊಸ ಪಕ್ಷ ಕಟ್ಟುತ್ತೇನೆ ಎಂದಿದ್ದಾರೆ.

ಹೊಸ ಪಕ್ಷ ಕಟ್ಟಲು ಈಗಾಗಲೇ ನಿರ್ಧಾರ ಆಗಿರುವಂತೆ ಯತ್ನಾಳ್ ಮಾತುಗಳಿದ್ದು, ವಿಜಯದಶಮಿ ದಿನ ಹೊಸ ಪಕ್ಷ ಉದಯವಾಗಲಿದೆ ಎಂದು ನೇರವಾಗಿಯೇ ಹೇಳಿದ್ದಾರೆ. ರಾಜ್ಯದಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಬೇರೆ ಬೇರೆ ದೇಶದಿಂದಲೂ ಕನ್ನಡಿಗರು ಕರೆ ಮಾಡಿ ಮಾತನಾಡಿದರು. ಹೊಸ ಪಕ್ಷ ಮಾಡಿದರೆ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಹಲವಾರು ಜನ ದೇಣಿಗೆ ಕೊಡಲು ಮುಂದಾಗಿದ್ದಾರೆ ಎಂದಿದ್ದಾರೆ.

ಬಿಜೆಪಿ ಹೈಕಮಾಂಡ್ ವಿಜಯೆಂದ್ರ.. ವಿಜಯೆಂದ್ರ ಅಂದ್ರೆ ಪಕ್ಷ ಅದೋಗತಿಗೆ ಹೋಗುತ್ತದೆ. ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆದರೆ ನಾನು ಯಡಿಯೂರಪ್ಪ ವಿರೋಧಿ ಎಂದು ಸ್ಪಷ್ಟನೆ ನೀಡಿದ್ದಾರೆ ಯತ್ನಾಳ್. ವಿಜಯೆಂದ್ರ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ನಿನ್ನ ತಂದೆಯ (ಯಡಿಯೂರಪ್ಪ) ಹಗರಣ ಬಯಲು ಮಾಡುತ್ತೇನೆ ಎಂದು ವಿಜಯೆಂದ್ರಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಹೀಗಾಗಿ ವಿಜಯೆಂದ್ರ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ ಅಂತಾ ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಬದಲಾಗಿಣೆ ಆಗಲಿದೆ. ಯತ್ನಾಳ್ ಉಚ್ಚಾಟನೆ ಮಾಡಿ ವಿಜಯೆಂದ್ರನನ್ನ ಸಹ ತೆಗೆಯಬಹುದು. ಹೈಕಮಾಂಡ್ ಬೇರೆ ಏನೋ ಉದ್ದೇಶ ಇಟ್ಟುಕೊಂಡು ನನ್ನ ಉಚ್ಚಾಟನೆ ಮಾಡಿರಬಹುದು. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದಿರುವ ಯತ್ನಾಳ್, ಹಿಂದೂಗಳ ಹೊಸ ವರ್ಷ ಯುಗಾದಿ ದಿನ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ.