• Home
  • About Us
  • ಕರ್ನಾಟಕ
Tuesday, July 15, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

RT-PCR ಪರೀಕ್ಷೆಯನ್ನೂ ಯಾಮಾರಿಸುತ್ತೆ ರೂಪಾಂತರಿ ವೈರಾಣು!

Shivakumar by Shivakumar
April 30, 2021
in ದೇಶ
0
RT-PCR ಪರೀಕ್ಷೆಯನ್ನೂ ಯಾಮಾರಿಸುತ್ತೆ ರೂಪಾಂತರಿ ವೈರಾಣು!
Share on WhatsAppShare on FacebookShare on Telegram

ಕರೋನಾ ಸಾವು-ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕರೋನಾ ಎರಡನೇ ಅಲೆಯ ಭೀಕರ ಹೊಡೆತಕ್ಕೆ ಸಿಕ್ಕಿ ದೇಶದ ಜನಸಮೂಹ ತತ್ತರಿಸುತ್ತಿರುವಾಗ, ರೂಪಾಂತರಿ ಕರೋನಾ ವೈರಾಣು ದಾಳಿಯ ಅಪಾಯಗಳೂ ಒಂದೊಂದಾಗಿ ಬಯಲಾಗತೊಡಗಿವೆ.

ADVERTISEMENT

ಈ ನಡುವೆ, ಕರೋನಾ ಸೋಂಕು ತಡೆಗೆ ಸರ್ಕಾರದ ಲಾಕ್ ಡೌನ್ ಕ್ರಮದ ಮಿತಿಗಳು, ಸೋಂಕಿತರ ಜೀವರಕ್ಷಣೆಯ ವಿಷಯದಲ್ಲಿ ಸವಾಲಾಗಿರುವ ಆಸ್ಪತ್ರೆಗಳ ಹಾಸಿಗೆ, ಔಷಧಿ ಮತ್ತು ಆಮ್ಲಜನಕದ ಕೊರತೆ, ಮೃತರ ಶವಸಂಸ್ಕಾರದ ಅವ್ಯವಸ್ಥೆ, ಲಸಿಕೆ ಕೊರತೆ ಮತ್ತಿತರ ಜನರ ಜೀವಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾದ ಸರ್ಕಾರಗಳು, ಎಲ್ಲಾ ಲೋಪಗಳನ್ನು, ಅಕ್ರಮಗಳನ್ನು, ಅವ್ಯವಸ್ಥೆಯನ್ನು ಮುಚ್ಚಿಹಾಕಲು, ಅವುಗಳನ್ನು ಪ್ರಶ್ನಿಸುವ ಜನರ ದನಿ ಉಡುಗಿಸಲು ಲಾಕ್ ಡೌನ್ ಮತ್ತು ಕರ್ಫ್ಯೂ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸತೊಡಗಿವೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಎಂಬ ಖಾವಿಧಾರಿಯ ನೇತೃತ್ವದ ಬಿಜೆಪಿ ಸರ್ಕಾರವಂತೂ, ಆಸ್ಪತ್ರೆಯ ಬೆಡ್ ಸಿಕ್ಕಿಲ್ಲ, ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ, ಲಸಿಕೆ ಸಿಕ್ಕಿಲ್ಲ ಎಂದು ಹೇಳಿದವರನ್ನೇ ಕಟಕಟೆಗೆ ಕಳಿಸಿ, ದೇಶದ್ರೋಹದ ಪ್ರಕರಣ ದಾಖಲಿಸುವ ಪಾಶಾವಿ ಆಡಳಿತ ಕ್ರೌರ್ಯ ಮರೆಯತೊಡಗಿದೆ.

ಹಾಗಾಗಿ ಕರೋನಾ ರೂಪಾಂತರಿ ವೈರಾಣು ಅಪಾಯಗಳೂ ಸೇರಿದಂತೆ ಈ ಸೋಂಕು ಮತ್ತು ಅದರ ತಡೆಯುವಿಕೆಯಲ್ಲಿನ ಸವಾಲು ಮತ್ತು ಸಮಸ್ಯೆಗಳ ಕುರಿತ ವಾಸ್ತವಾಂಶಗಳ ಬಗ್ಗೆ ಕೂಡ ಜನಸಾಮಾನ್ಯರಿರಲಿ, ತಜ್ಞರೂ ಬಾಯಿಬಿಡಲು ಭಯಪಡುತ್ತಿದ್ದಾರೆ. ಅಷ್ಟರಮಟ್ಟಿಗೆ ದೇಶದ ಆಡಳಿತ ಭೀತಿ ಸೃಷ್ಟಿಸುತ್ತಿದೆ. ಇಂತಹ ಭೀತಿಯ ನಡುವೆಯೂ ಕೆಲವು ತಜ್ಞರು ಸತ್ಯವನ್ನು ಜನತೆಗೆ ತಲುಪಿಸುವ ಯತ್ನ ಮಾಡುತ್ತಿದ್ದಾರೆ. ಹೊಸ ರೂಪಾಂತರಿ ಕರೋನಾ ವೈರಾಣು ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಪತ್ತೆಯಾಗದೇ ಇರುವ ಸಾಧ್ಯೆತೆಗಳು ಹೆಚ್ಚು, ರೆಮಿಡಿಸಿವರ್ ಔಷಧಿ ಸೋಂಕಿತರಲ್ಲಿ ತೀರಾ ಗಂಭೀರ ಪರಿಸ್ಥಿತಿಗೆ ಮುನ್ನ ಬಳಸಬಹುದೇ ವಿನಃ ಗಂಭೀರ ಸ್ಥಿತಿಯಲ್ಲಿರುವವರನ್ನು ಬದುಕಿಸಲು ಅದು ಪ್ರಯೋಜನಕಾರಿಯಾಗಲಾರದು ಎಂಬ ಸಂಗತಿಗಳು ಕೂಡ ಹೀಗೆ ಹೊರಬರುತ್ತಿರುವ ಹೊಸ ಸಂಗತಿಗಳು.

RTPCR ನೆಗೆಟಿವ್ ಬಂದರೆ ಕರೋನಾ ಇಲ್ಲ ಎಂದು ತಿಳ್ಕೊಬಾರ್ದು, Remdesivir  ಔಷಧಿ ಕೆಲಸ ಮಾಡಲ್ಲ - DR. ಶಿವಕುಮಾರ್

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದಿದ್ದರೂ, ಉಸಿರಾಟದ ಸಮಸ್ಯೆ ತೀವ್ರವಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು, ಚಿಕಿತ್ಸೆ ಫಲಿಸದೆ ಸಾವು ಕಂಡ ಹಿನ್ನೆಲೆಯಲ್ಲಿ, ಅಲ್ಲಿನ ಕೋವಿಡ್ ವೈದ್ಯಾಧಿಕಾರಿ ಡಾ ಶಿವಕುಮಾರ್ ಅವರು ಆರ್ ಟಿ ಪಿಸಿಆರ್ ಪರೀಕ್ಷೆ ಮತ್ತು ರೆಮಿಡಿಸಿವರ್ ಔಷಧಿಗಳ ಮಿತಿಗಳ ಕುರಿತು ಆಡಿರುವ ಮಾತುಗಳು ವೈರಲ್ ಆಗಿವೆ. ಆರ್ ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ನೆಗೇಟಿವ್ ಬಂದಿದ್ದು, ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರೆ, ಅವರು ಸಾವಿಗೆ ಹತ್ತಿರವಿದ್ದಾರೆ ಎಂದೇ ಅರ್ಥ. ಏಕೆಂದರೆ, ದೇಶದಲ್ಲಿ ಈಗ ಅನಾಹುತಕಾರಿಯಾಗಿರುವ ರೂಪಾಂತರಿ ವೈರಾಣು ಸೋಂಕಿಗೆ ಒಳಗಾಗಿ ತೀವ್ರ ಆರೋಗ್ಯ ಸಮಸ್ಯೆ್ಗೆ ಸಿಲುಕಿದ್ದರೆ, ಆಗ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಆ ವೈರಾಣು ಪತ್ತೆ ಆಗದು. ಹಾಗಾಗಿ ಅಂಥವರಿಗೆ ಕೂಡಲೇ ಹೆಚ್ಚಿನ ತುರ್ತು ಚಿಕಿತ್ಸೆ ಬೇಕಾಗುತ್ತದೆ. ಆದರೆ, ಹಾಗಂತ ಆ ಹಂತದಲ್ಲಿ ರೆಮಿಡಿಸಿವರ್ ಔಷಧಿಯನ್ನು ಕೂಡ ಬಳಸಲಾಗದು. ಯಾವುದೇ ಕೋವಿಡ್ ರೋಗಿಯ ಸ್ಥಿತಿ ಗಂಭೀರವಾಗಿದ್ದು,  ಅವರಲ್ಲಿ ವೈರಾಣು ಲೋಡ್ ಅಧಿಕವಾಗಿದ್ದಾಗ ರೆಮಿಡಿಸಿವರ್ ಪ್ರಯೋಜನಕ್ಕೆ ಬರದು ಎಂದು ಡಾ ಶಿವಕುಮಾರ್ ಕಟುವಾಸ್ತವವನ್ನು ಬಿಚ್ಚಿಟ್ಟಿದ್ಧಾರೆ.

 ಇದೇ ಅಭಿಪ್ರಾಯವನ್ನು ದೇಶದ ವಿವಿಧ ವೈದ್ಯರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಕೂಡ ವ್ಯಕ್ತಪಡಿಸಿದ್ದು, ದೆಹಲಿಯ ಹಲ್ವೇಷಿಯಾ ಮೆಡಿಕಲ್ ಸೆಂಟರಿನ ಕನ್ಸಲ್ಟೆಂಟ್ ಫಿಜಿಷಿಯನ್ ಡಾ ಸೌರದಿಪ್ತಾ ಚಂದ್ರ ಕೂಡ, ಹೊಸ ರೂಪಾಂತರಿ ವೈರಾಣುವಿನ ರಚನೆ, ಸದ್ಯ ಚಾಲ್ತಿಯಲ್ಲಿರುವ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಪತ್ತೆಯಾಗುವುದಿಲ್ಲ. ಜೊತೆಗೆ ಹೊಸ ಎರಡು ಮತ್ತು ಮೂರನೇ ರೂಪಾಂತರಿ ವೈರಾಣುಗಳ ಸೋಂಕಿನ ಗುಣಲಕ್ಷಣಗಳು ಕೂಡ ಹಿಂದಿನ ಮೊದಲ ಅಲೆಯ ಸೋಂಕಿನ ಗುಣಲಕ್ಷಣಗಳಿಗಿಂತ ಭಿನ್ನವಾಗಿವೆ. ಹಾಗಾಗಿ ಬಹುತೇಕ ಪ್ರಕರಣಗಳಲ್ಲಿ ಆರಂಭಿಕ ಗುಣಲಕ್ಷಣಗಳನ್ನು ಜನ ಬೇರೆ ಆರೋಗ್ಯ ಸಮಸ್ಯೆ ಎಂದು ಉದಾಸೀನ ಮಾಡುವುದು ಮತ್ತು ಆರ್ ಟಿ ಪಿಸಿಆರ್ ನೆಗೇಟಿವ್ ವರದಿಯ ಹಿನ್ನೆಲೆಯಲ್ಲಿ ಕರೋನಾ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಮನೆಯಲ್ಲಿಯೇ ಇರುವುದು ಸಾಮಾನ್ಯವಾಗಿದೆ. ಆದರೆ, ಪರಿಸ್ಥಿತಿ ಕೈಮೀರಿದ ಬಳಿಕ ದಿಢೀರನೇ ಆಸ್ಪತ್ರೆಗೆ ಧಾವಿಸುವ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುತ್ತದೆ ಎಂದಿದ್ದಾರೆ.

ಅಲ್ಲದೆ, ಈ ಮೊದಲ ಅಲೆಯಲ್ಲಿ ಕಂಡುಬಂದಂತಹ ಜ್ವರ, ಮೈಕೈನೋವು, ವಾಂತಿ, ಗಂಟಲುನೋವು, ಕೆಮ್ಮು, ರುಚಿ ಮತ್ತು ವಾಸನೆ ಗೊತ್ತಾಗದಿರುವುದು ಮತ್ತಿತರ ಲಕ್ಷಣಗಳಲ್ಲದೆ, ಈ ಹೊಸ ವೈರಾಣು ಸೋಂಕಿನಲ್ಲಿ ಬೇಧಿ, ಹೊಟ್ಟೆನೋವು, ಚರ್ಮದ ಗುಳ್ಳೆ, ಗೊಂದಲ, ಯೋಚನಾಶಕ್ತಿ ಕಳೆದುಕೊಳ್ಳುವುದು, ಕೈ ಮತ್ತು ಕಾಲು ಬೆರಳು ನೀಲಿಗಟ್ಟುವುದು, ಮೂಗು ಮತ್ತು ಗಂಟಲಿನಲ್ಲಿ ರಕ್ತ ಬರುವುದು ಮುಂತಾದ ಹೊಸ ಲಕ್ಷಣಗಳು ಗೋಚರಿಸುತ್ತಿವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಹಾಗಾಗಿ, ಈ ಮೇಲಿನ ರೋಗಲಕ್ಷಣಗಳಿದ್ದು, ವ್ಯಕ್ತಿಯ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಫಲಿತಾಂಶ ಬಂದಿದ್ದರೆ, ಆ ರೋಗಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಕ್ಷಣವೇ ಅವರಿಗೆ ಸಿಟಿ ಸ್ಕ್ಯಾನ್ ಮಾಡಿ, ವೈರಾಣು ಲೋಡ್ ಮಾಹಿತಿ ಖಚಿತಪಡಿಸಿಕೊಂಡು ವೆಂಟಿಲೇಟರ್, ಆಮ್ಲಜನಕ ಮುಂತಾದ ಜೀವರಕ್ಷಕ ವ್ಯವಸ್ಥೆಯೊಂದಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಬಹುತೇಕ ವೇಳೆ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದ ಕೂಡಲೇ ಅವರಿಗೆ ಕರೋನಾ ಇಲ್ಲ ಎಂಬ ನಿಲುವಿಗೆ ರೋಗಿಯ ಕಡೆಯವರು ಬಂದು, ಚಿಕಿತ್ಸೆ ಕೊಡಿಸದೇ ಇರುವುದು ಅಥವಾ ಚಿಕಿತ್ಸೆ ಮುಂದುವರಿಸಿದ ವೈದ್ಯಕೀಯ ಸಿಬ್ಬಂದಿಯ ವಿರುದ್ಧವೇ ಅಪಪ್ರಚಾರ ನಡೆಸುವುದು ಕಂಡುಬರುತ್ತಿದೆ. ಆದರೆ, ವಾಸ್ತವ ಬೇರೆಯೇ ಇದೆ. ಆ ಹಿನ್ನೆಲೆಯಲ್ಲಿ ನಾವು(ತಜ್ಞ ವೈದ್ಯರು) ಹೊಸ ರೂಪಾಂತರಿ ವೈರಾಣು ಪತ್ತೆಗೆ ನೆರವಾಗುವಂತೆ ಆರ್ ಟಿ ಪಿಸಿಆರ್ ಪರೀಕ್ಷೆಯ ಮಾದರಿಯನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದೂ ವೈದ್ಯರು ಹೇಳಿದ್ದಾರೆ.

ಹಾಗೇ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳು ಕೂಡ, ಕೇವಲ ಆರ್ ಟಿಪಿಸಿಆರ್ ಪರೀಕ್ಷೆಯ ಫಲಿತಾಂಶದ ಮೇಲೆಯೇ ಸಂಪೂರ್ಣ ನಿರ್ಧಾರ ಕೈಗೊಳ್ಳದೆ, ಆಂಟಿಜೆನ್ ಪರೀಕ್ಷೆ, ಸಿಟಿ ಸ್ಕ್ಯಾನ್ ಪರೀಕ್ಷೆಗಳನ್ನು ಮಾಡುವುದು ಮತ್ತು ಮೂಲಭೂತವಾಗಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆಯನ್ನು ನಿರ್ಧರಿಸಬೇಕು ಎಂದೂ ದೆಹಲಿಯ ತಜ್ಞರು ಸಲಹೆ ನೀಡಿದ್ದಾರೆ.

ಹಾಗಾಗಿ, ಸೋಂಕಿತರು ಮತ್ತು ಸೋಂಕಿತರ ಸಂಬಂಧಿಗಳು ಯಾವುದೇ ಹಂತದಲ್ಲಿ ಮುಖ್ಯವಾಗಿ ಸೋಂಕಿನ ಗುಣಲಕ್ಷಣಗಳ ಮೇಲೆ ಹೆಚ್ಚು ಗಮನವಿಡಬೇಕು ಮತ್ತು ರೆಮಿಡಿಸಿವರ್ ನಂಥ ಔಷಧಗಳು ಸೋಂಕಿನ ಆರಂಭಿಕ ಹಂತದಲ್ಲಿ ಮಾತ್ರ ಪರಿಣಾಮಕಾರಿಯೇ ವಿನಃ ಗಂಭೀರ ಸ್ಥಿತಿಯಲ್ಲಿ ಅವು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ಅರಿತು, ವಿಳಂಬ ಮಾಡದೇ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಮರೆಯಬಾರದು.

Previous Post

ಕ್ರಿಕೆಟ್ ಬೇಡವೆಂದು ಹೊರಟಿದ್ದವನು ದಾಖಲೆಗಳ ಸರದಾರನಾಗಿದ್ದೇ ವಿಸ್ಮಯ…!

Next Post

ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ ವಿಜಯನ್ ಅಧಿಕಾರ ಉಳಿಸಿಕೊಳ್ಳಲಿದ್ದಾರೆ : ಚುನಾವಣೋತ್ತರ ಸಮೀಕ್ಷೆಗಳು

Related Posts

Top Story

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

by ಪ್ರತಿಧ್ವನಿ
July 14, 2025
0

ಬಿಜೆಪಿಯವರಿಗೆ ಮುಜುಗರ ಆಗುವ ಯಾವುದೇ ಪ್ರಶ್ನೆಯನ್ನು ಕೇಳಬಾರದು, ದೇಶದ ಪ್ರಧಾನಿಗಳನ್ನು ಪ್ರಶ್ನಿಸೋದೇ ತಪ್ಪಾ? ಬಿಜೆಪಿಯವರಿಗೆ ಕೇಂದ್ರ ಸರ್ಕಾರದ ವಿರುದ್ಧ ಒಂದೇ ಒಂದು ಪ್ರಶ್ನೆ ಕೇಳಬಾರದು. ಇವರಿಗೆ ಕೇವಲ...

Read moreDetails

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

July 14, 2025

DK Shivakumar: ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ..

July 14, 2025

Dr. Sharan Prakash Patil: ಮಂಗಳವಾರ ಬೆಳಗ್ಗೆ ನೂತನ ತಂತ್ರಜ್ಞಾನದ ಲೋಕಾರ್ಪಣೆ..

July 14, 2025

Dr. Shivaraj Kumar: ಅನಾವರಣವಾಯಿತು ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ವಿಶೇಷ ಪೋಸ್ಟರ್. .

July 14, 2025
Next Post
ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ ವಿಜಯನ್ ಅಧಿಕಾರ ಉಳಿಸಿಕೊಳ್ಳಲಿದ್ದಾರೆ : ಚುನಾವಣೋತ್ತರ ಸಮೀಕ್ಷೆಗಳು

ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ ವಿಜಯನ್ ಅಧಿಕಾರ ಉಳಿಸಿಕೊಳ್ಳಲಿದ್ದಾರೆ : ಚುನಾವಣೋತ್ತರ ಸಮೀಕ್ಷೆಗಳು

Please login to join discussion

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ
Top Story

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

by ಪ್ರತಿಧ್ವನಿ
July 14, 2025
Top Story

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

by ಪ್ರತಿಧ್ವನಿ
July 14, 2025
B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!
Top Story

B Saroja Devi: ಮಲ್ಲಮ್ಮನ ಪವಾಡ ನಿಲ್ಲಿಸಿದ ಕಲಾ ಸರಸ್ವತಿ..

by ಪ್ರತಿಧ್ವನಿ
July 14, 2025
Top Story

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

by ಪ್ರತಿಧ್ವನಿ
July 14, 2025
Top Story

DK Shivakumar: ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ..

by ಪ್ರತಿಧ್ವನಿ
July 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

July 14, 2025

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

July 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada