• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

NEET ಎಂಬುದು ಕಾಸಿದ್ದವರ ಮೆಡಿಕಲ್ “ಮೀಸಲಾತಿ” ಯೋಜನೆ

ರಾಜರಾಮ್ ತಲ್ಲೂರ್ by ರಾಜರಾಮ್ ತಲ್ಲೂರ್
March 2, 2022
in ಕರ್ನಾಟಕ, ದೇಶ
0
NEET ಎಂಬುದು ಕಾಸಿದ್ದವರ ಮೆಡಿಕಲ್ “ಮೀಸಲಾತಿ” ಯೋಜನೆ
Share on WhatsAppShare on FacebookShare on Telegram

ಈ ಶೈಕ್ಷಣಿಕ ವರ್ಷ (2021-22)ಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ NEET (National Eligibility cum Entrance Test) ಪರೀಕ್ಷೆಗೆ ದೇಶದೆಲ್ಲೆಡೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 16.14ಲಕ್ಷ. ಅವರಲ್ಲಿ ಪರೀಕ್ಷೆ ಬರೆದವರು 15.44ಲಕ್ಷ (ಈ ಸಂಖ್ಯೆ 2020ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆದವರಿಗಿಂತ 1.77 ಲಕ್ಷ ಹೆಚ್ಚು! ಹೀಗೇಕೆಂದು ಮುಂದೆ ವಿವರಿಸುತ್ತೇನೆ.)

ADVERTISEMENT

ದೇಶದಲ್ಲಿ ಒಟ್ಟು ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ 90,675. (ಇದನ್ನು ಕೇವಲ MBBS ಗೆ ಸೀಮಿತಗೊಳಿಸಿಕೊಂಡು ಹೇಳುತ್ತಿದ್ದೇನೆ. ದಂತ ವೈದ್ಯಕೀಯ, ಆಯುಷ್ ಇತ್ಯಾದಿಗಳನ್ನು ಈ ಚರ್ಚೆಯಿಂದ ಹೊರಗಿರಿಸಿದ್ದೇನೆ.). ನೀಟ್ ಪರೀಕ್ಷೆಯಲ್ಲಿ ಗರಿಷ್ಠ ಸಂಭಾವ್ಯ ಅಂಕ 720. ಅದರಲ್ಲಿ ಪರ್ಸಂಟೈಲ್ ಲೆಕ್ಕಾಚಾರ ಮಾಡಿ, ಈವರ್ಷಕ್ಕೆ 138 ಅಂಕಕ್ಕಿಂತ ಹೆಚ್ಚು ಅಂಕ ಪಡೆದವರನ್ನು ವೈದ್ಯಕೀಯ ಕಲಿಕೆಗೆ ಅರ್ಹರು ಎಂದು ಪ್ರಕಟಿಸಲಾಗಿತ್ತು. ಹಾಗೆ 138 ಕ್ಕಿಂತ ಹೆಚ್ಚು ಅಂಕ ಗಳಿಸಿ, ಅರ್ಹತೆ ಪಡೆದವರು ಕೇವಲ 8.70 ಲಕ್ಷ ಮಂದಿ. ಅಂದರೆ, ಪ್ರತೀ ಸೀಟಿಗೆ ಅಂದಾಜು ಹತ್ತು ಮಂದಿ ಉಮೇದುವಾರರು!

ದೇಶದ ಗಾತ್ರ ಈ ಚರ್ಚೆಯ ವ್ಯಾಪ್ತಿಗೆ ದೊಡ್ಡದಾಗುವುದರಿಂದ ಕರ್ನಾಟಕದ ವ್ಯಾಪ್ತಿಗೆ ಸೀಮಿತಗೊಳಿಸಿಕೊಂಡು ನೋಡೋಣ. ಕರ್ನಾಟಕದಲ್ಲಿ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡವರು 1.19 ಲಕ್ಷ ಮಂದಿ. ಅವರಲ್ಲಿ ನೀಟ್ ಪರೀಕ್ಷೆಗೆ ಹಾಜರಾದವರು ಸುಮಾರು 89 ಸಾವಿರ ಮಂದಿ. ಇವರಲ್ಲಿ 138ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಅಂದಾಜು 55,000ಮಂದಿ. ಇಷ್ಟು ಮಂದಿಗೆ ಕರ್ನಾಟಕದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳು 9345. ಇದರಲ್ಲಿ ಕರ್ನಾಟಕದಲ್ಲೇ KEA ಮೂಲಕ ಇತ್ಯರ್ಥವಾಗುವ 7411 ಸೀಟುಗಳು ಮತ್ತು ಕೇಂದ್ರ ಸರ್ಕಾರದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC)ಮೂಲಕ ಇತ್ಯರ್ಥವಾಗುವ 1934 ಸೀಟುಗಳು ಸೇರಿವೆ. ಈ ಎಲ್ಲ ಸೀಟುಗಳೂ ಹಂಚಿಕೆಯಾಗುವುದು ಮೀಸಲಾತಿ ಸೂತ್ರಗಳ ಅನ್ವಯವೇ.

ಈ ಸೀಟುಗಳಲ್ಲಿ ಕರ್ನಾಟಕದವರಿಗೇ ಸಿಗುವ ಸೀಟುಗಳು ಎಷ್ಟು? ಎಂಬ ಪ್ರಶ್ನೆ ಎತ್ತಿದರೆ, ಆಗ NEET ಯಾಕೆ ಸಮಸ್ಯೆ ಎಂಬುದು ಸಮರ್ಪಕವಾಗಿ ಅನಾವರಣಗೊಳ್ಳುತ್ತದೆ. ಒಟ್ಟು 9345 ಸೀಟುಗಳಲ್ಲಿ, ಕೇಂದ್ರ ಸರ್ಕಾರ ನಿರ್ಧರಿಸುವ 1934 ಸೀಟುಗಳಲ್ಲಿ ರಾಜ್ಯಗಳ ಉಚಿತ ಸೀಟು ಕೋಟಾದ 15% ಮತ್ತು ಡೀಮ್ಡ್ ವಿವಿಗಳ 100% ಸೀಟುಗಳು ಸೇರಿವೆ. ಡೀಮ್ಡ್ ಯೂನಿವರ್ಸಿಟಿ ಸೀಟುಗಳು ಮೆರಿಟ್ ಜೊತೆಗೇ ವಾರ್ಷಿಕ 15 ಲಕ್ಷದಿಂದ 25-30 ಲಕ್ಷ rರೂಪಾಯಿಗಳ ತನಕ ಫೀಸ್ ಹೊಂದಿರುವ ಸೀಟುಗಳು. NRI (694) + ವೈದ್ಯಕೀಯ ವ್ಯಾಪಾರದ ಸೀಟುಗಳು (235) ವಾರ್ಷಿಕ ತಲಾ 35-40ಲಕ್ಷ ರೂ. ಬೆಲೆ ಬಾಳುವಂತಹವು. ಇದಲ್ಲದೇ 2310 ಪ್ರೈವೇಟ್ ಸೀಟುಗಳು ಕೂಡ ವಾರ್ಷಿಕ ಕನಿಷ್ಠ 10 ಲಕ್ಷದಿಂದ 20ಲಕ್ಷ ರೂಪಾಯಿಗಳ ತನಕ ಬೆಲೆ ಬಾಳುವಂತಹವು.

ಹಾಗಾಗಿ, ಅಂತಿಮವಾಗಿ 60,000-1.5ಲಕ್ಷ ರೂ.ಗಳ ಒಳಗೆ ವಾರ್ಷಿಕ ವೆಚ್ಚ ಬರುವ “ಮೆರಿಟ್” ಸೀಟುಗಳು ಕರ್ನಾಟಕದೊಳಗೆ ಲಭ್ಯವಿರುವುದು 4172 ಮಾತ್ರ!! ಅಂದರೆ ಇಲ್ಲೂ ಕೂಡ ದುಡ್ಡು ಇಲ್ಲವೆಂದಾದರೆ ಹತ್ತಕ್ಕೆ ಒಬ್ಬರಿಗೆ ಸೀಟು ಮತ್ತು ದುಡ್ಡು ಇದೆಯೆಂದಾದರೆ ಆರರಲ್ಲಿ ಒಬ್ಬರಿಗೆ ಸೀಟು!

ಕರ್ನಾಟಕದಲ್ಲಿ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳ ಶಿಕ್ಷಣ ಶುಲ್ಕ ತೆರಬಲ್ಲವರ ಸಂಖ್ಯೆ ಎಷ್ಟು? ಕೇಂದ್ರ ಸರ್ಕಾರದ MCC ಕೌನ್ಸೆಲಿಂಗ್ ಅಂತೂ ದೇವಸ್ಥಾನಗಳಲ್ಲಿ ದುಡ್ಡು ಕೊಟ್ಟರೆ ಸಿಗುವ “ವಿಶೇಷ ದರ್ಶನ” ವ್ಯವಸ್ಥೆ. ಅಲ್ಲಿ ಎರಡು ಲಕ್ಷ ರೂಪಾಯಿಗಳ ಠೇವಣಿ ಇರಿಸಿ ಕೌನ್ಸೆಲಿಂಗಿಗೆ ಹಾಜರಾಗಬೇಕೆಂಬ ಷರತ್ತು ವಿಧಿಸುವ ಮೂಲಕ ಬಹಳಷ್ಟು ಜನರನ್ನು ಮೂಲದಲ್ಲೇ ಬದಿಗೆ ಸರಿಸಲಾಗಿರುತ್ತದೆ. AIIMS, GIPMERನಂತಹ ರಾಷ್ಟ್ರೀಯ ದರ್ಜೆಯ ಶಿಕ್ಷಣ ಸಂಸ್ಥೆಗಳಿಗೆ ಅರ್ಹರಾಗುವ ನಿಜ ಪ್ರತಿಭಾವಂತರನ್ನು ಬಿಟ್ಟರೆ, ಉಳಿದಂತೆ ಅಲ್ಲಿಗೆ ಎಡತಾಕುವವರು ಡೀಮ್ಡ್ ವಿವಿಗಳಲ್ಲಿ ಹಣ ತೆತ್ತು ಸೀಟು ಖರೀದಿಸುವ ತಾಕತ್ತಿರುವವರು ಮಾತ್ರ.

ಒಟ್ಟಿನಲ್ಲಿ, ನನಗೆ ಈ ಕಂತಿನಲ್ಲಿ ಹೇಳಬೇಕಾಗಿರುವುದು – ಕರ್ನಾಟಕದಲ್ಲಿ 55,000 ವೈದ್ಯಕೀಯ ಶಿಕ್ಷಣ ಆಸಕ್ತರಿದ್ದರೆ, ಅವರಿಗೆ ಸರ್ಕಾರ ರೀಸನೆಬಲ್ ಮೊತ್ತದ ಶುಲ್ಕಕ್ಕೆ ಒದಗಿಸುವುದು ಕೇವಲ 4000 ಚಿಲ್ಲರೆ ಸೀಟುಗಳನ್ನು.

ಈ ಕಾರಣಕ್ಕಾಗಿ ರಾಜ್ಯದಲ್ಲಿ ಕನಿಷ್ಠ 15,000 ”ಮೆರಿಟ್” ಸೀಟುಗಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಕ ತುರ್ತಾಗಿ ಲಭ್ಯವಾಗಬೇಕಾಗಿದೆ. ವೈದ್ಯಕೀಯ ಕಾಲೇಜುಗಳನ್ನು ಖಾಸಗಿಯವರಿಗೆ ಕೊಟ್ಟಷ್ಟೂ, ಅದು ದುಡ್ಡಿದ್ದವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಆಗುವ ಸಾಧ್ಯತೆಗಳೇ ಹೆಚ್ಚು.
ಇವಿಷ್ಟು ವೈದ್ಯಕೀಯ ಶಿಕ್ಷಣದ ಈವತ್ತಿನ ಅಂಕಿ-ಸಂಖ್ಯೆಗಳು.

(ಇದು ಸರಣಿ ಲೇಖನದ ಮೊದಲನೇ ಭಾಗ)

Tags: BJPCongress PartyMedical ExamsNEETNEET ExamNEET-JEERussiaRussia-Ukraine warRussian Ukraine WarRussiaUkraineCrisisಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರಷ್ಯಾ ಉಕ್ರೇನ್ ಬಿಕ್ಕಟ್ಟು | 6 ದಿನಗಳಲ್ಲಿ, ಸುಮಾರು 6 ಸಾವಿರ ರಷ್ಯನ್ನರ ಹತ್ಯೆ : ಉಕ್ರೇನ್ ಅಧ್ಯಕ್ಷ

Next Post

Ukraine Vs Russia | ರಷ್ಯಾ ಸೇನೆಯೊಂದಿಗೆ ಸೆಣಸಾಡಲು No ಎಂದ ಜೋ ಬಿಡನ್!

Related Posts

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
0

https://youtu.be/QX4g82NAFtg

Read moreDetails

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
Next Post
Ukraine Vs Russia | ರಷ್ಯಾ ಸೇನೆಯೊಂದಿಗೆ ಸೆಣಸಾಡಲು No ಎಂದ ಜೋ ಬಿಡನ್!

Ukraine Vs Russia | ರಷ್ಯಾ ಸೇನೆಯೊಂದಿಗೆ ಸೆಣಸಾಡಲು No ಎಂದ ಜೋ ಬಿಡನ್!

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada