ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ ಬಂಧನವಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಸುತ್ತ ಸದಾ ಗಿಜಿಗುಡುತ್ತಿದ್ದ ಹಿತೈಷಿಗಳ ಗುಂಪು ಇದೀಗ ನಾಪತ್ತೆಯಾಗಿದೆ. ಬಂಧಿತ ದರ್ಶನ್ ನೋಡಲು ಯಾರು ಕೂಡ ಇದುವರೆಗೂ ಪೊಲೀಸ್ ಸ್ಟೇಷನ್ ಕಡೆ ತಲೆ ಹಾಕಿಲ್ಲ ಅನ್ನೋದೆ ವಿಪರಿಯಾಸ.
![](https://pratidhvani.com/wp-content/uploads/2024/06/IMG_8253.jpeg)
ನಟ ,ಬಂಧಿತ ದರ್ಶನ್ ಗೆಳೆಯರ ಬಳಗ ಭಾರಿ ದೊಡ್ಡದು. ಸದಾ ಅವರೊಟ್ಟಿಗೆ ಗೆಳೆಯರ ಗುಂಪು ಇದ್ದೇ ಇರುತ್ತಿತ್ತು. ವೇದಿಕೆಗಳಲ್ಲಿ ದರ್ಶನ್ ರನ್ನ ಹಾಡಿ ಹೊಗಳುತ್ತಿದ್ದರು. ಮಾತು ಮಾತಿಗೂ ದರ್ಶನ್ ಗೆ ಜೈಕಾರ ಹಾಕುತ್ತಿದ್ದರು.ಆದ್ರೆ ಈಗ ಆ ಪೈಕಿ ಯಾರೊಬ್ಬರೂ ಕೂಡು ಪೊಲೀಸ್ ಠಾಣೆ ಕಡೆ ಸುಳಿವು ಇಲ್ಲ.
![](https://pratidhvani.com/wp-content/uploads/2024/06/IMG_8252.jpeg)
ಸ್ನೇಹಿತರಿರಲಿ, ಕನಿಷ್ಠ ಪಕ್ಷ ದರ್ಶನ್ ರ ಪತ್ನಿ ವಿಜಯಲಕ್ಷ್ಮಿ ಕೂಡ ಇದುವರೆಗೂ ಠಾಣೆ ಕಡೆ ಬರಲಿಲ್ಲ. ಅವರು ಏನಾದ್ರೂ ಮಾಡಿಕೊಳ್ಳಲಿ, ನಾನು ಆ ವಿಚಾರಕ್ಕೆ ಹೋಗುವುದಿಲ್ಲ ಎಂದು ಹೇಳಿ, ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ರನ್ನ ಅನ್ ಫಾಲೋ ಮಾಡಿ ಪರೋಕ್ಷ ಸಂದೇಶ ಕೊಟ್ಟು ಅಂತರ ಕಾಯ್ದುಕೊಂಡರು.
ಇನ್ನ ದರ್ಶನ್ ರ ಒಡ ಹುಟ್ಟಿದ ತಮ್ಮ ದಿನಕರ್ ತೂಗುದೀಪ್, ಮತ್ತು ಹೆತ್ತ ತಾಯಿ ಮೀನ ತೂಗುದೀಪ ಹಾಗೂ ದರ್ಶನ್ ಸಹೋದರಿ ಯಾರು ಕೂಡು ಇದುವರೆಗೂ ದರ್ಶನ್ ಯೋಗಕ್ಷೇಮ ಕೂಡ ವಿಚಾರಿಸಿಲ್ಲ. ಸಂಪೂರ್ಣ ಕುಟುಂಬದ ಜೊತೆಗೆ ದರ್ಶನ್ ಸಂಬಂಧ ಕಡಿದುಕೊಂಡಿದ್ದಾರಾ ಎಂಬ ಪ್ರಶ್ನೆಗೆ ಈ ಬೆಳವಣಿಗೆಗೆ ಕಾರಣವಾಗಿದೆ.
ಮೂಲಗಳ ಮಾಹಿತಿಯ ಪ್ರಕಾರ ದರ್ಶನ್ ತಾಯಿ ಬಹಳ ಕಾಲದಿಂದಲೇ ಅವರಿಂದ ದೂರ ಉಳಿದಿದ್ದಾರಂತೆ. ಇನ್ನು ದರ್ಶನ್ ಮತ್ತು ದಿನಕರ್ ಗೂ ಮನಸ್ತಾಪವಿದೆ ಎಂದು ಕೂಡ ಹೇಳಲಾಗ್ತಿದೆ. ಹೀಗಾಗಿ ಯಾರೊಬ್ಬರೂ ದರ್ಶನ್ ನೋಡಲು ಬರಲಿಲ್ಲ ಎಂಬುದು ಅಸಲಿ ವಿಚಾರ.
![](https://pratidhvani.com/wp-content/uploads/2024/06/IMG_8251-1.jpeg)
ಹೀಗೆ ತಮಗೆ ಕಷ್ಟ ಅಂದಾಗ ಯಾರೊಬ್ಬರು ಬರದೆ ಇರುವುದು ದರ್ಶನ್ ಗೆ ಅಪಾರ ನೋವು ತರಿಸಿದೆಯಂತೆ. ಕೊನೆಯ ಪಕ್ಷ ಸಾಂತ್ವನ ಹೇಳುವುದಕ್ಕಾದರು ಯಾರಾದರೂ ಬರಬಹುದಿತ್ತು. ತಮ್ಮಿಂದ ಅನುಕೂಲ ಪಡೆದುಕೊಂಡವರು, ಸಹಾಯ ಪಡೆದಿದ್ದವರು, ಸದಾ ಜೊತೆಗಿರುತ್ತಿದ್ದವರು, ಸ್ನೇಹಿತರು , ಸಂಬಂಧಿಕರು ಯಾರೊಬ್ಬರೂ ತಮಗಾಗಿ ಮಿಡಿಯದೇ ಇದ್ದಿದ್ದು ದರ್ಶನ್ ಮನಸ್ಸನ್ನ ಕದಡಿದೆ.
ಏನೋ ತಪ್ಪು ಆಗಿದ್ದು ಆಗಿದೆ , ಆದ್ರೆ ಜೊತೆಗೆ ನಾವು ಇದ್ದೇವೆ ಅಂತ ಕನಿಷ್ಠ ಧೈರ್ಯ ಹೇಳಲು ಕೂಡ ಯಾವೊಬ್ಬ ಆಪ್ತರು ಬಂದಿಲ್ಲ. ಹಾಗೇನಾದ್ರು ಬಂದ್ರೆ ಆಪ್ತರಿಗು ಸಂಕಷ್ಟ ಬರಬಹುದು ಎಂಬ ಭಯ ದರ್ಶನ್ ಆಪ್ತರನ್ನ ಕಾಡುತ್ತಿದ್ಯಾ ? ಇಲ್ಲ ಎಲ್ಲಾ ಒಳಗಿಂದ ಒಳಗೇನೆ ಪೋನ್ ಮೂಲಕ ಹಾಗು ಪ್ರಭಾವ ಬೀರುತ್ತಿದ್ದಾರಾ..? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಆದ್ರೆ, ನೀನೆ ಇಂದ್ರ – ನೀನೆ ಚಂದ್ರ ಅಂದವರು ಯಾರೂ ಇಂದು ಸನಿಹಕ್ಕೂ ಸುಳಿಯಲಿಲ್ಲ. ಕನಿಷ್ಠ ಸಾಂತ್ವನವನ್ನೂ ಹೇಳಲಿಲ್ಲ. ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್ ಇಂದು, ಸ್ನೇಹಿತರು, ಸಂಬಂಧಿಕರು ಇಲ್ಲದೆ ಏಕಾಂಗಿಯಾಗಿ ಕಂಬಿ ಹಿಂದೆ ಇದ್ದಾರೆ.