ರೇಣುಕಾಸ್ವಾಮಿ (Renuka swamy) ಕೊಲೆ ಪ್ರಕರಣ ಖಂಡಿಸಿ ಮಂಡ್ಯದಲ್ಲಿ (Mandya) ರೈತರ ಮುಖಂಡರು ಪ್ರತಿಭಟನೆ ನಡೆಸ್ತಿದ್ದಾರೆ. ಅಮಾಯಕ ಅಭಿಯಾನಿಯನ್ನ ಅಮಾನುಷವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.ರಾಜ್ಯ ಕಂಡಂತಹ ಅತ್ಯಂತ ದುಷ್ಟ ಖಳನಾಯಕ ಯಾರು ಇಲ್ಲ ವೆಂದು A2 ಆರೋಪಿಯಾಗಿರುವ ದರ್ಶನ್ (Actor Darshan) ವಿರುದ್ಧ ಆಕ್ರೋಶ ಹೊರಹಾಕಿದ್ರು. ಅಷ್ಟೇ ಅಲ್ಲದೇ ದರ್ಶನ್ಗೆ ಆದಷ್ಟು ಬೇಗ ಗಲ್ಲು ಶಿಕ್ಷೆ ನೀಡುವಂತೆ ರೈತರು ಪ್ರತಿಭಟನೆ ಮೂಲಕ ಒತ್ತಾಯಿಸಿದ್ರು.
![](https://pratidhvani.com/wp-content/uploads/2024/06/IMG_8198.jpeg)
ಕಲವೇ ದಿನಗಳ ಹಿಂದೆ ಇದೇ ಮಂಡ್ಯದಲ್ಲಿ ಚುನಾವಣೆಯ ಪ್ರಚಾರದಲ್ಲಿ ನಟ ದರ್ಶನ್ ಭಾಗಿಯಾಗಿದ್ರು, ದರ್ಶನ್ ಗೆ ಮಂಡ್ಯದ ಭಾಗದಲ್ಲಿ ಅಪಾರ ಅಭಿಮಾನಿ ಬಳಗವಿದ್ದು, ಪ್ರತಿಬಾರಿ ಮಂಡ್ಯದಲ್ಲಿ ದರ್ಶನ್ಗೆ ಅದ್ಧೂರಿ ಸ್ವಾಗತ ಸಿಗ್ತಾಯತ್ತು.
ಆದ್ರೆ ಇದೀಗ ವಿಪರ್ಯಾಸ ಅಂದ್ರೆ, ಯಾವ ಮಂಡ್ಯದಲ್ಲಿ ದರ್ಶನ್ರನ್ನ ಎತ್ತಿ ಮೆರೆಸಲಾಗ್ತಿತ್ತೋ, ಅದೇ ಮಂಡ್ಯದಲ್ಲಿ ಈಗ ನಟ ದರ್ಶನ್ ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಪ್ರತಿಭಟನೆ ನಡೆಸಲಾಗ್ತಿದೆ.