ಲೋಕಸಮರಕ್ಕೆ ಕಮಲ ಕಲಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 195 ಅಭ್ರ್ಥಿಗಳ ಸಾಲಿನಲ್ಲಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ವಾರಣಾಸಿ (Varanasi) ಕ್ಷೇತ್ರದಿಂದ ಕದನಕ್ಕೆ ಇಳಿಯಲಿದ್ದಾರೆ.
ಮರ್ಚ್ ಬಿಸಿಲ ಝಳ ಹೆಚ್ಚಾಗೋಕು ಮುನ್ನವೇ ಲೋಕಸಮರದ ಕಮಲ ಕಿಡಿ ಜೋರಾಗಿದೆ. 195 ಜನ ಅಭ್ರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ (BJP) ನಾಯಕರು ಶ್ರೀರಾಮನ ಕೃಪಾಕಟಾಕ್ಷ ಇರಲಿ ಎಂದು ಉತ್ತರ ಪ್ರದೇಶ (Uttara Pradesh) ಸೇರಿದಂತೆ ಉತ್ತರ, ಈಶಾನ್ಯ ಹಾಗೂ ಕೇರಳ (Kerala) ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಸಿದ್ದಪಡಿಸಿದೆ.
ಮೂರನೇ ವಿಜಯ ಪತಾಕೆ ಹಾರಿಸಲು ಕಾತರಿಸುತ್ತಿರುವ ಬಿಜೆಪಿಯ ಅಭ್ರ್ಥಿಗಳ ಮುಖವಾಣಿ, ಪ್ರಧಾನಿ ನರೇಂದ್ರ ಮೋದಿ ಸ್ರ್ಧೆ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಒಂದು ಸ್ಪಷ್ಟ ಚಿತ್ರಣ ದೊರಕಿದ್ದು, ಮೋದಿ ಕಾಶಿ ವಿಶ್ವನಾಥನ ಗಂಗಾ ನದಿಯ ತಮ್ಮ ನೆಚ್ಚಿನ ವಾರಣಾಸಿ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ರ್ಧೆ ಮಾಡಲಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್ ಷಾ (Amith Shah) ಕೂಡ ತಮ್ಮ ಕ್ಷೇತ್ರ ಗಾಂಧಿನಗರದಿಂದಲೇ ಸ್ರ್ಧೆ ಮಾಡಲಿದ್ದಾರೆ.
ಇನ್ನು ವಲಸಿಗರಿಗೂ ಮಣೆ ಹಾಕಿರುವ ಬಿಜೆಪಿ ಕೇರಳದಲ್ಲಿ ಕಟ್ಟಾ ಕಾಂಗ್ರೆಸ್ ನಾಯಕ ಎ.ಕೆ.ಆಂಟೋನಿ ಮಗ ಅನಿಲ್ ಆಂಟೋನಿಗೆ (Anil Antony) ಟಿಕೇಟ್ ಘೋಷಿಸಿದೆ, ಇನ್ನು ಇಷ್ಟು ದಿನ ರಾಜ್ಯ ಸಭೆಗೆ ಸ್ರ್ಧಿಸುತ್ತಿದ್ದ ರಾಜೀವ್ ಚಂದ್ರಶೇಖರ್ (Rajiv Chandrashekar) ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
#BJP #Loksabha #election #candidates #varanasi #NarendraModi #AmithShah #AnilAntony #AKAntony #Rajivchandrashekar #Abdhul #malapurram #Kerala #Tripura #uttarpradesh #WestBengal #Assam