
ಭಾರತ ಮತ್ತು ಪಾಕಿಸ್ತಾನದ (India – Pakistan war) ನಡುವಿನ ಯುದ್ಧವನ್ನು ಕೊನೆಗೊಳಿಸಿ ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಅವರ ಹಸ್ತಕ್ಷೇಪವ ಆಗಿರುವುದು ಹೌದು ಎಂದು ಎಂದು ರಷ್ಯಾ(Russia ) ಈಗ ಅಧಿಕೃತವಾಗಿ ದೃಢಪಡಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಹೇಳಿದ್ದಾರೆ.

ಈ ಹಂತದಲ್ಲಿ ನಾವು ಇದನ್ನು ಚರ್ಚಿಸಬೇಕಿರುವುದು ಕದನ ವಿರಾಮಕ್ಕೆ ಮಧ್ಯವರ್ತಿ ಯಾರು ಎಂಬುದರ ಬಗ್ಗೆ ಅಲ್ಲ, ಅಮೆರಿಕ ಮತ್ತು ರಷ್ಯಾ ಇಷ್ಟೆಲ್ಲಾ ಹೇಳುತ್ತಿದ್ದರೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಾಗಿದ್ದಾರೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕಿದೆ.
ವಾಸ್ತವವೆಂದರೆ, ಭೌಗೋಳಿಕ ರಾಜಕೀಯದ ನಿರ್ಣಾಯಕ ವಿಷಯಗಳನ್ನು ತಿಳಿಸುವ ಬದಲು ಮೋದಿಜಿ ದೇಶೀಯ ಗ್ಯಾಲರಿಗೆ ಆಟವಾಡಲು ಬಯಸುತ್ತಾರೆ. ಒಂದು ರಾಷ್ಟ್ರವಾಗಿ, ನಾವು ಈ ಬಗ್ಗೆ ಆಳವಾಗಿ ಕಾಳಜಿ ವಹಿಸಬೇಕಿದೆ.

ಶ್ವೇತಭವನ ಮತ್ತು ಕ್ರೆಮ್ಲಿನ್ನ ಈ ಹೇಳಿಕೆಗಳು ವಿಶ್ವ ವೇದಿಕೆಯಲ್ಲಿ ಭಾರತವು ಅನುಭವಿಸುವ ಬೆಂಬಲವನ್ನು ಪ್ರತಿಬಿಂಬಿಸುತ್ತವೆ, ಆದರೆ ನಮ್ಮ ನಾಯಕತ್ವಕ್ಕೆ ಮಾತ್ರ ಮೌನ ಆವರಿಸಿಕೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಂಡ ಈ ಒಪ್ಪಂದವನ್ನು ಪೂರ್ಣಗೊಳಿಸುವ ಹೊತ್ತಿಗೆ, ಭಾರತ ಸರಿಪಡಿಸಲಾಗದ ವಿದೇಶಾಂಗ ನೀತಿ ಹಿನ್ನಡೆಗಳನ್ನು ಅನುಭವಿಸಿರುತ್ತದೆ, ಅದನ್ನು ಸರಿಪಡಿಸಲು ದಶಕಗಳೇ ಬೇಕಾಗಬಹುದು.
ನಾಮ್ ನರೇಂದ್ರ, ಕಾಮ್ ಸುರೇಂದರ್ ಎಂಬುದು ಸತ್ಯ ಎಂದು ಪ್ರಿಯಾಂಕ್ ಖರ್ಗೆ ಜರಿದಿದ್ದಾರೆ.