ಹಿಂದೂ ಕಾರ್ಯಕರ್ತ ಸುಹಾಸ್ ಕೊಲೆಯಲ್ಲಿ ಫಾಜಿಲ್ ಕುಟುಂಬಸ್ಥರು ಭಾಗಿಯಾಗಿಲ್ಲ ಅಂತ ಸ್ಪೀಕರ್ ಖಾದರ್ ಹೇಳೀದ್ರು. ಇದೇ ವಿಚಾರವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿಫೆಂಡ್ ಮಾಡಿಕೊಳ್ಳಲು ಹೋಗಿ ಖಾದರ್ ಬೆತ್ತಲಾಗಿದ್ದಾರೆ. ತಕ್ಷಣವೇ ಸ್ಪೀಕರ್ ಸ್ಥಾನಕ್ಕೆ ಖಾದರ್ ರಾಜೀನಾಮೆ ಕೊಡ್ಬೇಕು. ಕೇಸ್ ಮುಚ್ಚಿ ಹಾಕಲು ಖಾದರ್ ಹೋಗಿದ್ರು, ಆದರೆ ಇವರಿಗೆ ಸತ್ಯ ಗೊತ್ತಾಗಿದೆ ಅಂತ ಹೇಳಿದ್ರು.

ಇನ್ನು ಇದೇ ವಿಚಾರವಾಗಿ ಎಕ್ಸ್ನಲ್ಲಿ ಪೊಸ್ಟ್ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸ್ಪೀಕರ್ ಖಾದರ್ ಸಾಹೇಬರು ನ್ಯಾಯಾಧೀಶರಾಗಿದ್ದು ಯಾವಾಗ? ಕೊಲೆ ಆರೋಪಿಯ ಕುಟುಂಬಸ್ಥರ ಹೇಳಿಕೆಯನ್ನೇ ಸಾಕ್ಷಿಯಾಗಿ ಪರಿಗಣಿಸಿ ಖುಲಾಸೆ ಮಾಡುವ ಕಾನೂನು ಯಾವಾಗ ಜಾರಿಯಾಯ್ತು? ಸ್ಪೀಕರ್ ಹುದ್ದೆಯಂತಹ ಪ್ರಭಾವಿ ಸ್ಥಾನದಲ್ಲಿರುವವರು ಹೀಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರೆ ಪೊಲೀಸರಿಗೆ ಏನು ಸಂದೇಶ ಹೋಗುತ್ತದೆ ಅಂತ ಪ್ರಶ್ನೆ ಮಾಡಿದ್ದಾರೆ.

ಆದಿಲ್ ಕುಟುಂಬ ನಿರಪರಾಧಿಗಳು ಅಂದಿದ್ದ ಖಾದರ್ ವಿರುದ್ಧ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಯುಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯು.ಟಿ ಖಾದರ್ ಫಾಜಿಲ್ ಕುಟುಂಬನಾ ನಿರಪರಾಧಿ ಅಂದಿದ್ದಾರೆ. ತನಿಖೆಗೂ ಮೊದ್ಲೇ ನಿರಪರಾಧಿ ಅಂದಿದ್ದು ಕೇಸ್ ಮುಚ್ಚಿ ಹಾಕಿಸೋದಕ್ಕೆ. ಹೀಗಾಗಿ ಖಾದರ್ ಅವ್ರನ್ನ ವಿಚಾರಣೆ ಮಾಡಿ ಎಂದು ಆಗ್ರಹಿಸಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೋರ್ವ ಹಿಂದೂ ಕಾರ್ಯಕರ್ತನನ್ನ ಟಾರ್ಗೆಟ್ ಮಾಡಲಾಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲುಗೆ ಡೇಟ್ ಫಿಕ್ಸ್ ಮಾಡಿ ಜೀವ ಬೆದರಿಗೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, 5/5/ 2025ರ ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮಂಗಳೂರಲ್ಲಿ ಮತ್ತೆ ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ ಹಾಕಿರೋ ವಿಚಾರವಾಗಿ ಕೇಂದ್ರ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರ ಮಾತಾಡೋದನ್ನು ಕಡಿಮೆ ಮಾಡಲಿ. ಬೇರೆಯವರ ಮನೆಗೆ ಬಿದ್ದ ಬೆಂಕಿ ನಿಮ್ಮ ಮನೆಗೂ ಬೀಳಬಹುದು ಎಚ್ಚರ ಇರ್ಲಿ. ರಾಜಾರೋಷವಾಗಿ ಕೊಲೆ ಬೆದರಿಕೆ ಹಾಕೋರಿಗೆ ಸರ್ಕಾರ ಹೆಡೆಮುರಿ ಕಟ್ಟಬೇಕು. ಒಬ್ಬರ ಜೀವ ತೆಗಿತೀವಿ ಅಂತಾ ಬಹಿರಂಗವಾಗಿ ಬೆದರಿಕೆ ಹಾಕುವವರ ಬಗ್ಗೆ ಕನಿಕರ ತೋರಬಾರದು ಅಂತ ಹೇಳಿದ್ದಾರೆ.