ಪ್ರಧಾನಿ ನರೇಂದ್ರ ಮೋದಿ (pm modi) ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ (congress) ಚೊಂಬಿನ ಪ್ರತಿಭಟನೆ ಮಾಡಿದ್ರು .ಲೋಕಸಭಾ ಚುನಾವಣೆಗೆ ಹಿನ್ನಲೆ, ಚುನಾವಣಾ ಪ್ರಚಾರಕ್ಕೆಂದು ಮೋದಿ (modi) ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯ ಖಂಡಿಸಿ ಕಾಂಗ್ರೇಸ್ ಸರ್ಕಾರ ಮೋದಿ ವಿರುದ್ಧ ಮೇನ್ರಿ ಸರ್ಕಲ್ ನಲ್ಲಿ ಚೊಂಬು ಹಿಡಿದು ಪ್ರತಿಭಟನೆ ಮಾಡಿದ್ರು.

ಈಗಾಗಲೇ ಕೇಂದ್ರ ಸರ್ಕಾರದಿಂದ (central government) ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಚೊಂಬು ಎಂದು ಕಾಂಗ್ರೇಸ್ ಪ್ರಚಾರ ಮಾಡಿದ್ದು, ಇದೀಗ ಮೋದಿ ಆಗಮನದ ಹಿನ್ನಲೆ ಚೊಂಬಿನ ಪ್ರತಿಭಟನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿನ್ನೆಯಷ್ಟೇ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep singh surjewala) ಸೇರಿದಂತೆ ಹಲವು ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ರು.

ಇದೇ ಸದಂರ್ಭದಲ್ಲಿ ಪೋಲಿಸರು ಸುರ್ಜೇವಾಲಾರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿರೋ ಸುರ್ಜೇವಾಲ ಕರ್ನಾಟಕದಲ್ಲಿ ಬರಗಾಲ ಇದೆ. ರಾಜ್ಯಕ್ಕೆ ನೀಡಬೇಕಾದ ಪಾಲಿನ ಅನುದಾನವನ್ನ ರಾಜ್ಯ ಸರ್ಕಾರ ಕೇಳುತ್ತಿದೆ. ರಾಜ್ಯಕ್ಕೆ ಮೋದಿಯವರು ಚೊಂಬು ಕೊಟ್ಟಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.






