ಮೈಸೂರು ಸಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನೀವೇಶನ ಹಂಚಿಕೆ ಹೆಸರಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣದ ವಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಶಾಕಿಂಗದ ಸೈಟ್ವೆಂಟ್ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/03/hdk-1-1638880363-1643713605-1024x576.jpg)
ಸಿಎಂ ಖುರ್ಚಿ (Cm race) ಮೇಲೆ ಕಣ್ಣಿಟ್ಟಿರುವವರಿಂದಲೇ ಮುಡಾ ಹಗರಣ ಬಯಲಾಗಿದೆ ಅಂತ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ರು. ಸಿಡಿ ಫ್ಯಾಕ್ಟರಿ (CD factory) ಆಯ್ತು ಇದೀಗ ಮುಡಾದ ಕಾರ್ಯಕ್ರಮಗಳು ಬರ್ತಿವೆ.ಮುಡಾ ಹಗರಣದ ಬಗ್ಗೆ ನನಗೂ ಮಾಹಿತಿ ಇದೆ.ಸಿಎಂ ಆಗಲು ಟವೆಲ್ ಹಾಕಿ ಕಾಯುತ್ತಿರುವ ವ್ಯಕ್ತಿಯೇ ಇದನ್ನು ಕೂಡ ಮಾಡಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.
![](https://pratidhvani.com/wp-content/uploads/2024/06/dkkss-1024x614.webp)
ಆ ಮೂಲಕ ಪೆನ್ಡ್ರೈವ್ ಪ್ರಕರಣದ (Pendrive case) ನಂತರ, ಇದೀಗ ಮೂಡ ಹಗರಣದಲ್ಲೂ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ರನ್ನ ಟಾರ್ಗೆಟ್ ಮಾಡಿ ಈ ಹೇಳಿಕೆ ಕೊಟ್ಟಿದ್ದು, ಸಿಎಂ ಸಿದ್ದರಾಮಯ್ಯ (Cm siddaramaiah) ರನ್ನ ಆ ಸ್ಥಾನದಿಂದ ಕೆಳಗಿಳಿಸಿ ತಾವು ಸಿಎಂ ಗಾದಿ ಏರಲು ಡಿಕೆಶಿ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ಹೆಚ್ಡಿಕೆ (HDK) ಈ ಹೇಳಿಕೆ ಕೊಟ್ಟಿದ್ದಾರೆ.