ಬಿಜೆಪಿ(BJP) ಅವರು ಮೂಲೆಗುಂಪು ಮಾಡಿರುವುದರಿಂದ ಅದಕ್ಕೆ ಅವರು ಆಗಾಗ್ಗೇ ಏನೇನೋ ಮಾತಾಡ್ತಿದ್ದಿರಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(Eshwarappa) ವಿರುದ್ಧ ಕಾಂಗ್ರೆಸ್(Congress) ಸಂಸದ ಡಿ.ಕೆ. ಸುರೇಶ್(DK Suresh) ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇತಿಹಾಸ ಏನು ಎಂಬುದು ಎಲ್ಲರಿಗೂ ಗೊತ್ತಿದೆ, ಮಹಾತ್ಮ ಗಾಂಧೀಜಿ ಕೊಂದಂತಹ ಕೀರ್ತಿ ಅವರ ಪಕ್ಷಕ್ಕಿದೆ. ನಾನೊಬ್ಬ ಸಣ್ಣ ವ್ಯಕ್ತಿ, ಕನ್ನಡ ಪರ ಧ್ವನಿ ಎತ್ತಿದ್ದಕ್ಕೆ, ಕರ್ನಾಟಕ ಪರ ಧ್ವನಿ ಎತ್ತಿದ್ದಕ್ಕೆ, ಗುಂಡಿಕ್ಕಿ ಕೊಲ್ಲಿ ಅಂತ ಹೇಳಿದ್ದಾರೆ ಎಂಬ ವರದಿ ಬರ್ತಿದೆ. ಬಡವರನ್ನು ಬಾವಿಗೆ ತಳ್ಳಿ ಏಕೆ ಆಳ ನೋಡ್ತೀರಾ..? ಬಿಜೆಪಿಯವರು ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ ಅನ್ಸುತ್ತೆ, ಅದಕ್ಕೆ ಏನೇನೊ ಮಾತಾಡ್ತಿದ್ದಿರಾ. ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ, ತಾವು ಸಮಯ ಕೊಟ್ಟರೆ ನಾನೇ ನಿಮ್ಮ ಮುಂದೆ ನಿಂತುಕೊಳ್ಳುತ್ತೇನೆ. ಬೇರೆಯವರು ಯಾಕೆ ಗುಂಡಿಟ್ಟು ಕೊಲ್ಲಬೇಕು, ದಯವಿಟ್ಟು ನಿಮ್ಮ ಆಸೆ ಈಡೇರಿಸಿಕೊಂಡು ನಿಮ್ಮ ನಾಯಕರಿಂದ ನೀವೇ ಸಬಾಷ್ ಗಿರಿ ತೆಗೆದುಕೊಳ್ಳಿ ಎಂದು ಟೀಕಿಸಿದರು.
![](https://pratidhvani.com/wp-content/uploads/2022/10/harish-poonja.jpg)
ಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕು ಎಂಬ ಹರೀಶ್ ಪೂಂಜಾ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಒಳ್ಳೆಯದು, ಒಬ್ಬೊಬ್ಬರಾಗಿ ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಮೌನವಾಗಿದ್ರು, ಇಂದು ಚರ್ಚೆ ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ. ನಮ್ಮ ತೆರಿಗೆ ಪಾಲು ಎಷ್ಟಿದೆ ಎಂದು ವರದಿ ಮಾಡ್ತೀದ್ದೀರಾ ಬೇರೆ ರಾಜ್ಯಕ್ಕೆ ಎಷ್ಟು ಟ್ಯಾಕ್ಸ್ ಕೊಡ್ತೀರಾ.? ಕರ್ನಾಟಕ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಬರ್ತಿದೆ, ಯಾವೆಲ್ಲ ಯೋಜನೆ ಕರ್ನಾಟಕಕ್ಕೆ ಸಿಕ್ಕಿದೆ, ಯಾವ ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗ್ತಿದೆ..? ಎಂದು ಪ್ರಶ್ನಿಸಿದರು.
ನಾನೇನು ಭಾರತರ ವಿರೋಧಿ ಅಲ್ಲ ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ, ನಾನು ಸಂವಿಧಾನದ ಆಸೆಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಕೊಲ್ಲಬೇಕು ಎಂದು ಇಚ್ಛಾಶಕ್ತಿ ಇದ್ರೆ, ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ಈಶ್ವರಪ್ಪ ಅವರೇ, ಖಂಡಿತ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ರೆಡಿಯಾಗಿ..
![](https://pratidhvani.com/wp-content/uploads/2024/01/deccanherald_import_sites_dh_files_articleimages_2022_08_09_ashoka-dh-1134441-1659990088-1024x538.webp)
ಡಿ.ಕೆ ಸುರೇಶ್ ರಕ್ಷಣೆ ಮಾಡೋಕೆ, ಕಾಂಗ್ರೆಸ್ ಹೋರಾಟ ಮಾಡ್ತಿದೆ ಎಂದು ಅಶೋಕ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಅಶೋಕ್ ಅವರು ಭವಿಷ್ಯ ಬಿಜೆಪಿಯಲ್ಲಿ, ಕನ್ನಡಿಗರ ಆಸ್ತಿ ಬೇಡ, ಕನ್ನಡಿಗರ ತೆರಿಗೆ ಹಣ ಬೇಡ ಎಂದು ತೀರ್ಮಾನ ಮಾಡಿದ್ದೇ ಅದರೆ ನಮ್ಮ ಹಣ ಬೇಡ, ಎಲ್ಲಾ ಉತ್ತರ ಪ್ರದೇಶಕ್ಕೆ ಕೊಡ್ಲಿ ಎಂದು ಹೇಳೋದಾರೆ. ಉತ್ತರ ಪ್ರದೇಶವೇ ಉದ್ಧಾರ ಆಗ್ಲಿ, ಬಿಹಾರ ಉದ್ಧಾರ ಆಗ್ಲಿ ಎಂಬ ಸ್ಥಾನದಲ್ಲಿ ಇದ್ರೆ ಅದನ್ನು ನೇರವಾಗಿ ಆರ್.ಅಶೋಕ್ ಹೇಳಿ. ಜವಾಬ್ದಾರಿಯುತ ಸ್ಥಾನದಲ್ಲಿ ಆರ್. ಅಶೋಕ್ ಇದಾರೆ, ನಮ್ಮ ಹಣ ಬೇಡ, ನಮಗೆ 13 ಪೈಸೆ ಸಾಕು ಅಂದರೆ ಅದನ್ನೇ ಹೇಳಲಿ. ನಾವು ಉದ್ಯೋಗ ಕೊಡ್ತಿದ್ದೇವೆ, ಬದುಕು ಕೊಡ್ತಿದ್ದೇವೆ, ನೀರು ಕೊಡ್ತಿದ್ದೆವೇ, ತೆರಿಗೆಯಲ್ಲಿ ವಂಚನೆ ಎಷ್ಟು ದಿನ ಸಹಿಸಲಿ. ಬೇಕಾದರೆ ಆರ್.ಅಶೋಕ್ ಚರ್ಚೆಗೆ ಬರ್ಲಿ ಎಂದರು.
#DKSuresh #Congress #LokaSaba #KSEshwarappa #BJPKarnataka