SSC ನೇಮಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಹಣ ನನ್ನದಲ್ಲ ಎಂದು ED ವಶದಲ್ಲಿರುವ ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ನನನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆಯುತ್ತಿದ್ದು ಮತ್ತು ಹಣ ಸಿಕ್ಕಿರುವುದು ನನ್ನಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.

ಸಮಯ ಬಂದಾಗ ನಿಮ್ಮಗೆ ಎಲ್ಲವು ತಿಳಿಯುತ್ತದೆ ನಾನು ರಾಜಕೀಯ ಷಡ್ಯಂತರಗಳಿಗೆ ಬಲಿಯಾಗುತ್ತಿರುವ ಬಲಿಪಶು ಎಂದು ಹೇಳುತ್ತಾ ತಮ್ಮನ್ನು ಉಚ್ಚಾಟಿಸಿರುವ ಬಗ್ಗೆ ಬಹಿರಂಗವಾಹಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನನ್ನು ಅಮಾನತು ಮಾಡಿರುವುದರಿಂದ ನಿಷ್ಪಕ್ಷಪಾತ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ನನ್ನನ್ನು ಸಚಿವ ಸ್ಥಾನದಿಂದ ವಜಾ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.






