ಪ್ರಧಾನಿ ನರೇಂದ್ರ ಮೋದಿ(PM narendra modi) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಕಿಡಿಕಾರಿದ್ದಾರೆ. ʻಪ್ರಧಾನಿ ಮೋದಿ ಈ ದೇಶದ ಪ್ರಧಾನಿ ಎಂಬುದನ್ನು ಮರೆತು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಹೇಳಿದ್ದನ್ನೆ ಹೇಳುತ್ತಿದ್ದಾರೆ. ಬಿಜೆಪಿಯವರ ದುರಂತ ಸ್ಥಿತಿ ಹೇಗಿದೆಯೆಂದರೆ ಹೇಳಿಕೊಳ್ಳಲು ಒಂದೇ ಒಂದು ಕಾರ್ಯಕ್ರಮವಿಲ್ಲ. ಸಾಧನೆ ಇಲ್ಲ. ಮೋದಿಯವರಾದಿಯಾಗಿ ಬಿಜೆಪಿ(BJP) ನಾಯಕರು ಕರ್ನಾಟಕವನ್ನು ನಂಬರ್ ಒನ್ ಮಾಡುತ್ತೇವೆ ಎನ್ನುತ್ತಾರೆ. ಮೋದಿಯವರು ಹೋದ ಎಲ್ಲ ರಾಜ್ಯಗಳಲ್ಲೂ ಹೀಗೆ ಹೇಳುತ್ತಾರೆ. ಇಷ್ಟಕ್ಕೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯೆ ಕರ್ನಾಟಕವು(karnataka) ಅನೇಕ ವಿಚಾರಗಳಲ್ಲಿ ನಂಬರ್ ಒನ್ ಆಗಿತ್ತು. ಕೈಗಾರಿಕೆ, ಸೇವಾ ವಲಯಗಳಲ್ಲಿ ನಾವು ಮುಂದೆಯೇ ಇದ್ದೆವು. ಈ ಪ್ರತಿಷ್ಠೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡಿದೆ.
![](https://pratidhvani.com/wp-content/uploads/2023/05/82979318.webp)
![](https://pratidhvani.com/wp-content/uploads/2023/05/pm-modi-4-16538967554x3-1-1024x768.webp)
ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಇದೆ ಏಪ್ರಿಲ್ ತಿಂಗಳ ಜಿಎಸ್ಟಿ(GST) ಸಂಗ್ರಹದಲ್ಲಿ ಮಹಾರಾಷ್ಟ್ರ 33.19 ಸಾವಿರ ಕೋಟಿ ಸಂಗ್ರಹಿಸಿದ್ದರೆ, ಕರ್ನಾಟಕ 14.59 ಸಾವಿರ ಕೋಟಿ ಸಂಗ್ರಹಿಸಿದೆ. ತಮಿಳುನಾಡು(tamilnadu) 11.55, ಗುಜರಾತ್ 11.72 ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ. ನಮ್ಮ ರಾಜ್ಯದಿಂದ ಈ ವರ್ಷ 2.4-2.5 ಲಕ್ಷ ಕೋಟಿಗಳಷ್ಟು ಆದಾಯ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಎರಡರಿಂದಲೇ ಮೋದಿ ಸರ್ಕಾರ(government) ನಮ್ಮ ರಾಜ್ಯದಿಂದ 4.2 ಲಕ್ಷ ಕೋಟಿ ರೂಪಾಯಿಗಳವರೆಗೆ ತೆರಿಗೆ ಸಂಗ್ರಹಿಸುತ್ತದೆ. ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಶೇ.50ಕ್ಕೂ ಹೆಚ್ಚಿಗೆ ಇದೆ. ಆದರೆ ಮೋದಿ ಸರ್ಕಾರ ನಮಗೆ ನೀಡುವ ತೆರಿಗೆ ಪಾಲು 37 ಸಾವಿರ ಕೋಟಿ ಮಾತ್ರ. ತೆರಿಗೆ ಹಂಚಿಕೆಯ ದರದಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಪಾಲು ಪಡೆಯುವ ರಾಜ್ಯ ಕರ್ನಾಟಕ.(karnataka) ನಮಗೆ ಶೇ.42 ರಷ್ಟು ಪಾಲು ಕೊಟ್ಟರೆ ವರ್ಷಕ್ಕೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಪಾಲನ್ನು ನಮಗೆ ಕೊಡಬೇಕು. ಕೊಡಬೇಕಾದ್ದನ್ನು ಕೊಡದೇ ಕರ್ನಾಟಕವನ್ನು ದಮನಿಸುತ್ತಿರುವುದೆ ಬಿಜೆಪಿ ಸರ್ಕಾರ. ಈ ಕುರಿತು ಮೋದಿಯವರು ಉಸಿರು ಬಿಡುತ್ತಿಲ್ಲ.
![](https://pratidhvani.com/wp-content/uploads/2023/05/Siddaramaiah_Narendra-Modi.jpg)
ದೇಶದ ದೊಡ್ಡ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ(karnataka) ಅತ್ಯಂತ ಕಡಿಮೆ ಪ್ರಮಾಣದ ಅನುದಾನಗಳನ್ನು ರಸ್ತೆ, ರೈಲ್ವೆ ಯೋಜನೆಗಳಿಗೆ ಮೋದಿ ಸರ್ಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಟೋಲ್ಗಳಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ನಮ್ಮ ರಸ್ತೆ ಟೋಲ್ಗಳ ಮೂಲಕವೆ ಮೋದಿ ಸರ್ಕಾರ ವರ್ಷಕ್ಕೆ 3500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜನರಿಂದ ಸುಲಿಗೆ ಮಾಡುತ್ತಿದೆ. ಇದರಲ್ಲಿ ಗುತ್ತಿಗೆದಾರನ ಪಾಲು ಸೇರಿರುವುದಿಲ್ಲ. ಇದಿಷ್ಟೆ ಅಲ್ಲದೆ ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್ಗಳ ಮೇಲೂ ರಸ್ತೆ ಅಭಿವೃದ್ಧಿ ಸೆಸ್ ವಿಧಿಸಿ ಸಾವಿರಾರು ಕೋಟಿ ಸಂಗ್ರಹಿಸುತ್ತಿದೆ.
![](https://pratidhvani.com/wp-content/uploads/2023/05/pjimage-1-1592926350.jpg)
ಮೋದಿಯವರು ಪ್ರಧಾನ ಮಂತ್ರಿಯಾಗಿ(prime minister) ಎರಡು ಅವಧಿ ಮುಕ್ತಾಯಗೊಳಿಸುತ್ತಿದ್ದಾರೆ. ಬಹುಮತದೊಂದಿಗೆ, 9 ವರ್ಷ ಅಧಿಕಾರ ನಡೆಸಿದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷರಿಗೆ ಅವಕಾಶವಿರುವುದೆ ಎರಡು ಅವಧಿ. ನಮ್ಮ ದೇಶವನ್ನು ಅಭಿವೃದ್ಧಿ ಮಾಡಲು, ಅನೇಕ ಕ್ಷೇತ್ರಗಳಲ್ಲಿ ನಂಬರ್ 1 ಮಾಡಲು ಅನೇಕ ಅವಕಾಶಗಳಿದ್ದವು. ಅವುಗಳನ್ನು ಮೋದಿಯವರು ಕೈಯಾರೆ ಹೊಸಕಿ ಹಾಕಿದರು. ಯಾಕೆಂದರೆ ಅವರಿಗೆ ದೇಶದ ಬಡವರು, ಹಿಂದುಳಿದವರು, ಮಹಿಳೆಯವರು, ಅಭಿವೃದ್ಧಿಯಾಗುವುದು ಬೇಕಾಗಿಲ್ಲ. ಈ ವರ್ಗಗಳ ಜನರ ಕೈಯಲ್ಲಿ ಇರುವ ದುಡಿಮೆಯ ಹಣವನ್ನು ಲಪಟಾಯಿಸುವುದು ಹೇಗೆ ಎಂದು ಯೋಜನೆ ರೂಪಿಸುವುದಷ್ಟೆ ಬಿಜೆಪಿಯವರ ಕೆಲಸವಾಗಿದೆ. ಮೋದಿಯವರು ತಂದಿರುವ ಶೇ.98 ರಷ್ಟು ಯೋಜನೆಗಳು ಜನರಿಂದ ವಸೂಲಿ ಮಾಡುವ ಯೋಜನೆಗಳೆ ಹೊರತು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳುವ ಯೋಜನೆಗಳಲ್ಲ. ಈ ಕುರಿತು ಬೇಕಿದ್ದರೆ ಮೋದಿಯವರೆ ಬಹಿರಂಗ ಚರ್ಚೆಗೆ ಬರಲಿ. ಕರ್ನಾಟಕ ರಾಜ್ಯವು ಉಳಿಯಬೇಕಾದರೆ, ತನ್ನ ವೈಭವವನ್ನು ಉಳಿಸಿಕೊಳ್ಳಬೇಕಾದರೆ ಜನರು ಬಿಜೆಪಿಯನ್ನು(BJP) ಸೋಲಿಸಿ ಮನೆಗೆ ಕಳಿಸುವುದೊಂದೆ ದಾರಿ ಎಂಬ ಮಾತನ್ನು ಸಾವಧಾನದಿಂದ ಯೋಚಿಸಿ ತೀರ್ಮಾನಿಸಬೇಕೆಂದು ಜಾಣರಾದ ನಾಡಿನ ಜನರನ್ನು ಕೇಳಿಕೊಳ್ಳುತ್ತೇನೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
![](https://pratidhvani.com/wp-content/uploads/2023/05/WhatsApp-Image-2023-05-02-at-8.36.24-PM-1-1024x143.jpeg)