ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ಬೆಂಗಳೂರು ನಗರದಲ್ಲಿ ನಡೆದಿರುವ ದುರ್ಘಟನೆಗೆ ಈಗಾಗಲೇ ವಿಷಾದ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡು ನ್ಯಾಯಾಂಗ ತನಿಖೆಗೆ ಆದೇಶಿಸಿದೆ . ಆದರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆ ಕೇಳುವ ಬಿಜೆಪಿ ಜೆಡಿಎಸ್ ಇವರ ಬಣ್ಣ ಈಗ ಬಯಲಾಗಿದೆ,

ಭ್ರಷ್ಟ ಬಿಜೆಪಿ ಹಾಗೂ ಜನತಾದಳದ ನಾಯಕರು ಮೊದಲು ಮೋದಿ ರಾಜೀನಾಮೆಗೆ ಒತ್ತಾಯಿಸಬೇಕೆಂದು ಈ ಮೂಲಕ ಆಗ್ರಪಡಿಸುತ್ತಿದ್ದೇವೆ…,
ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ನೀಚತನವನ್ನು ಬಿಟ್ಟು, ಜನರ ಸಮಸ್ಯೆಗೆ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡಬೇಕೆ ಒರೆತು ಸತ್ತವರ ಮನೆಗೆ ಹೋಗಿ ಸಾಂತ್ವನದ ಹೆಸರಿನಲ್ಲಿ ರಾಜಕೀಯ ಮಾಡುವುದಲ್ಲ,
ಬಿಜೆಪಿ,ಜೆಡಿಎಸ್ ನ ಭ್ರಷ್ಟಾಚಾರದ ಪ್ರತಿಯೊಂದು ಮಾಹಿತಿಯನ್ನು ಜನರ ಮನೆಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುತ್ತದೆ,
ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಪಕ್ಷದ ನಾಯಕರು ದಿನನಿತ್ಯ ಸಾವಿನ ಮನೆಯನ್ನು ತಟ್ಟುತ್ತಿದ್ದಾರೆ, ದುರ್ಘಟನೆಗಳಲ್ಲಿ ಮೃತಪಟ್ಟ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳುವ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಇದನ್ನ ದುರುಪಯೋಗಪಡಿಸಿಕೊಂಡು ಕೋಮುಗಲಭೆಗಳನ್ನು ಸೃಷ್ಟಿಸುವ ಹುನ್ನಾರವನ್ನು ನಡೆಸುತ್ತಿದ್ದಾರೆ,

ಈಗಾಗಲೇ ದೇಶದಲ್ಲಿ 11 ವರ್ಷದ ಮೋದಿ ಆಡಳಿತದಲ್ಲಿ ನಡೆದಿರುವ ದುರ್ಘಟನೆಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಆದರೆ ಒಂದು ಬಾರಿಯೂ ಸಹ ದೇಶದ ಪ್ರಧಾನ ಮಂತ್ರಿ ಸತ್ತ ಕುಟುಂಬದ ಬಳಿ ಹೋಗಿ ಸಾಂತ್ವನ ಹೇಳುವ ಮನಸ್ಥಿತಿಯನ್ನು ಹೊಂದಿಲ್ಲ ಎಂಬುದು ಬಹಿರಂಗಾಗಿದೆ,
ದೇಶದಲ್ಲಿ ಭಯೋತ್ಪಾದಕರು ನುಸುಳಿ ಬಂದು ಮುಗ್ಧ ಭಾರತೀಯರನ್ನು ಕೊಂದ ಸಂದರ್ಭದಲ್ಲೂ ಸಹ ಸಾಂತ್ವನ ಹೇಳದೆ ಕುಟುಂಬದ ಬಳಿ ತೆರಳದೆ ಪ್ರಚಾರಕ್ಕಾಗಿ ಬಿಹಾರಕ್ಕೆ ತೆರಳಿದ ಮೋದಿ ಬಿಹಾರದ ಚುನಾವಣೆ ಪ್ರಚಾರದಲ್ಲಿ ತೊಡಗುತ್ತಾರೆ ಇವರಿಗೆ ಜನರ ಮೇಲೆ ಇರುವ ಕಾಳಜಿ ಏನು ಎಂಬುದು ಎತ್ತಿ ತೋರುತ್ತದೆ,
11 ವರ್ಷದ ಮೋದಿ ಆಡಳಿತದಲ್ಲಿ ದೇಶ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ ಅಭಿವೃದ್ಧಿಯಲ್ಲಿ ಶೂನ್ಯ, ನಿರುದ್ಯೋಗ ನಿವಾರಣೆಯಲ್ಲಿ ಶೂನ್ಯ, ದೇಶದ ಆರ್ಥಿಕ ಪರಿಸ್ಥಿತಿ ಶೂನ್ಯ, ಕೇವಲ ಚುನಾವಣೆ ಪ್ರಚಾರದಲ್ಲಿ ಪಕ್ಷವನ್ನ ಗೆಲ್ಲಿಸಿಕೊಳ್ಳುವ ಒಂದಂಶದ ಕಾರ್ಯದಲ್ಲಿ ಮಾತ್ರ ನರೇಂದ್ರ ಮೋದಿ ರವರು ನಿಸ್ಸೀಮರು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ,.

ದೇಶದ ಅಭಿವೃದ್ಧಿಗಿಂತ ಬಿಜೆಪಿ ಹಾಗೂ ಪಕ್ಷದ ನಾಯಕರ ಅಭಿವೃದ್ಧಿಯ ಮುಖ್ಯ ಎಂಬುದು ಈಗ ಜಗತ್ ಜಾಹೀರಾತು,
ಬಿಜೆಪಿ ಆಡಳಿತದಲ್ಲಿ ನಡೆದಿರುವ ದುರ್ಘಟನೆಗಳಿಂದ ಸಾವಿರಾರು ಜನ ಮುಗ್ಧರು ಸಾವನ್ನಪ್ಪಿದ್ದಾರೆ ಇದರ ನೈತಿಕ ಹೊಣೆಯನ್ನ ಪ್ರಧಾನಿ ಹೊರಬೇಕು ಹಾಗೂ ಅನೇಕ ರಾಜ್ಯಗಳಲ್ಲಿ ಕಾನೂನು ವ್ಯವಸ್ಥೆ ಕುಸಿದು ನೂರಾರು ಮಂದಿ ಮುಗ್ಧರು ಸಾವನ್ನಪ್ಪಿದ್ದಾರೆ ಇದಕ್ಕೆ ಬಿಜೆಪಿ ಮುಖ್ಯಮಂತ್ರಿಗಳು ಕಾರಣಕರ್ತರಲ್ಲವೇ ❓
ಅವರ ರಾಜೀನಾಮೆಗೆ ಯಾಕೆ ಒತ್ತಾಯಿಸುತ್ತಿಲ್ಲ❓
ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಜನಪರ ಆಡಳಿತವಿರುವ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸಹಿಸದ ಬಿಜೆಪಿಯ ಭ್ರಷ್ಟರು ಮಾನ್ಯ ಮುಖ್ಯಮಂತ್ರಿಗಳ ಹಾಗೂ ಉಪಮುಖ್ಯಮಂತ್ರಿಯಾಗಳ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ .
ಇವರು ರಾಜೀನಾಮೆ ನೀಡುವ ಮೊದಲು ಮೋದಿ ಅವರ ರಾಜೀನಾಮೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೊಲಗಿದರೆ ರಾಜ್ಯ ಶಾಂತಿಯುತವಾಗಿ ಅಭಿವೃದ್ಧಿ ಯತ್ತ ಸಾಗುತ್ತದೆ,
ಕೇವಲ ರಾಜಕೀಯ ಉಳಿವಿಗಾಗಿ ಜನರ ಮನಸ್ಸನ್ನು ಕೆಣಕಿ ಕೋಮುವಾದ ಹಾಗೂ ಶಾಂತಿ ಭಂಗ ತರುವ ಬಿಜೆಪಿ ನಾಯಕರ ವರ್ತನೆಯ ವಿರುದ್ಧ ಪೋಸ್ಟರ್ ಅಭಿಯಾನ ಪ್ರಾರಂಭಿಸಿ ರಾಜ್ಯದ ಬಿಜೆಪಿಯ ಸಾವಿನ ರಾಜಕೀಯ ಲಾಭದ ಮಾಹಿತಿಯನ್ನು ನೀಡಲಾಗುತ್ತದೆ.

ಗುಜರಾಜಿನ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿ ಸಾವಿನಲ್ಲೂ ರಾಜಕೀಯ ಮಾಡುವ ಹೀನ ಮನಸ್ಥಿತಿ ನಮ್ಮದಲ್ಲ ಎಂದು ಹೇಳಲು ಬಯಸುತ್ತೇವೆ.
ಬಿಜೆಪಿ ಪಕ್ಷದ ಅವಧಿಯಲ್ಲಿ ನಡೆದ ವೈಫಲ್ಯಗಳ ಕುರಿತು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ , ವಿರೋಧಪಕ್ಷದ ನಾಯಕರಾದ ಅಶೋಕ್ , ಕುಮಾರಸ್ವಾಮಿ ಹಾಗೂ ಛಲವಾದಿ ನಾರಾಯಣಸ್ವಾಮಿ ಯವರ ಮುಖವಾಡ ಧರಿಸಿದ ವ್ಯಕ್ತಿಗಳೊಂದಿಗೆ ಕಾಂಗ್ರೇಸ್ ನ ನಾಯಕರಾದ ಶ್ರೀ ಲಕ್ಷ್ಮಣ್ ರವರು ಅಣುಕ ಪ್ರಶ್ನೆಗಳನ್ನು ಕೇಳಿವುದರ ಮುಖಾಂತರ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತ್ತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಶ್ರೀ ಲಕ್ಷ್ಮಣ್ ಶ್ರೀ ಎಂ.ಎ ಸಲೀಂ, ಶ್ರೀ ಎ ಆನಂದ್, ಶ್ರೀ ಆನಂದ್ ಕುಮಾರ್, ಪ್ರಕಾಶ್, ಒಬಳೇಶ್, ಚಿನ್ನಿಪ್ರಕಾಶ್, ಪುಟ್ಟರಾಜು, ಕೆ.ಟಿ ನವೀನ್, ಕುಶಾಲ್ ಹರವೇ ಗೌಡ ,ಸುಂಕದಕಟ್ಟೆ ನವೀನ್,ಶ್ರೀ ಸಾಯಿ ನವೀನ್, ಮಾಧವಹನೂರು, ಸಂಜಯ್ ಶಶಿಮಠ ಸೇರಿದಂತೆ ಹಲವಾರು ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದರು