ಪುರಿ ಜಗನ್ನಾಥ ದೇವರೇ ನರೇಂದ್ರ ಮೋದಿಯವರ (Narendra modi) ಭಕ್ತ ಎಂಬ ಸಂಬಿತ್ ಪಾತ್ರ (sambith pathra) ಹೇಳಿಕೆ ವ್ಯಕ್ತಿ ಪೂಜೆಯ ಅಸಹ್ಯದ ಪರಮಾವಧಿ ಅಂತ ದಿನೇಶ್ ಗುಂಡೂರಾವ್ (Dinesh gundurao) ಟ್ವಿಟ್ ಮಾಡಿ ಕಿಡಿಕಾರಿದ್ದಾರೆ. ಪುರಿ ಜಗನ್ನಾಥನೇ ಮೋದಿಯವರ ಭಕ್ತ ಎಂಬ ಸಂಬಿತ್ ಪಾತ್ರ ಹೇಳಿಕೆ ದೇಶಾದ್ಯಾಂತ ಕೋಟ್ಯಂತರ ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://pratidhvani.com/wp-content/uploads/2022/09/Dinesh_Gundu_Rao_EPS.jpg)
ಈ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದರೂ ಮೋದಿಯವರು ಏಕೆ ಈ ಬಗ್ಗೆ ಮೌನವಾಗಿದ್ದಾರೆ. ಎಲ್ಲ ವಿಶಯಗಳ ಮತಾನಡುವ ಅವರು ಈ ಬಗ್ಗೆ ಬಾಯಿ ಬಿಡದೇ ಸುಮ್ಮನಿರುವುದರ ಅರ್ಥವೇನು ಎಮದು ಪ್ರಶ್ನಿಸಿದ್ದಾರೆ.
ಮೋದಿ ಅವರ ಮೌನದ ಅರ್ಥ ತಾವು ದೇವರಿಗಿಂತ ದೊಡ್ಡವನು ಎಂಬ ಸಂಬಿತ್ ಪಾತ್ರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ತಿಳಿದುಕೊಳ್ಳಬೇಕಾ? ಸ್ವಘೋಷಿತ ವಿಶ್ವಗುರು ಮೋದಿಯವರು ಈಗ ಸ್ವಘೋಷಿತ ದೇವಮಾನವರಾಗಲು ಹೊರಟಿದ್ದಾರಾ? ಅಂತ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.