• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮೋದಿ ನಗುಮೊಗದ ಜಾಹೀರಾತು: ಟೀಕೆಗೆ ಗುರಿಯಾಯ್ತು ಬಿಜೆಪಿ ಆದ್ಯತೆ

Shivakumar by Shivakumar
April 22, 2021
in ದೇಶ
0
ಮೋದಿ ನಗುಮೊಗದ ಜಾಹೀರಾತು: ಟೀಕೆಗೆ ಗುರಿಯಾಯ್ತು ಬಿಜೆಪಿ ಆದ್ಯತೆ
Share on WhatsAppShare on FacebookShare on Telegram

ಕೋವಿಡ್ ಸೋಂಕಿತರು ಉಸಿರಾಟದ ಗಂಭೀರ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಆಮ್ಲಜನಕ ಸಿಗದೆ, ಔಷಧ ಸಿಗದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ ಹಾದಿ ಬೀದಿಯಲ್ಲಿ ಜೀವ ಬಿಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತೀರಾ ಗುರುತು ಪರಿಚಿತರೇ ಇಂತಹ ಜೀವ ಹಿಂಡುವ ದುರಂತಕ್ಕೆ ಈಡಾಗುತ್ತಿದ್ದಾರೆ.

ADVERTISEMENT

ಇಂಥ ದುರವಸ್ಥೆಯ ನಡುವೆ ರಾಜ್ಯದ ಜನತೆ ಜೀವ ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುತ್ತಿರುವಾಗ ಸರ್ಕಾರದ ಆದ್ಯತೆಗಳು ಏನಾಗಬೇಕಿತ್ತು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆದ್ಯತೆ ಏನಾಗಿದೆ ಎಂಬುದಕ್ಕೆ ಇಂದಿನ ದಿನಪತ್ರಿಕೆಗಳ ಮುಖಪುಟ ಸಾಕ್ಷಿಯಾಗಿದೆ.

ಆಮ್ಲಜನಕದ ಸಿಲಿಂಡರ್ ಇಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ಸೇರಿಸಿಕೊಳ್ಳದೇ ಹೊರಹಾಕಲಾಗುತ್ತಿದೆ. ಆಮ್ಲಜನಕ ಉತ್ಪಾದನೆಗೆ, ಔಷಧಿ ಖರೀದಿಗೆ, ಕೋವಿಡ್ ಲಸಿಕೆ ಖರೀದಿಗೆ, ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ, ಅವರಿಗೆ ಅಗತ್ಯ ಜೀವರಕ್ಷಕ ಸಲಕರಣೆ, ಸೌಲಭ್ಯ ಒದಗಿಸಲು, ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ನೆಪ ಹೇಳಲಾಗುತ್ತಿದೆ. ಪರಿಣಾಮವಾಗಿ ದಿನಕ್ಕೆ ನೂರಾರು ಮಂದಿ ಸಕಾಲಿಕ ಚಿಕಿತ್ಸೆ ಸಿಗದೆ, ಆಮ್ಲಜನಕ ಸಿಗದೆ ಜೀವ ಬಿಡುತ್ತಿದ್ದಾರೆ.

ಆದರೆ, ಮತ್ತೊಂದು ಕಡೆ ಸುಮಾರು 14,800 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ಪಡೆದುಕೊಂಡಿದೆ! ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಭವಿಷ್ಯದ ಸಂಚಾರ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂತಹದ್ದೊಂದು ಕಾಮಗಾರಿಯ ಅಗತ್ಯವನ್ನು ಯಾರೂ ನಿರಾಕರಿಸಲಾಗದು. ಆದರೆ, ಆ ಕಾಮಗಾರಿಗೆ ಸಾವಿರಾರು ಕೋಟಿ ಸುರಿದು ಈಗಲೇ ಕಾಮಗಾರಿ ಆರಂಭಿಸಬೇಕಾದ ತುರ್ತು ಏನಿತ್ತು ಎಂಬುದು ಪ್ರಶ್ನೆ. ಕರೋನಾದಿಂದ ಇಡೀ ರಾಜ್ಯದ ಜನರ ಜೀವವೇ ಅಪಾಯದಲ್ಲಿರುವಾಗ ಜನರ ಜೀವ ರಕ್ಷಣೆ ಮತ್ತು ಅದಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ಸೌಲಭ್ಯ-ಸೇವೆಗಳಿಗೆ ಹಣದ ಕೊರತೆ ಇದೆ ಎನ್ನುವ ಸರ್ಕಾರ, ಅದೇ ಹೊತ್ತಿಗೆ ಹೀಗೆ ತೀರಾ ಒಂದೆರಡು ವರ್ಷ ವಿಳಂಬವಾದರೂ ಪ್ರಳಯವೇನೂ ಆಗದ ಇಂತಹ ರೈಲ್ವೆ ಯೋಜನೆಗೆ ಸಾವಿರಾರು ಕೋಟಿ ಹೂಡುತ್ತಿರುವುದು ಈ ಬಿಜೆಪಿ ಸರ್ಕಾರಕ್ಕೆ ಜನರ ಜೀವಕ್ಕಿಂತ ಬೃಹತ್ ಯೋಜನೆಗಳೇ ಆದ್ಯತೆ ಎಂಬುದನ್ನು ಸಾರಿ ಹೇಳುತ್ತಿದೆ.

ಕರೋನ ಬಿಕ್ಕಟ್ಟು ನಿರ್ವಹಿಸಲು ಜಿಲ್ಲೆಗಳಲ್ಲಿ ಹಣವಿಲ್ಲ ಆದರೆ ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನ್ಯೂಸ್‌ ಪೇಪರ್‌ ಮುಖಪುಟಕ್ಕೆ ಪ್ರಧಾನಿ ಮಂತ್ರಿಯವರ ಪೋಟೋ ಜಾಹಿರಾತು ಹಾಕಿಸಿ ಮೆಚ್ಚಿಸುವುದಕ್ಕೆ ಸರ್ಕಾರದ ಬಳಿ ಹಣವಿದೆಯೇ. ನಮ್ಮಲ್ಲಿ ಸೂಕ್ಷ್ಮತೆ ಇಲ್ಲದ ಸರ್ಕಾರವಿದೆ ಎಂದು ಟ್ವೀಟರ್‌ ನಲ್ಲಿ @PriyankKharge ಪ್ರಶ್ನಿಸಿದ್ದಾರೆ. pic.twitter.com/d7HRlIlEfF

— Pratidhvani (@PratidhvaniNews) April 22, 2021

ಬೃಹತ್ ಯೋಜನೆಗಳಿಗೆ ಹೀಗೆ ತರಾತುರಿಯಲ್ಲಿ ಅನುಮೋದನೆ ಪಡೆದು, ಹಣ ಹೂಡಲು ಕಾರಣ ಹಲವು. ಮುಖ್ಯವಾಗಿ ಬೃಹತ್ ಯೋಜನೆಗಳ ಕಾಮಗಾರಿಯಲ್ಲಿ ಸಿಗುವ ಪರ್ಸೆಂಟೇಜ್ ಕಮೀಷನ್ ಆಳುವ ಮಂದಿಯಿಂದ ಇಂತಹ ಅವಿವೇಕದ ಕೆಲಸ ಮಾಡಿಸುತ್ತದೆ. ಅದರ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ ವಿಷವರ್ತುಲದ ಹುನ್ನಾರ ಅಡಗಿದೆ ಎಂಬುದು ಗುಟ್ಟೇನು ಅಲ್ಲ.

ಆ ಹಿನ್ನೆಲೆಯಲ್ಲಿ ಅನುಮೋದನೆ ಪಡೆದ ಸಿಎಂ ಯಡಿಯೂರಪ್ಪ, ಅನುಮೋದನೆ ಕೊಟ್ಟಿರುವ ಪ್ರಧಾನಿ ಮೋದಿ, ಬಿಜೆಪಿ ಪಕ್ಷಗಳಿಗೆ ಜನ ನಿಮ್ಮ ಆದ್ಯತೆ ಏನು ಎಂಬ ಪ್ರಶ್ನೆ ಮುಂದಿಟ್ಟು ತೀವ್ರ ಟೀಕೆಗೆ ಗುರಿಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಕನ್ನಡ ದಿನಪತ್ರಿಕೆಗಳಲ್ಲಿ ಇಂದು ಪ್ರಕಟವಾಗಿರುವ ಪೂರ್ಣಪುಟದ ಮುಖಪುಟ ಜಾಹೀರಾತಿನ ಚಿತ್ರಗಳನ್ನು ಹಂಚಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡದ ಪ್ರಜಾವಾಣಿ, ವಿಜಯವಾಣಿ, ವಿಜಯಕರ್ನಾಟಕ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತ ಸೇರಿದಂತೆ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಚಿತ್ರಗಳೇ ತುಂಬಿದ್ದು, ಮೆಟ್ರೋ ಯೋಜನೆ ಎರಡನೇ ಹಂತಕ್ಕೆ ಅನುಮೋದನೆ ನೀಡಿದ್ದಕ್ಕಾಗಿ ಸಿಎಂ, ಪಿಎಂಗೆ ಧನ್ಯವಾದ ಅರ್ಪಿಸಲು ಈ ಜಾಹೀರಾತು ನೀಡಲಾಗಿದೆ. ಕೇಂದ್ರ ಸರ್ಕಾರವೊಂದು ರಾಜ್ಯ ಸರ್ಕಾರಕ್ಕೆ, ರೈಲ್ವೆಯಂತಹ ಕೇಂದ್ರದ ಪಟ್ಟಿಗೆ ಸೇರುವ ಕಾಮಗಾರಿಯ ಯೋಜನೆಗೆ ಅನುಮೋದನೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಸಹಜ ಆಡಳಿತಾತ್ಮಕ ಪ್ರಕ್ರಿಯೆ. ಅದಕ್ಕಾಗಿ ಪ್ರಧಾನಿಗೆ ಧನ್ಯವಾದ ಹೇಳಲು ಕರ್ನಾಟಕವೇನೂ ಭಾರತದ ಒಕ್ಕೂಟ ವ್ಯವಸ್ಥೆಯಿಂದ ಹೊರಗಿರುವ ಯಾವುದೋ ದೇಶದ ಭಾಗವೇ? ಎಂದು ನೆಟ್ಟಿಗರು ಸಿಎಂ ಮತ್ತು ಕರ್ನಾಟಕ ಸರ್ಕಾರದ ಭಟ್ಟಂಗಿತನವನ್ನು ಪ್ರಶ್ನಿಸಿದ್ದಾರೆ.

No money to battle #Corona, districts are gasping with lack of funds to manage the pandemic. But there is always room to please the PM with full page ads during these hard times. We have the most insensitive Govt, what are they these paeans for?
⁦@CMofKarnataka⁩ ⁦⁩ pic.twitter.com/nEizVcE7as

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 22, 2021

ಇದೇ ಮಾತನ್ನೂ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಪ್ರಸ್ತಾಪಿಸಿದ್ದು, ರಾಜ್ಯದ ಜನತೆ ಕರೋನಾ ಚಿಕಿತ್ಸೆ ಸಿಗದೆ ಸಾಯುತ್ತಿರುವಾಗ, ಇಡೀ ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಇಂತಹ ಯೋಜನೆಗೆ ಹಣ ಕೊಟ್ಟದ್ದನ್ನೇ ನೆಪ ಮಾಡಿಕೊಂಡು ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿ ಪ್ರಧಾನಿ ಮೋದಿಯ ಗುಣಗಾನ ಮಾಡುವುದು ಹೊಣೆಗೇಡಿತನ. ಜನ ನೋವಿನಲ್ಲಿರುವಾಗ ಪ್ರಧಾನಿಯ ನಗುಮೊಗದ ಜಾಹೀರಾತು ನೀಡಿ, ಜನರ ನೋವನ್ನು ಅಣಕಿಸಲಾಗುತ್ತಿದೆ. ಇದು ಆತ್ಮಸಾಕ್ಷಿಯ ನಡೆಯಲ್ಲ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಜನ ಸಾವುನೋವಿನಲ್ಲಿ ನರಳುತ್ತಿರುವಾಗ, ಜನರ ಜೀವ ಉಳಿಸುವುದು ಆದ್ಯತೆಯಾಗಬೇಕಾದ ಹೊತ್ತಲ್ಲಿ ಸಾವಿರಾರು ಕೋಟಿ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿ, ನೂರಾರು ರೂಪಾಯಿ ಔಷಧ, ಆಮ್ಲಜನಕಕ್ಕೆ ದುಡ್ಡಿಲ್ಲವೆಂದು ಜನರನ್ನು ಹಾದಿಬೀದಿ ಹೆಣ ಮಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಜನರ ಸಂಕಷ್ಟದ ನಡುವೆ ಮೂರ್ನಾಲ್ಕು ಕೋಟಿ ರೂ. ಜಾಹೀರಾತು ನೀಡಿ, ನಗುಮೊಗದ ಪೋಜು ಕೊಟ್ಟು ಬಡವರ ಸಂಕಷ್ಟ ಅಣಕಿಸುವುದು ಮತ್ತೊಂದು ಕಡೆ! ಇದು ಬಿಜೆಪಿಯ ಜನಪರ ಆಡಳಿತಕ್ಕೆ ಒಂದು ತಾಜಾ ನಿದರ್ಶನ ಎಂಬ ನೆಟ್ಟಿಗರ ಆಕ್ರೋಶಕ್ಕೆ ಎಚ್ ಡಿ ಕುಮಾರಸ್ವಾಮಿ ತಮ್ಮ ಟ್ವೀಟ್ ಮೂಲಕ ದನಿ ನೀಡಿದ್ದಾರೆ.

Previous Post

ಸೀತಾರಾಮ್ ಯೆಚೂರಿ ಪುತ್ರ ಆಶಿಶ್ ಯೆಚೂರಿ ಕರೋನಾಗೆ ಬಲಿ

Next Post

ರೈಲ್ವೆ ಹಳಿಯಿಂದ ಮಗುವನ್ನು ಉಳಿಸಿದ ಮಯೂರ್ ಶೆಲ್ಕೆಗೆ 50,000 ನಗದು, ಜಾವಾ ಬೈಕ್ ಬಹುಮಾನ

Related Posts

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ
ದೇಶ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

by ಪ್ರತಿಧ್ವನಿ
January 28, 2026
0

ನವದೆಹಲಿ: ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದೊಂದಿಗೆ, ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ...

Read moreDetails
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

January 27, 2026
ಕೋರ್ಟ್‌ಗೆ ಹಾಜರಾದ ರಾಜೀವ್‌ ಗೌಡ : ಕೈ ಮುಖಂಡನಿಗೆ ಜೈಲಾ? ಬೇಲಾ..?

ಕೋರ್ಟ್‌ಗೆ ಹಾಜರಾದ ರಾಜೀವ್‌ ಗೌಡ : ಕೈ ಮುಖಂಡನಿಗೆ ಜೈಲಾ? ಬೇಲಾ..?

January 27, 2026
400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?

400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?

January 27, 2026
Next Post
ರೈಲ್ವೆ ಹಳಿಯಿಂದ ಮಗುವನ್ನು ಉಳಿಸಿದ ಮಯೂರ್ ಶೆಲ್ಕೆಗೆ 50,000 ನಗದು, ಜಾವಾ ಬೈಕ್ ಬಹುಮಾನ

ರೈಲ್ವೆ ಹಳಿಯಿಂದ ಮಗುವನ್ನು ಉಳಿಸಿದ ಮಯೂರ್ ಶೆಲ್ಕೆಗೆ 50,000 ನಗದು, ಜಾವಾ ಬೈಕ್ ಬಹುಮಾನ

Please login to join discussion

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada