ಹುಬ್ಬಳ್ಳಿ: ನಾವು ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸ ಪಠಣ ಮಾಡಿಸ್ತೀವಿ, ಪಾಕಿಸ್ತಾನದ ಲಾಹೋರಿನಲ್ಲಿ ಗಣಪತಿ ಕೂರಿಸ್ತೀವಿ, ಅಫಘಾನಿಸ್ತಾನದ ಬಾರ್ಡರ್ ವರೆಗೂ ಹೋಗಿ ಬರ್ತೀವಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈಸುದ್ದಿಯನ್ನು ಸಹ ಓದಿ: ಕಂಡಕ್ಟರ್ಗಳಿಗೆತಲೆನೋವಾದಶಕ್ತಿಯೋಜನೆ: ಸಭೆ ನಡೆಸುವಂತೆಎಂಡಿಗೆ ಪತ್ರ..!
ನಗರದ ಈದ್ಗಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿ ತೆರೆದ ವಾಹನದಲ್ಲಿ ಮಾತನಾಡಿದ ಅವರು, 2024ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಇದು ಸತ್ಯ. ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ. ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದೀವಿ. ಇದೇ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ. ಇನ್ನು ಮುಂದಿನ ವರ್ಷ 11 ದಿನಗಳ ಕಾಲ ಇದೇ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಿಯೇ ತಿರುತ್ತೇವೆ ಎಂಗು ಹೇಳಿದರು.