
ವಿಜಯಪುರದಲ್ಲಿ ಏಳನೇ ದಿನದ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, Basanagowda Patil Yatnal,)ಕಾರ್ಯಕ್ರಮ ಉದ್ದೇಶಿಸಿ ಯತ್ನಾಳ್ ಭಾಷಣ ಮಾಡಿದ್ದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಹೀನಾಮಾನವಾಗಿ ಮಾತನಾಡಿದ್ದಾರೆ.(badly about the leader Rahul Gandhi.)
ಕಾಂಗ್ರೆಸ್ನವರ (Congress)ಕಾರಣದಿಂದ ಬಾಂಗ್ಲಾ ದೇಶದಂತೆ (Bangladesh)ಇಲ್ಲಿಯೂ ದಂಗೆ ಆಗುತ್ತದೆ. ಪಶ್ವಿಮ ಬಂಗಾಳದಲ್ಲಿ ಒಂದು ದೆವ್ವವಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧವೂ ವಾಗ್ವಾಳಿ ಮಾಡಿದ್ದಾರೆ. ಗಣಪತಿ ಮೆರವಣಿಗೆ ಮಾಡುತ್ತಿದ್ದರೆ ಕೆಲ ಕಳ್ಳ ಸೂ… ಮಕ್ಕಳಿಗೆ ಸಮಾಧಾನ ಇಲ್ಲ.ಗಾಂಧಿ, ನೆಹರು ಕೂಡಿಕೊಂಡು ಮಾಡಿರೋ ಪಾಕಿಸ್ತಾನಕ್ಕೆ ಹೋಗಿ ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಮೋದಿ, ಯೋಗಿ ಇರೋವರೆಗೂ ನೀವು ಇಲ್ಲಿ ಬಾಲಾ ಬಿಚ್ಚಲು ಆಗಲ್ಲ. ಇಲ್ಲಿ ಇರಬೇಕೆಂದರೆ ಚೆಂದ ಇರಬೇಕು ಎಂದು ವಾರ್ನ್ ಮಾಡಿದ ಯತ್ನಾಳ್. ನಿಮ್ಮಪ್ಪ ಹುಟ್ಟಿರೋದು ಯಾವಾಗ ಎಂಬುದರ ಇಸ್ವಿ ಇದೆ. ಪೈಗಂಬರ್, ಏಸು ಹುಟ್ಟಿದ ವರ್ಷವೂ ಇದೆ. ಆದರೆ ದೇವರಿಂದ ಉದಯವಾದ ಧರ್ಮ ಸನಾತನ ಧರ್ಮ ಎಂದು ಅಬ್ಬರಿಸಿದ್ದಾರೆ. ನಮ್ಮಲ್ಲಿ ಖಾವಿ ಹಾಕಿರೋ ಕೆಲವು ಲಫಂಗ ಸ್ವಾಮಿಗಳು ಇದ್ದಾರೆ. ಲಿಂಗಾಯತ ಹಾಗೂ ಇಸ್ಲಾಂ ಒಂದೇ ಎನ್ನುತ್ತಾರೆ. ಇದಕ್ಕೆ ನಾಚಿಕೆಯಾಗಬೇಕು, ‘ನೀನು ದನ ತಿಂತಿಯಾ’..? ವಿಭೂತಿ ಯಾಕ್ ಹಚ್ಚಿಕೊಳ್ತಿಯಾ.? ಎಂದು ಪರೋಕ್ಷವಾಗಿ ಸಾಣೆಹಳ್ಳಿ ಶ್ರೀಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೀಸಲಾತಿ ವಿಚಾರ ಮಾತನಾಡಿರುವ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಯತ್ನಾಳ್, ಅಮೇರಿಕದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ದಲಿತರ ಮೀಸಲಾತಿ ತೆಗಿಯುವ ಮಾತನಾಡಿದ್ದಾರೆ ಎಂದಿರುವ ಯತ್ನಾಳ್, ಅಮೆರಿಕದಲ್ಲಿ ಹೋಗಿ ದೇಶದ್ರೋಹಿ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಯಾವ ಜಾತಿಯಲ್ಲಿ ಹುಟ್ಟಿದ್ದಾನೆಂದು ಅವನಿಗೆ ಗೊತ್ತಿಲ್ಲ. ಆತನ ಹುಟ್ಟಿನ ಕುರಿತು ತನಿಖೆ ಆಗಬೇಕಿದೆ. ಅಪ್ಪ ಬೇರೆ, ಅವ್ವ ಬೇರೆ, ಅವ್ವ ಇಟಲಿಯವರು, ಅಪ್ಪ ಮೊಘಲರ ಕೈಯಲ್ಲಿ ಕೆಲಸ ಮಾಡಿದವನ ಮರಿ ಮೊಮ್ಮಗ. ಕಂಟ್ರಿ ಪಿಸ್ತೂಲ್ ಇದ್ದಂಗೆ. ಮೀಸಲಾತಿ ಬಗ್ಗೆ ದಲಿತರು ಯಾಕೆ ಮಾತನಾಡುತ್ತಿಲ್ಲ..? ಲದ್ದಿ ಜೀವಿಗಳು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ನನಗೆ ಮುಸ್ಲಿಂರಿಂದ ಭಯವಿಲ್ಲ, ನಮ್ಮವರಿಂದ ಭಯವಿದೆ ಎಂದು ಸಾವರ್ಕರ್ ಹೇಳಿದ್ದರು. ದೇಶದಲ್ಲಿ 12 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ, ನಾಲಾಯಕ ನೆಹರು ವಕ್ಫ್ ಕಾಯಿದೆ ಮಾಡಿದ. ನಾವು ವಕ್ಫ್ ಕಾನೂನು ಜಾರಿ ಮಾಡುತ್ತೇವೆ. ಇನ್ನು ಮೇಲೆ ನಾವೆಲ್ಲ ಒಗ್ಗಟ್ಟಾಗಿರಬೇಕು. ಗಣಪತಿಗೆ ಪರವಾನಿಗೆ ಇಲ್ಲದೇ ಇಡುವಂತ ಸಿಎಂ ಬೇಕು. ಗಣಪತಿ ಮೇಲೆ ಕಲ್ಲು ಹಾಕಿದರೆ ಬುಲ್ಡೋಜರ್ ಹರಿಸೋ ಸಿಎಂ ಬೇಕು ಎಂದಿರುವ ಯತ್ನಾಳ್, ಮಂಡ್ಯ ಜಿಲ್ಲೆ ನಾಗಮಂಗಲದ ಘಟನೆ ಪ್ರಸ್ತಾಪಿಸಿ, ಮುಸ್ಲಿಮರ ಜೊತೆಗೆ ಯಾವುದೇ ವ್ಯವಹಾರ ಮಾಡಬೇಡಿ. ರಾತ್ರಿ ದನ ತಿಂದವರ ಬಳಿ ಹಾರ ಖರೀದಿಸಬೇಡಿ. ಹಿಂದೂಗಳ ಬಳಿ ಹಾರ ಖರೀದಿಸಿ, ನಮ್ಮವರಿಗೆ ಹೆಚ್ಚು ಹಣಕೊಡಿ ಪರವಾಗಿಲ್ಲ. ಆದರೆ ಮುಸ್ಲಿಮರ ಜೊತೆ ವ್ಯಾಪಾರ ಮಾಡಬೇಡಿ ಎಂದು ಕರೆ ನೀಡಿದ್ದಾರೆ.