ಜಾತಿ ಗಣತಿಗೆ(Caste census)ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ನಾಳೆ ಮೀಟಿಂಗ್ ಕರೆದಿದ್ದೇವೆ,ಕ್ಯಾಬಿನೆಟ್ ನಲ್ಲಿ ಚರ್ಚೆ (Cabinet meeting) ಮಾಡ್ತೇವೆ. ಹೀಗಾಗಿ ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತೇವೆ.ಇದರ ಜೊತೆಗೆ ಜಾತಿ ಗಣತಿ ಅಲ್ಲ, ಇದೊಂದು ಸೋಷಿಯೋ ಎಕಾನಾಮಿಕ್ ಸರ್ವೆ ಎಂದಿದ್ದಾರೆ.

ಈ ವರದಿಯಿಂದ ಯಾರಿಗೂ ಅನ್ಯಾಯ ಆಗಲ್ಲ, ಅನ್ಯಾಯ ಆಗಕ್ಕೆ ನಾವು ಬಿಡಲ್ಲ ಎಂದಿದ್ದಾರೆ. ಇನ್ನು ಚನ್ನಗಿರಿ ಶಾಸಕ ಶಿವಗಂಗಾ, ಲಿಂಗಾಯತ ಶಾಸಕರು ಸಾಮೂಹಿಕ ರಾಜಿನಾಮೆ ನೀಡಬೇಕು ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ,ಅವರು ಕ್ಯಾಬಿನೆಟ್ ಮಿನಿಸ್ಟರ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ.