ರಾಜ್ಯ ಸರ್ಕಾರಕ್ಕೆ ಸದ್ಯ ಸಂಪುಟ ಪುನಾರಚನೆ ಟಾಸ್ಕ್ ಎದುರಾಗಿದ್ದು, ಈ ಮಧ್ಯೆ ಒಂದೊಂದೇ ನಾಯಕರು ಎದ್ದು ನಿಲ್ಲಲು ಶುರು ಮಾಡಿದ್ದಾರೆ. ಇದೀಗ ನನಗೆ ಮಂತ್ರಿ ಸ್ಥಾನ ಸಿಗಲೇಬೇಕು, ಸಿಎಂ ಮತ್ತು ಡಿಸಿಎಂ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ಇಂದು ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡುವ ಕೆಲಸಕ್ಕೆ ಮುಂದಾಗುವುದಿಲ್ಲ. ಈಗಿನ ಉಪ ಚುನಾವಣೆಯಲ್ಲಿ ನಾನು ಮಾಡಿದ ಕೆಲಸ ಹೈಕಮಾಂಡ್ಗೆ ಗೊತ್ತಿದೆ ಎಂದಿದ್ದಾರೆ.
ಹೀಗಾಗಿ ಬಹಳಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದೇವೆ. ಸೋ ಖಂಡಿತ ಪ್ರಮೋಶನ್ ಬೇಕೇಬೇಕು ಎಂದ ಅವರು, ಸಿಪಿ ಯೋಗೇಶ್ವರ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯೇ ಆಗಿದ್ದಾರೆ. ಮಿನಿಸ್ಟರ್ ಆಗೋದಕ್ಕೆ ಯಾರಿಗೆ ತಾನೇ ಆಸೆ ಇರಲ್ಲ? ನನಗೂ ಕೂಡ ಆಸೆ ಇದೆ ಎಂದಿದ್ದಾರೆ.