• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಆಗಸ್ಟ್ 1ರಿಂದ ವಿಶ್ವದಾದ್ಯಂತ ತೆರೆ ಕಾಣಲಿರುವ‌ “ಮಿರಾಯ್”

ಪ್ರತಿಧ್ವನಿ by ಪ್ರತಿಧ್ವನಿ
February 23, 2025
in ಸಿನಿಮಾ
0
ಆಗಸ್ಟ್ 1ರಿಂದ ವಿಶ್ವದಾದ್ಯಂತ ತೆರೆ ಕಾಣಲಿರುವ‌ “ಮಿರಾಯ್”
Share on WhatsAppShare on FacebookShare on Telegram

ಬಹು ಬೇಡಿಕೆಯ ನಟ ಹನು-ಮ್ಯಾನ್ ಖ್ಯಾತಿಯ ತೇಜಾ ಸಜ್ಜಾ ಅವರ ಮುಂದಿನ ಚಿತ್ರ “ಮಿರಾಯ್” ಇದೇ ಆಗಸ್ಟ್ 1ರಿಂದ ವಿಶ್ವದಾದ್ಯಂತ ತೆರೆ ಕಾಣಲಿದೆ.

ADVERTISEMENT

ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿ, ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಡಿಯಲ್ಲಿ‌ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ “ಮಿರಾಯ್” ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದು, ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿ ಮತ್ತಷ್ಟು ಸುದ್ದಿ ಮಾಡಿದೆ.

ಭಾರತೀಯ ಚಿತ್ರರಂಗದ ಉದಯೋನ್ಮುಖ ನಟ, ರೈಸಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ತೇಜಾ ಸಜ್ಜಾ ಸೂಪರ್ ಹೀರೋ ಚಿತ್ರಗಳನ್ನು ಭಾರತ ಚಿತ್ರರಂಗಕ್ಕೆ ನೀಡುವ ಗುರಿಯನ್ನು ಹೊಂದಿದ್ದು,‌ಅದಕ್ಕಾಗಿ‌ ಹನು-ಮ್ಯಾನ್ ಮುನ್ನುಡಿಯಾಗಿತ್ತು. ಇದೀಗ ಅವರ “ಮಿರಾಯ್” ಚಿತ್ರ ಈ‌ ಸೂಪರ್ ಹೀರೋ ಚಿತ್ರಗಳನ್ನು ಮೂರು ವ್ಯಾಖ್ಯಾನಿಸಲಿದೆ ಎಂಬುದು ಸಿನಿ ಪ್ರೇಮಿಗಳ ಅಭಿಪ್ರಾಯವಾಗಿದೆ. “ಮಿರಾಯ್” ಒಂದು ಆಕ್ಷನ್- ಸಾಹಸಗಳ ಚಿತ್ರವಾಗಿದ್ದು, ಇದರಲ್ಲಿ ತೇಜಾ ಸಜ್ಜಾ ಒಬ್ಬ ಸೂಪರ್‌ ಯೋಧನ‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ‌.

ಈ‌ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆಗಸ್ಟ್ 1ರಿಂದ 8 ಭಾಷೆಗಳಲ್ಲಿ, 2D ಮತ್ತು 3D ವಿಧಾನಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆ ಮಾಡಿರುವ‌ ರಿಲೀಸ್ ದಿನಾಂಕದ ಪೋಸ್ಟರ್‌ ಅಲ್ಲಿ, ತೇಜಾ ಸಜ್ಜಾ ಹಿಮ ಪರ್ವತಗಳ ನಡುವೆ ಆಯುಧ ಒಂದನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಚಿತ್ರದ ಭವ್ಯತೆಯನ್ನು ಈ ಪೋಸ್ಟರ್ ಒಂದರಲ್ಲಿ‌ ಕಾಣಬಹುದು.

“ಮಿರಾಯ್” ಚಿತ್ರವು ಭವ್ಯ ತಾರಾಗಣವನ್ನೇ ಹೊಂದಿದೆ. ಟಾಲಿವುಡ್ ನ ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನ ಪಾತ್ರ ವಹಿಸುತ್ತಿರುವುದು ವಿಶೇಷ ಸಂಗತಿಯಾಗಿದೆ. ರಿತಿಕಾ ನಾಯಕ್ ಚಿತ್ರದ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಮತ್ತೊಂದು ವಿಶೇಷವೆಂದರೆ, ಚಿತ್ರ ತಂಡ ಬಿಡುಗಡೆ ಮಾಡಿರುವ ಪ್ರೋಮೋ ವಿಡಿಯೋಗಳು, ಅದರಲ್ಲಿ ನಟ ತೇಜಾ ಸಜ್ಜಾ ಅವರ ಸಾಹಸ‌ ದೃಶ್ಯಗಳು,‌
ಸಿನಿಮಾ ಮೇಲೆ ಆತನಿಗಿರುವ‌ ಗೌರವ, ಇವೆಲ್ಲವೂ ಪ್ರೇಕ್ಷಕರ ಗಮನ‌ ಸೆಳೆದಿವೆ. ತೇಜಾ ಸಜ್ಜಾ ಸೂಪರ್ ಯೋಧನ‌ ಪಾತ್ರಕ್ಕೆ ಜೀವ‌ ತುಂಬಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಕಾರ್ತಿಕ್ ಘಟ್ಟಮನೇನಿ ನಿರ್ದೇಶನದಲ್ಲಿ ಹಿಂದೆಂದೂ ಕಾಣದಷ್ಟು ಭರ್ಜರಿಯಾಗಿ “ಮಿರಾಯ್” ಚಿತ್ರ ಮೂಡಿ‌ಬರಲಿದೆ ಎಂಬುದು ಸಿನಿ‌ ತಂಡದ ಅಭಿಪ್ರಾಯವಾಗಿದೆ. ಈ ಚಿತ್ರವು ಆಕ್ಷನ್- ಸಾಹಸ ಚಿತ್ರಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬ ವಿಷಯ ಮತ್ತಷ್ಟು ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದಿ.

“ಮಿರಾಯ್” ಚಿತ್ರದಲ್ಲಿ ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮುಖ್ಯ ಛಾಯಾಗ್ರಹಣವನ್ನು ಕೈಗೊಂಡಿದ್ದು, ಚಿತ್ರದ ಸಂಭಾಷಣೆಯನ್ನು ರಚಿಸಿರುವ ಮಣಿ ಬಾಬು ಕರಣಮ್ ಅವರೊಡನೆ ಚಿತ್ರಕಥೆ ರಚನೆಗೂ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಗೌರಾ ಹರಿ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗೂ ಶ್ರೀ ನಾಗೇಂದ್ರ ತಂಗಾಲ ಪ್ರೊಡಕ್ಷನ್ ವಿನ್ಯಾಸವನ್ನು ಮಾಡಿದ್ದಾರೆ. ವಿವೇಕ್ ಕುಚ್ಚಿಬೋಟ್ಲಾ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

ತಾರಾಗಣ: ತೇಜಾ ಸಜ್ಜಾ, ಮನೋಜ್ ಮಂಚು, ರಿತಿಕಾ ನಾಯಕ್

ತಾಂತ್ರಿಕ ಸಿಬ್ಬಂದಿ:
ನಿರ್ದೇಶನ: ಕಾರ್ತಿಕ್ ಘಟ್ಟಮನೇನಿ
ನಿರ್ಮಾಣ: ಟಿ ಜಿ ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್
ಲಾಂಛನ: ಪೀಪಲ್ ಮೀಡಿಯಾ ಫ್ಯಾಕ್ಟರಿ
ಸಹ-ನಿರ್ಮಾಪಕ: ವಿವೇಕ್ ಕುಚ್ಚಿಬೋಟ್ಲಾ
ಕಾರ್ಯನಿರ್ವಾಹಕ ನಿರ್ಮಾಪಕ: ಸುಜಿತ್ ಕುಮಾರ್ ಕೊಳ್ಳಿ
ಮುಖ್ಯ ಕೋ ಆರ್ಡಿನೇಟರ್: ಮೇಘ ಶ್ಯಾಮ್
ಸಂಗೀತ ಸಂಯೋಜನೆ: ಗೌರಾ ಹರಿ
ಪ್ರೊಡಕ್ಷನ್ ವಿನ್ಯಾಸ: ಶ್ರೀ ನಾಗೇಂದ್ರ ತಂಗಾಲ
ರಚನೆ: ಮಣಿ ಬಾಬು ಕರಣಮ್
ಪಿ. ಆರ್. ಒ. : ಹರೀಶ್ ಅರಸು

Previous Post

ಚಿತ್ರೀಕರಣವನ್ನು ಪೂರೈಸಿದ “ಗಣಿ ಬಿ. ಕಾಂ ಪಾಸ್ 2” ಚಿತ್ರ

Next Post

ಮಹಾ ಕುಂಭಮೇಳ ಟೀಕಿಸಿದವರಿಗೆ ಪ್ರಧಾನಿ ಮೋದಿ ಕೌಂಟರ್ – ನಿಮ್ಮದು ಗುಲಾಮರ ಮನಸ್ಥಿತಿ ಎಂದ ನಮೋ ! 

Related Posts

Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
0

"ಇನಿಫಿನಿಟಿ ಕ್ರಿಯೇಷನ್ಸ್" ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, "ಅಪ್ಪು‌ ಪಪ್ಪು"(Appu Pappu), " ಮಸ್ತ್ ಮಜಾ ಮಾಡಿ"(Mast Maja Madi), "ನಂದ(Nanda)" ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್...

Read moreDetails

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025

Pratham: ಪ್ರಥಮ್ ಅಭಿನಯದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ .

July 3, 2025
ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ವಾರ್ನಿಂಗ್ – ಅತಿರೇಕದ ಅವಹೇಳನ ಮಾಡಿದ್ರೆ ಕಾನೂನು ಹೋರಾಟದ ಎಚ್ಚರಿಕೆ

ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ವಾರ್ನಿಂಗ್ – ಅತಿರೇಕದ ಅವಹೇಳನ ಮಾಡಿದ್ರೆ ಕಾನೂನು ಹೋರಾಟದ ಎಚ್ಚರಿಕೆ

July 3, 2025

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
Next Post
ಮಹಾ ಕುಂಭಮೇಳ ಟೀಕಿಸಿದವರಿಗೆ ಪ್ರಧಾನಿ ಮೋದಿ ಕೌಂಟರ್ – ನಿಮ್ಮದು ಗುಲಾಮರ ಮನಸ್ಥಿತಿ ಎಂದ ನಮೋ ! 

ಮಹಾ ಕುಂಭಮೇಳ ಟೀಕಿಸಿದವರಿಗೆ ಪ್ರಧಾನಿ ಮೋದಿ ಕೌಂಟರ್ - ನಿಮ್ಮದು ಗುಲಾಮರ ಮನಸ್ಥಿತಿ ಎಂದ ನಮೋ ! 

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada