ಬೀದರ್ : ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪಶುಸಂಗೋಪನೆ ಸಚಿವ ವೆಂಕಟೇಶ್ ಹೇಳಿಕೆಯನ್ನು ಮಾಜಿ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಖಂಡಿಸಿದ್ದಾರೆ. 1964ರ ಕಾಯ್ದೆಯನ್ನು ಜಾರಿಗೆ ತಂದಿದ್ದೆ ಕಾಂಗ್ರೆಸ್, ಅದನ್ನ ಕಠಿಣವಾಗಿ ಮಾಡಿದ್ದು ನಾವು, ಅದು ಗೋ ರಕ್ಷಣೆಗೆ ಸಹಾಯವಾಗಿತ್ತು.ಆದ್ರೆ ಇಗ ಪಶುಸಂಗೋಪನೆ ಸಚಿವ ಜಾನುವಾರುಗಳನ್ನ ಯಾಕೆ ಕಟ್ ಮಾಡಬಾರದು ಅನ್ನುತ್ತಿರುವುದನ್ನ ನಾನು ಖಂಡಿಸುತ್ತೆನೆ ಎಂದು ಮಾಜಿ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
ಹಾಲಿ ಪಶುಸಂಗೋಪನೆ ಸಚಿವ ವೇಂಕಟೇಶ್ ಅವರು ಮೆಂಟಲ್ ಆಗಿದ್ದಾರೆ ಅಂತ ಮಾಜಿ ಪಶುಸಂಗೋಪನೆ ಸಚಿವ ಪ್ರಭು ಚೌವಾಣ ಬೀದರ್ ನಲ್ಲಿ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರಿಗೆ ವೇಂಕಟೇಶ್ ಅವರ ಅವರ ಖಾತೆ ಬದಲಿಸಲು ಮಾಜಿ ಸಚಿವ ಪ್ರಭು ಚೌವ್ಹಾಣ್ ಆಗ್ರಹಿಸಿದ್ದಾರೆ. ಮುಸ್ಲಿಂ ಸಮಾಜಕ್ಕೆ ಖುಷ್ ಮಾಡಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ಮಾಜಿ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಕಾಂಗ್ರೆಸ್ ಮುಂದಾದರೆ ರಾಜ್ಯದ ಮಠಾದೀಶರು, ಬಿಜೆಪಿ ಪಕ್ಷದ ಕಾರ್ಯಕರ್ತರು ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ಪ್ರಭು ಚೌವ್ಹಾಣ್ ಎಚ್ಚರಿಸಿದ್ದಾರೆ.