ವಿರೋಧ ಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದ ʻಜ್ಞಾನ ದೇಗುವ ಘೋಷ ವಾಕ್ಯದʼ ವಿವಾದದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಸಚಿವ(Minister) ಡಾ.ಎಚ್.ಸಿ. ಮಹದೇವಪ್ಪ(HC Mahadevappa) ಶಿಕ್ಷಕರಾಗಿ ನ್ಯಾಯದ ಪಾಠ ಮಾಡಿದ್ದಾರೆ.
![](https://pratidhvani.com/wp-content/uploads/2024/02/1-26.png)
ವಿವಾದದ ಬೆನ್ನಲ್ಲೇ ವಿಡಿಯೋ(Video) ಬಿಡುಗಡೆ ಮಾಡಿರುವ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಿಕ್ಷಕರ ಪಾತ್ರಧಾರಿಯಾಗಿ ಮಕ್ಕಳಿಗೆ ನ್ಯಾಯದ ಪಾಠ ಮಾಡಿದ್ದಾರೆ. “ಅನ್ಯಾಯ ಆಗುತ್ತಿರುವುದು ಗೊತ್ತಾದ ಸಂದರ್ಭದಲ್ಲಿ ಸುಮ್ಮನಿರಬಾರದು, ಅನ್ಯಾಯ ಆದವರ ಪರವಾಗಿ ದನಿ ಎತ್ತಬೇಕು, ಜೀವನದಲ್ಲಿ ಅನ್ಯಾಯಗಳನ್ನು ಪ್ರಶ್ನೆ ಮಾಡಬೇಕು, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸಬೇಕು, ಅನ್ಯಾಯ ಆದವರ ಪರವಾಗಿ ನಿಲ್ಲಬೇಕು, ಆಗಲೇ ನಮ್ಮ ಬದುಕಿಗೆ ಅರ್ಥ ಬರಲಿದೆ. ನಮ್ಮ ದೇಶದ ಸಂವಿಧಾನ ಕೂಡ ಇದನ್ನೇ ಹೇಳಿದೆ” ಎಂದು ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
#HCM #Mahadevappa #Congress #Karnataka #Mysore