ಚಾಮರಾಜನಗರ: ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರ ಮತ್ತೊಮ್ಮೆ ಕೋಟ್ಯಾಧೀಶನಾಗಿದ್ದಾನೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Temple) ನೆಲೆಸಿರುವ ಮಾದೇಶ್ವರ ಭಕ್ತರ ಕಾಣಿಕೆಯಿಂದಾಗಿ ಕೋಟ್ಯಾಧೀಶನಾಗಿದ್ದಾನೆ.
![](https://pratidhvani.com/wp-content/uploads/2024/04/money-8-1-1024x576.webp)
ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.58 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಸಲಾಗಿದ್ದು ಕಳೆದ 30 ದಿನಗಳಲ್ಲಿ ಮಹದೇಶ್ವರನಿಗೆ ಒಟ್ಟು 2,58,44,097 ರೂ. ಕಾಣಿಕೆ ಹರಿದು ಬಂದಿದೆ.
![](https://pratidhvani.com/wp-content/uploads/2024/05/mahadeshwara.webp)
ಅಲ್ಲದೇ, 93 ಗ್ರಾಂ ಚಿನ್ನ, 3 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಸೌದಿ ಅರೇಬಿಯಾ, ಜಪಾನ್, ನೇಪಾಳ ಹಾಗು ಕತಾರ್ ದೇಶದ ನಾಲ್ಕು ಕರೆನ್ಸಿ ನೋಟುಗಳು ಪತ್ತೆಯಾಗಿವೆ. 2 ಸಾವಿರ ಮುಖಬೆಲೆಯ 25 ನೋಟುಗಳು ಪತ್ತೆಯಾಗಿವೆ.