ಹುಬ್ಬಳ್ಳಿ : ಈ ಬಾರಿ ವೀರಶೈವ ಲಿಂಗಾಯತಕ್ಕೆ ಒಳಪಡುವ ಎಲ್ಲಾ ಪಂಗಡಗಳನ್ನು ಒಟ್ಟುಗೂಡಿಸಿ ಹೋರಾಟ ಮಾಡಲು ಚಿಂತನೆ ನಡೆದಿದೆ. ಚುನಾವಣೆ ಬಳಿಕ ಎಲ್ಲಾ ಮಠಾಧೀಶರನ್ನು, ವಿರಕ್ತ ಮಠ ಮತ್ತು ಪಂಚ ಪೀಠಾಧಿಪತಿಗಳ ಜೊತೆಗೆ ಮಾತುಕತೆ ನಡೆಸುತ್ತೆವೆ ಎಂದು ಪ್ರತ್ಯೇಕ ಧರ್ಮ ಕುರಿತು ಮಾಜಿ ಸಚಿವ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಹೇಳಿದರು.
ನಮ್ಮ ಸಮಾಜಕ್ಕೆ ಅಲ್ಪಸಂಖ್ಯಾತ ಮನ್ನಣೆ ಸೀಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಹೆಚ್ಚಾಗಬೇಕೆಂಬುವುದು ನಮ್ಮ ಉದ್ದೇಶ ಎಂದರು. ಇನ್ನೂ ಸಾವರ್ಕರ್ ಭಾವ ಚಿತ್ರವನ್ನು ಸುಟ್ಟಿರುವುದು ತಪ್ಪು. ಅದೇ ರೀತಿ ಸಿದ್ದರಾಮಯ್ಯ ಕಾರ್ ಗೆ ಮೊಟ್ಟ ಎಸೆದಿದ್ದು ಚಿಲ್ಲರೆ ಕೆಲಸ ಎಂಬಿ ಪಾಟೀಲ್ ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಎಂ.ಬಿ.ಪಾಟೀಲ್
ದೇಶದ ಯುಪಿ, ಬಿಹಾರ ಜನ ನಮ್ಮಲ್ಲಿ ದುಡಿಯೋಕೆ ಬರ್ತಾರೆ. ನಮ್ಮ ರಾಜ್ಯಕ್ಕೆ ಮೆಡಿಕಲ್, ಇಂಜಿನಿಯರಿಂಗ್ ಓದೋಕೆ ನಮ್ಮ ರಾಜ್ಯಕ್ಕೆ ಬರ್ತಾರೆ. ಆದ್ರೆ ನಮ್ಮ ಮುಖ್ಯಮಂತ್ರಿಗೆ ಯುಪಿ ಮಾಡೆಲ್ ಬೇಕಂತೆ. ಮೋದಿಯವರು ಸ್ವಾತಂತ್ರ್ಯದ ದಿನ ಭ್ರಷ್ಟಾಚಾರದ ವಿರುದ್ದ ಯುದ್ದ ಸಾರ್ತಿವಿ ಅಂತಾರೆ. 40 ಪರ್ಸೆಂಟ್ ವಿರುದ್ದ ಗುತ್ತಿಗೆದಾರರೇ ನಿಮಗೆ ದೂರು ನೀಡಿದ್ದಾರೆ. ಮೋದಿಯವರೇ ನಿಮಗೆ ದೂರು ನೀಡಿದ್ದಾರೆ. ಅವರ ಮೇಲೆ ಯಾಕೆ ಐಟಿ,ಇಡಿ ರೇಡ್ ಯಾಕಿಲ್ಲ ಅಂತ ಪ್ರಶ್ನೆ ಮಾಡಿದರು.
ಈ ರಾಜ್ಯದಲ್ಲಿ ಸರ್ಕಾರವಿಲ್ಲಂತ ಅವರ ಸಚಿವರೇ ಹೇಲ್ತಾರೆ. ಸುಮ್ನೆ ಮ್ಯಾನೆಜ್ ಮಾಡ್ತಿದ್ದಿವಿ ಅಂತ ಮಾಧುಸ್ವಾಮಿ ಹೇಳ್ತಾರೆ.
ನಾವು ಜನರ ಮನೆ ಮನೆಗೆ ಹೋಗ್ತೀವಿ. ಮತ್ತೆ ನಾವು ಈ ಭಾರಿ ಅಧಿಕಾರಕ್ಕೆ ಬರ್ತೆವೆ. ಮತ್ತೆ ರಾಜ್ಯವನ್ನ ನಂಬರ್ ಓನ್ ಆಗಿ ಮಾಡ್ತೆವೆ ಅಂತ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತ ವ್ಯವಸ್ಥೆಯನ್ನ ಹದಗೆಡಿಸಿದ್ದಾರೆ. ಅಧಿಕಾರ ಬಂದ ಮೇಲೆ ಮೊದಲೆರೆಡೂ ವರ್ಷ ಇವರ ಪಾಪ ತೊಳಿಬೇಕು. 140-150 ಸೀಟ್ ಪಡೆದು ಅಧಿಕಾರಕ್ಕೆ ಬರ್ತೆವೆ ಎಂದು ಎಂ.ಬಿ. ಪಾಟೀಲ್ ಹುಬ್ಬಳ್ಳಿಯಲ್ಲಿ ಹೇಳಿದರು.