ಒಪ್ಪಿಗೆ ಇಲ್ಲದೇ ಮದುವೆ ಆದ ಸಿಟ್ಟಿಗೆ ಮಗಳು ಮತ್ತು ಅಳಿಯನನ್ನು ತಂದೆ ಮಚ್ಚಿನಿಂದ ಕೊಚ್ಚಿ ಕೊಂದ ಆಘಾತಕಾರಿ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್ ಪಟ್ಟಿಯಲ್ಲಿ ವೀರಪಟ್ಟಿ ಗ್ರಾಮದಲ್ಲಿ ನಡೆದಿದೆ.
ಮುತ್ತುಕುಟ್ಟಿ (50) ಎಂಬಾತ ತನ್ನ ಮಗಳು ರೇಷ್ಮಾ (20) ಹಾಗೂ ಅಳಿಯ ಮಣಿಕಾರಜ್ (26) ಎಂಬುವವರನ್ನು ಹತ್ಯೆ ಮಾಡಿದ್ದಾನೆ.
ಕೋವಿಲ್ ಪಟ್ಟಿಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರೇಷ್ಮಾ, ಸ್ಥಳೀಯ ದಿನಗೂಲಿ ಕಾರ್ಮಿಕನನ್ನು ಪ್ರೀತಿಸಿ ತಂದೆಯ ಒಪ್ಪಿಗೆ ಇಲ್ಲದೇ ಮದುವೆ ಆಗಿದ್ದಳು.
ತಂದೆ ಇಬ್ಬರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ವಾರದ ಹಿಂದೆಯಷ್ಟೇ ಮನೆ ತೊರೆದಿದ್ದ ಮಗಳು ದೂರದಲ್ಲಿ ಮದುವೆ ಆಗಿ ಎರಡು ದಿನಗಳ ಹಿಂದೆಯಷ್ಟೇ ಗಂಡನ ಜೊತೆ ಊರಿಗೆ ಮರಳಿದ್ದರು.
ಸಂಜೆ ಮನೆಯಲ್ಲಿ ದಂಪತಿ ಇಬ್ಬರೇ ಇದ್ದಾಗ ಮನೆಗೆ ತೆರಳಿದ ಮುತ್ತುಕುಟ್ಟಿ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಓಡಿ ಹೋಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.