![](https://pratidhvani.com/wp-content/uploads/2024/07/WhatsApp-Image-2024-07-01-at-6.43.16-AM.jpeg)
ನವದೆಹಲಿ ; ಭಾನುವಾರ ಬೆಳಗ್ಗೆ “ಮನ್ ಕಿ ಬಾತ್” ನ 111 ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರಕು ಕಾಫಿ ಬಗ್ಗೆ ಪ್ರಸ್ತಾಪಿಸಿದ್ದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಆರಂಭವಾದಂತಿದೆ.
ಕಾಫಿ ಬ್ರಾಂಡ್ನ ಕ್ರೆಡಿಟ್ ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ವಾಗ್ದಾಳಿ ನಡೆಸಿದರೆ, ಲೋಕಸಭೆ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಪಕ್ಷಕ್ಕೆ “ಹೆಚ್ಚು ಹೊಡೆತ” ಆಗಿದೆ ಎಂದು ಬಿಜೆಪಿ ತಕ್ಷಣವೇ ತಿರುಗೇಟು ನೀಡಿದೆ.
![](https://pratidhvani.com/wp-content/uploads/2024/07/rahul-gandhi-modi--1024x576.jpg)
ಭಾನುವಾರದಂದು, ಆಂಧ್ರಪ್ರದೇಶದ ಅರಕು ಕಾಫಿಯ “ಸುವಾಸನೆ ಮತ್ತು ಮಹತ್ವ” ವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು, ಅವರು ರಾಜ್ಯದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಕಾಫಿ ಸವಿದ ಕ್ಷಣವನ್ನು ಹಂಚಿಕೊಂಡಿದ್ದನ್ನು ನೆನಪಿಸಿಕೊಂಡರು. ಅವರು ಸೆಪ್ಟೆಂಬರ್ 2023 ರಲ್ಲಿ ಭಾರತ ಆಯೋಜಿಸಿದ್ದ G20 ಶೃಂಗಸಭೆಯಲ್ಲಿ ಅದರ ಉಪಸ್ಥಿತಿಯನ್ನು ಸೂಚಿಸುತ್ತಾ ಅರಕು ಕಾಫಿಯ ಜನಪ್ರಿಯತೆಯನ್ನು ಒತ್ತಿ ಹೇಳಿದರು.
ಹೆಚ್ಚಿನ ಜಾಗತಿಕ ಬೇಡಿಕೆಯನ್ನು ಆನಂದಿಸುವ ಹಲವಾರು ಭಾರತೀಯ ಉತ್ಪನ್ನಗಳ ಕುರಿತು ಮಾತನಾಡುವಾಗ, ಪ್ರಧಾನಿ ಮೋದಿ, “ಅರಕು ಕಾಫಿ ಅದರ ಶ್ರೇಷ್ಟ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ, ಆಂಧ್ರಪ್ರದೇಶದ ಅಲ್ಲೂರಿ ಸೀತಾ ರಾಮ್ ರಾಜು ಜಿಲ್ಲೆಯಲ್ಲಿ ಇದನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಸುಮಾರು 1.5 ಲಕ್ಷ ಬುಡಕಟ್ಟು ಜನಾಂಗದವರು ಕುಟುಂಬಗಳು ಅರಕು ಕಾಫಿ ಕೃಷಿಯಲ್ಲಿ ತೊಡಗಿವೆ, ಗಿರಿಜನ ಸಹಕಾರಿ ಸಂಘವು ಸ್ಥಳೀಯ ರೈತರನ್ನು ಒಗ್ಗೂಡಿಸಿ ಅರಕು ಕಾಫಿ ಬೆಳೆಯಲು ಪ್ರೋತ್ಸಾಹಿಸುವ ಮೂಲಕ ಅವರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದಿದ್ದರು.
![](https://pratidhvani.com/wp-content/uploads/2024/07/next-mann-ki-baat-will-be-in-may-2019-narendra-modi-1024x576.jpg)
ಆದರೆ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು “ಉತ್ಪ್ರೇಕ್ಷಿತ” ಸತ್ಯಗಳಿಗಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಎಕ್ಸ್ ನಲ್ಲಿ , ಪ್ರಧಾನಿ ಅವರು ಅರಕು ಕಾಫಿ ಬ್ರಾಂಡ್ ಅನ್ನು ಕಂಡುಹಿಡಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಗಿ ಹೇಳಿದರು. “ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನೊಂದಿಗೆ ಆಂಧ್ರಪ್ರದೇಶದ ಸುಂದರ ಅರಕು ಕಣಿವೆಯಲ್ಲಿ ಬುಡಕಟ್ಟು ಸಮುದಾಯಗಳ ಕಾಫಿ ಕೃಷಿಯ ಉಪಕ್ರಮಕ್ಕೆ ನಾಂದಿ ಫೌಂಡೇಶನ್ ಕಾರಣವಾಗಿತ್ತು. ನಾನು ರಾಜ್ಯ ವಾಣಿಜ್ಯ ಸಚಿವನಾಗಿ, ಅದನ್ನು ಪ್ರಾರಂಭಿಸಲು ಸಹಕಾರ ನೀಡಿದ್ದೆ. ಡಿಸೆಂಬರ್ 21, 2007 ರಂದು ಅರಕು ವ್ಯಾಲಿ ಬ್ರ್ಯಾಂಡ್ ಮಾರುಕಟ್ಟೆಗೆ ಬಂದಿತು . ನಾನು ಐದು ವರ್ಷಗಳ ನಂತರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಅಲ್ಲಿಗೆ ಹೋಗಿದ್ದೆ ಎಂದು ಅವರು ಕಾಮೆಂಟಿಸಿದ್ದರು.
ಆದರೆ ಜೈರಾಮ್ ರಮೇಶ್ ಅವರನ್ನು “ಟ್ರೋಲ್ ಮಾಸ್ಟರ್” ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು “ಬುದ್ಧಿವಂತಿಕೆಯ ವ್ಯಾಖ್ಯಾನವನ್ನು ಅವರು ನಿರಂತರವಾಗಿ ಹೇಗೆ ಸವಾಲು ಮಾಡುತ್ತಾರೆ ಎಂಬುದು ಆಕರ್ಷಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಿ ಅರಕು ಕಾಫಿ ಮತ್ತು ಗಿರಿಜನ ಸಹಕಾರಿ ನಿಗಮದ ಬಗ್ಗೆ ಮಾತನಾಡಿದ್ದಾರೆ, ಇದು ಖಂಡಿತವಾಗಿಯೂ ಹೊಸತಲ್ಲ , ಟ್ರೋಲ್ ಮಾಸ್ಟರ್ ಒಂದು ವಿಶಿಷ್ಟವಾದ ಸ್ಥಳೀಯ ಉತ್ಪನ್ನದ ಬಗ್ಗೆ ಹೆಮ್ಮೆಪಡುವ ಬದಲು, ಅವರು ಕಾಂಗ್ರೆಸ್ ಮೂರನೇ ಬಾರಿಗೆ ಸತತ ಸೋಲಿಗೆ ಅಳುತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
![](https://pratidhvani.com/wp-content/uploads/2024/07/narendra_modi_andhra_pradesh_1715345392462_1715345392716-1024x576.webp)
ಅರಕು ಕಾಫಿಯು 2019 ರಲ್ಲಿ ತನ್ನ ಭೌಗೋಳಿಕ ಸೂಚಕ (GI) ಪದನಾಮವನ್ನು ಪಡೆದುಕೊಂಡಿದೆ. GI ಟ್ಯಾಗ್ ನಿರ್ದಿಷ್ಟ ಭೌಗೋಳಿಕ ಸ್ಥಳದಿಂದ ಬರುವ ಐಟಂಗಳನ್ನು ಸೂಚಿಸುತ್ತದೆ ಮತ್ತು ಅವುಗಳ ಮೂಲದ ಪರಿಣಾಮವಾಗಿ ವಿಶಿಷ್ಟ ಲಕ್ಷಣಗಳು ಅಥವಾ ಖ್ಯಾತಿಯನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ.