ರಾಜ್ಯದಲ್ಲಿ ಎರಡು ಹಂತದ ಚುನಾವಣೆ ಮುಗಿದ ಹಿನ್ನಲೆ, ಬಿಜೆಪಿ (8jp) ನಾಯಕರು ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರದ ಅವಲೋಕನ ಮಾಡಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅಂತರ ಕಡಿಮೆ ಎಂದು ಅವಲೋಕನ ವೇಳೆ ಜಿಲ್ಲಾ ನಾಯಕರು ಪ್ರಸ್ತಾಪಿಸಿದ್ದಾರೆ. ಗೆಲುವಿಗೆ ಅಂತರ ಕಡಿಮೆ ಇರುವ ಕ್ಷೇತ್ರ ಬಿಜೆಪಿ ಕೈ ತಪ್ಪುವ ಸಾಧ್ಯತೆ ಬಗ್ಗೆ ಹಾಗೂ ಸ್ವಪಕ್ಷ ನಾಯಕರ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದಾರೆ.
![](https://pratidhvani.com/wp-content/uploads/2024/05/IMG_7670.jpeg)
ಚಿತ್ರದುರ್ಗ (chitradurga), ತುಮಕೂರು (Tumkur), ಬೀದರ್ (Bidar), ಬೆಂಗಳೂರು ಉತ್ತರ (Bangalore north), ಉತ್ತರ ಕನ್ನಡ ಸೇರಿದಂತೆ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳಿಗೆ ಸರಿಯಾಗಿ ಬೆಂಬಲಿಸಲಿಲ್ಲ ಎಂಬ ಆರೋಪ ಬಂದಿದ್ದು ಸ್ವಪಕ್ಷ, ಪಕ್ಷ ವಿರೋಧಿ ನಾಯಕರ ವಿರುದ್ಧ ರಾಜ್ಯ ನಾಯಕರು ಕ್ರಮಕ್ಕೆ ಮುಂದಾಗಿದ್ದಾರೆ.
ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ಮೈತ್ರಿಯಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಆರು ಕ್ಷೇತ್ರಗಳ ಪೈಕಿ 4 ಸೀಟ್ ಬಿಜೆಪಿಗೆ 2 ಜೆಡಿಎಸ್ ಗೆ (Jds) ಎಂಬ ಮಾನದಂಡದಡಿ ಮಾತುಕತೆಯಾಗಿತ್ತು. ಆದ್ರೆ ಈ ಮಧ್ಯೆ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೂ ಸೇರಿಸಿ ಒಟ್ಟು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಿಸಿದ್ರಿಂದ ಗೊಂದಲ ಉಂಟಾಗಿತ್ತು.
![](https://pratidhvani.com/wp-content/uploads/2024/05/IMG_7669.jpeg)
ಆ ನಂತರ ಜೆಡಿಎಸ್ ನಾಯಕರ ಸಭೆ ನಂತ್ರ ಮತ್ತೆ ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರಿಗೆ ತಡೆಯನ್ನ ನೀಡಿತ್ತು. ಇಷ್ಟಾಗ್ತಿದ್ದಂತೆ ಗೊಂದಲ ಪರಿಹಾರ ಆಯ್ತು ಅಂತಾನೇ ಅಂದುಕೊಳ್ಳಲಾಗಿತ್ತು. ಆದ್ರೀಗ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಈ ಹಿಂದೆ ಘೋಷಿಸಿದ್ದ ಅಭ್ಯರ್ಥಿ ಇ.ಸಿ ನಿಂಗರಾಜು (Ed nigaraju) ಈಗಾಗಲೇ ಬಿಜೆಪಿಯಿಂದ ಟಿಕೆಟ್ ಘೋಷಣೆ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ಪಕ್ಷದ ವರಿಷ್ಟರ ಜೊತೆ ಕೂಡ ಮಾತಾಡಿದ್ದೇನೆ ಅಂತ ಹೇಳೋ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.