ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಖಾಸಗೀಕರಣವನ್ನು ವಿರೋಧಿಸಿ ವಿವಿಧ ಪಕ್ಷಗಳ ಮುಖಂಡರು ಭಾನುವಾರ ವಿಶಾಖಪಟ್ಟಣದಲ್ಲಿ ‘ಮಹಾ ಪಾದಯಾತ್ರೆ’ ನಡೆಸಿದ್ದಾರೆ.
ಕಾಕತೀಯ ಆರ್ಚ್ನಿಂದ ನಗರದ ಹಳೆಯ ಗಾಜುವಾಕ ಪ್ರದೇಶದವರೆಗೆ ಪಾದಯಾತ್ರೆಯನ್ನು ನಡೆಸಲಾಯಿತು.ಇದು ನಗರದಲ್ಲಿ ನನಡೆಸಿದ ಎರಡನೇ ಅತಿದೊಡ್ಡ ಪಾದಯಾತ್ರೆ ಆಗಿದ್ದು ಉಕ್ಕಿನ ಕಾರ್ಖಾನೆ ಖಾಸಗೀಕರಣವನ್ನು ವಿರೋಧಿಸಿ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದಾರೆ ಮತ್ತು R-Card ಹೊಂದಿರುವ 8 ಸಾವಿರ ಜನರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ಈ ಪಾದಯಾತ್ರೆಯನ್ನು ನಡೆಸಲಾಯಿತು.
ಪಾದಯತ್ರೆಯನ್ನು ಗಾಜುವಾಕ ಶಾಸಕ ತಿಪ್ಪಳ ಗುರುಮೂರ್ತಿ ನೇತೃತ್ವದಲ್ಲಿ ನಡೆಸಲಾಯಿತು ಈ ವೇಳೆ ವಿರೋಧ ಪಕ್ಷದ ನಾಯಕರು, ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.ʼ
ಕೇಂದ್ರ ಸರ್ಕಾರವು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA)ಯ ಮೂಲಕ ವೈಜಾಗ್ ಉಕ್ಕಿನ ಕಾರ್ಖಾನೆಯ ಖಾಸಗೀಕರಣಕ್ಕೆ ತನ್ನ ತಾತ್ವಿಕ ಅನುಮೋದನೆಯನ್ನು ನೀಡಿದ ನಂತರ ನಗರದಲ್ಲಿ ಪ್ರತಿಭಟನೆಗಳು ಜೋರಾದವು .
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ ನಂತರವು ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನ ಮರುಪರಿಶೀಲಿಸಲಿಲ್ಲ. ಏತನ್ಮಧ್ಯೆ, ಜುಲೈನಲ್ಲಿ, ಕೇಂದ್ರ ಸರ್ಕಾರವು ವೈಜಾಗ್ ಉಕ್ಕಿನ ಕಾರ್ಖಾನೆಯ ಬಂಡವಾಳ ಹೂಡಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಹಿವಾಟು ಸಲಹೆಗಾರರು ಮತ್ತು ಕಾನೂನು ಸಲಹೆಗಾರರನ್ನು ತೊಡಗಿಸಿಕೊಳ್ಳಲು ಪ್ರಸ್ತಾಪಗಳನ್ನು ಆಹ್ವಾನಿಸಿತು.