ಮೈಸೂರು : ಮೈಸೂರು ಜಿಲ್ಲಾ ಮಾಲೀಕರ ಹಾಗೂ ಚಾಲಕರ ಒಕ್ಕೂಟದಿಂದ ನಾಗರೀಕ ಸುರಕ್ಷತಾ ಕಾಯ್ದೆ 2023 ವಿದೇಯವನ್ನು ವಿರೋಧಿಸಿ ಇಂದು ರಾತ್ರಿ 12 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ,
ಈಗಾಗಲೇ ಮೈಸೂರು ಜಿಲ್ಲಾ ಮಾಲೀಕರ ಹಾಗೂ ಚಾಲಕರ ಒಕ್ಕೂಟದ ಅಧ್ಯಕ್ಷರಾದ ಕೊದಂಡರಾಮ,
ರಾಜ್ಯ ಮಟ್ಟದ ಲಾರಿ ಮಾಲಿಕರ ಅಧ್ಯಕ್ಷ ನವೀನ್ ರೆಡ್ಡಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಇಂದಿನಿಂದ ಶಾಂತಿಯುತವಾದ ಮುಷ್ಕರವನ್ನು ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ತಿಳಿಸಿದರು,
ಲಾರಿ ಮಾಲಿಕರ ಸಂಘದ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಹುಣಸೂರು, ನಂಜನಗೂಡು , ಚಾಮರಾಜನಗರ , ಗುಂಡ್ಲುಪೇಟೆ , ಸೇರಿದಂತೆ ಹಲವು ಜಿಲ್ಲೆಗಳ ಲಾರಿ ಮಾಲಿಕರು , ಚಾಲಕರು, ಆಟೋ, ಬಸ್, ಟ್ಯಾಕ್ಸಿ, ಚಾಲಕರು , ಮಾಲಿಕರು ಸೇರಿದಂತೆ 29 ಜಿಲ್ಲೆಯಲ್ಲಿ ಈ ಮುಷ್ಕರ ನಡೆಯಲಿದೆ,
ಇದು ಕೇವಲ ಲಾರಿ ಮಾಲೀಕರಿಗೆ ಮಾತ್ರವಲ್ಲ ಎಲ್ಲಾ ವಾಹನ ಸವಾರರಿಗೂ ತೊಂದರೆಯಾಗಲಿದೆ.
ನಾಗರೀಕ ಸುರಕ್ಷತಾ 2023ರ ವಿದೇಯಕ ವಾಹನ ಚಾಲಕರಿಗೆ ಮಾರಕವಾಗಿದೆ.
ಈಗಾಗಲೇ ವಾಹನ ಚಾಲಕರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.
ಈ ವಿದೇಯಕವನ್ನ ಕೂಡಲೇ ವಾಪಾಸ್ ಪಡೆಯಬೇಕು.
ನಾಗರೀಕ ಸುರಕ್ಷತಾ 2023ರ ವಿದೇಯಕ ಹಿಂಪಡೆಯುವಂತೆ ಆಗ್ರಹಿಸಿ ಇಂದಿನಿಂದ ಲಾರಿ ಮಾಲೀಕರ ಒಕ್ಕೂಟ ಮುಷ್ಕರ ನಡೆಸುತ್ತದೆ.
ಅಗತ್ಯ ವಸ್ತುಗಳಾದ ತರಕಾರಿ, ಔಷಧಿ, ಹಾಲು ಬಿಟ್ಟು ಉಳಿದ ಸರಕು ಸಾಗಾಣಿಕೆ ವಾಹನಗಳು ರಸ್ತೆಗೆ ಇಳಿಯಲ್ಲ ನಮ್ಮ ಬೇಡಿಕೆ ಈಡೇರುವ ವರೆಗೂ ಮುಷ್ಕರ ಮುಂದುವರೆಯುತ್ತೆ ಎಂದು ಎಚ್ಚರಿಕೆ ನೀಡಿದರು,
ಸುದ್ದಿಗೋಷ್ಟಿಯಲ್ಲಿ , ರಾಜೇಂದ್ರ , ನಾಗಚಂದ್ರ, ಶ್ರೀನಿವಾಸ್ ರಾವ್ , ಅಭಿಷೇಕ್, ಇಮ್ರಾನ್ ಶರೀಫ್, ಪ್ರಕಾಶ್, ಎಲ್ ಶಂಕರ್, ನಂಜನಗೂಡು ವಿಶ್ವನಾಥ್, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.