ಗಂಗೇನಹಳ್ಳಿ ಡಿನೋಟಿಫೈ (Gangenahalli denitrification) ಪ್ರಕರಣದಲ್ಲಿ,2015 ರಲ್ಲಿ ಲೋಕಾಯುಕ್ತಕ್ಕೆ ಜಯಕುಮಾರ್ ಹಿರೇಮಠ್ (Jaikumar hirematt) ಎಂಬುವರು ದೂರು ನೀಡಿದ ಪರಿಣಾಮ ಲೋಕಾಯುಕ್ತ ಪೊಲೀಸ್ರು ಯಡಿಯೂರಪ್ಪ(Yediyurappa) ಹಾಗೂ ಕುಮಾರಸ್ವಾಮಿ (Kumaraswamy)ವಿರುದ್ದ ಪ್ರಕರಣ ದಾಖಲಿಸಿದ್ದರು.
ಈ ಪ್ರಕಣವನ್ನ ರದ್ದುಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.2021 ಜನವರಿ ಐದರಂದು ಪ್ರಕರಣದ ತನಿಖೆಯನ್ನ ಮುಂದುವರೆಸಲು ಹೈಕೋರ್ಟ್ (High court) ಏಕಸದಸ್ಯ ಪೀಠ ಸೂಚಿಸಿತ್ತು.ಅಲ್ಲದೆ ಯಡಿಯೂರಪ್ಪಗೆ 25 ಸಾವಿರ ದಂಡ ಕೂಡ ವಿಧಿಸಿತ್ತು.
ಸದ್ಯ ಈ ಪ್ರಕರಣದಲ್ಲಿ ಕುಮಾರಸ್ವಾಮಿಗೆ ನೊಟೀಸ್ ನೀಡಿದ್ದ ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಹೀಗಾಗಿ ತನಿಖಾಧಿಕಾರಿ ಡಿವೈಎಸ್ ಪಿ ಬಸವರಾಜ್ ಮುಗುದಂ ಮುಂದೆ ಹೆಚ್ ಡಿಕೆ ವಿಚಾರಣೆಗೆ ಹಾಜರಾಗಿದ್ದಾರೆ.