ಲೋಕಸಭಾ(Loka Saba) ಚುಣಾವಣೆಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿರುವ ಬಿಜೆಪಿ-ಜೆಡಿಎಸ್(BJP-JDS) ನಡುವಿನ ಸೀಟು ಹಂಚಿಕೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
![](https://pratidhvani.com/wp-content/uploads/2024/01/en6p203c_bjp-jds-1200_625x300_22_September_23-1024x630.webp)
2024ರ ಲೋಕಸಭಾ(Loka Saba) ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್(BJP-JDS) ಮೈತ್ರಿಯಾಗಿ ಎದುರಿಸುತ್ತಿದ್ದು, ಅದರ ಬಗ್ಗೆ ಮಾತುಕತೆ ಮುಕ್ತಾಯವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಮಾತುಕತೆ ಮಾಡಿದ ಜೆಡಿಎಸ್ನ(JDS) ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ.ಕುಮಾರಸ್ವಾಮಿ, 5 ಕ್ಷೇತ್ರಗಳ ಬೇಡಿಕೆಯಿಟ್ಟಿದ್ದರು. ಇದರಲ್ಲಿ ಸದ್ಯ ಕೋಲಾರ(Kolar), ಮಂಡ್ಯ(Mandya) ಹಾಗೂ ಹಾಸನ(Hassan) ಕ್ಷೇತ್ರಗಳನ್ನು ಬಿಟ್ಟುಕೊಡಲು ಅಮತ್ ಶಾ(Amit Shah) ಒಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ(Chikkaballapura) ಕ್ಷೇತ್ರಗಳ ಬಗ್ಗೆಯೂ ಇಂದು ಚರ್ಚೆ ನಡೆಸಿದ್ದು, ಮುಂದೆ ಇದರ ಬಗ್ಗೆ ಚರ್ಚಿಸೋಣ ಎಂದು ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
#HDKumaraswamy #AmitShah #BJPJDS #LokaSaba #Election2024