ಶತ್ರು ದೇಶದ ಪರ ಯಾರೇ ಘೋಷಣೆ ಕೂಗಿದ್ರು ದೇಶದ್ರೋಹ, ಹೀಗಾಗಿ ವಿಧಾನಸೌಧದಲ್ಲಿ ಪಾಕಿಸ್ತಾನದ(Pakistan) ಪರ ಘೋಷಣೆ ಕೂಗಿದ ಬಗ್ಗೆಯೂ ತನಿಖೆ ಮಾಡಿಸಬೇಕಿದ್ದು, ಅದೇ ರೀತಿ ಮಂಡ್ಯದಲ್ಲಿ ಪಾಕ್ ಪರ ಕೂಗಿದ್ದ ಬಗ್ಗೆಯೂ ತನಿಖೆ ನಡೆಸಲಿ ಶಾಸಕ(MLA) ಗಣಿಗ ರವಿಕುಮಾರ್(Ravi Kumar) ಆಗ್ರಹಿಸಿದ್ದಾರೆ.
ಮಂಡ್ಯ(Mandya)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರವಾಗಿ ಯಾರೇ ಘೋಷಣೆ ಕೂಗಿದರು ತಪ್ಪು. ಹೀಗಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದ ಬಿಜೆಪಿ(BJP) ಕಾರ್ಯಕರ್ತರ ಮೇಲೂ ತನಿಖೆಗೆ ಮಾಡಲಿ, 2022ರಲ್ಲಿ ಮಂಡ್ಯದ ಸಂಜಯ್(Sanjay) ವೃತ್ತದಲ್ಲಿ ನಡೆದಿದ್ದ ಬಿಜೆಪಿ ಪ್ರೋಟೆಸ್ಟ್(Protest) ವೇಳೆ ಓರ್ವ ಕಾರ್ಯಕರ್ತ ಬಾಯತಪ್ಪಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಅಂದು ಆತನ ಬಾಯಿ ಮುಚ್ಚಿದ್ದ ಉಳಿದ ಕಮಲ ಕಾರ್ಯಕರ್ತರು, ಆದರೆ ಆ ಪ್ರಕರಣ ಬಗ್ಗೆಯೂ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
![](https://pratidhvani.com/wp-content/uploads/2024/02/Ganiga-Ravi-1.png)
ರಾಜ್ಯಸಭಾ(Rajya Saba) ಸದಸ್ಯ ನಾಸೀರ್ ಹುಸೇನ್(Nasir Hussian) ನಡವಳಿಕೆಗೆ ಗಣಿಗ ರವಿ ಆಕ್ಷೇಪ ವ್ಯಕ್ತಪಡಿಸಿದ ಅವರು, ನಾಸೀರ್ ಹುಸೇನ್ ಪತ್ರಕರ್ತರಿಗೆ ಅಗೌರವ ತಂದಿದ್ದು ತಪ್ಪು ಎಂದು ನಾನು ಪತ್ರಕರ್ತರನ್ನಾಗಿ ನಾಸೀರ್ ಹುಸೇನ್ ರಿಗೆ ಹೇಳ್ತೇನೆ ಎಂದರು.
ಸರ್ಕಾರಕ್ಕೆ ಜಯಪ್ರಕಾಶ್ ಹೆಗಡೆಯವರಿಂದ ಜಾತಿ ಸಮೀಕ್ಷಾ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ದಲ್ಲಿ ಶಾಸಕರೆಲ್ಲ ಸಭೆ ಮಾಡಿದ್ವಿ, ಬಳಿಕ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಕೂಡ ಮೊದಲು ವರದಿ ಕೊಡಲಿ.
ಸಿಎಂ ನಾವು ಅದನ್ನ ಜಾರಿಗೆ ತರಬೇಕು ಅಂತೇನಿಲ್ಲ ಎಂದಿದ್ದಾರೆ. ಸಿಎಂ ಹಾಗೂ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಯಾರಿಗು ತೊಂದರೆಯಾಗದಂತೆ ನೋಡಿಕೊಳ್ತಾರೆ. ವರದಿಗೆ ಯಾರು ವಿರೋಧ ಮಾಡಿಲ್ಲ. ಯಾರಿಗೂ ಅನ್ಯಾಯವಾಗದಂತೆ ನಾವು ಮನವಿ ಮಾಡಿದ್ದೇವೆ ಅಷ್ಟೇ ಎಂದರು.
#Congress #RaviGaniga #MandyaMLA #CasteCensess #Karnataka