• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

Indian Constitution ; ಸಂವಿಧಾನವೇ ಭಾರತೀಯರೆಲ್ಲರ ಧರ್ಮಗ್ರಂಥವಾಗಲಿ..!

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
May 22, 2023
in ಅಂಕಣ
0
Indian Constitution ; ಸಂವಿಧಾನವೇ ಭಾರತೀಯರೆಲ್ಲರ ಧರ್ಮಗ್ರಂಥವಾಗಲಿ..!
Share on WhatsAppShare on FacebookShare on Telegram

~ ಡಾ. ಜೆ ಎಸ್ ಪಾಟೀಲ.

ADVERTISEMENT

ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳು ಹಾಗು ಮೌಢ್ಯಗಳ ಕುರಿತು ಮಾತನಾಡುವವರ ತಲೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂವು ಹಾಕಲಾಗುತ್ತದೆ. ಆದರೆˌ ನೀವು ಶಿಕ್ಷಣˌ ವಿಜ್ಞಾನˌ ಜಾಗೃತೆ ಮತ್ತು ಅರಿವಿನ ಕುರಿತು ಮಾತನಾಡಿದರೆ ನಿಮ್ಮ ಮೇಲೆ ಲಾಠಿ ಏಟುಗಳು ಬೀಳುತ್ತವೆ. ಇಲ್ಲಿ ಮಕ್ಕಳು ಕುಡಿಯುವ ಹಾಲು ಕಲ್ಲಿನ ವಿಗ್ರಹಗಳ ಮೇಲೆ ಹರಿದು ವ್ಯರ್ಥವಾಗಿ ಗಟಾರ ಸೇರುತ್ತದೆ. ಗಟಾರ ಸೇರಬೇಕಾದ ದನದ ಮೂತ್ರವು ಬೆಳ್ಳಿಯ ಬಟ್ಟಲಲ್ಲಿಟ್ಟು ಪವಿತ್ರವೆಂದು ಸೇವಿಸಲು ಹೇಳಲಾಗುತ್ತದೆ. ಆದ್ದರಿಂದಲೇ ಈ ದೇಶ ಜಗತ್ತಿನ ಜ್ಞಾನದ ತವರಾಗುವ ಬದಲಿಗೆ ಧಾರ್ಮಿಕ ಅಂಧಕಾರವನ್ನು ಬಿತ್ತುವ ಮೌಢ್ಯದ ತವರು ಮನೆಯಾಗಿದೆ.

೨೫೦೦ ವರ್ಷಗಳ ಹಿಂದೆ ಈ ನೆಲದಲ್ಲಿ ಬೌದ್ಧರು ಸ್ಥಾಪಿಸಿ ದೇಶ-ವಿದೇಶಗಳ ಜನರಿಗೆ ಉತ್ಕ್ರಷ್ಠವಾದ ಜ್ಞಾನ ಪ್ರಸಾರ ಮಾಡುತ್ತಿದ್ದ ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು ಪರಕೀಯ ದಾಳಿಕೋರರ ಸಹಾಯದಿಂದ ಸುಟ್ಟು ಹಾಕಿದ ಪಾತಕಿಗಳ ಸಂತಾನವೇ ಇಂದು ದಿಲ್ಲಿಯ ಜಗದ್ವಿಖ್ಯಾತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು (JNU) ಮುಚ್ಚಿಸಲು ಪ್ರಯತ್ನಿಸುತ್ತಿವೆ. ಇಲ್ಲಿ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿ ಉಪಗ್ರಹ ಉಡಾವಣೆಯ ದಿನ ದೇವಸ್ಥಾನಕ್ಕೆ ಹೋಗಿ ಕಾಯಿ ಕರ್ಪೂರ ಸಮರ್ಪಿಸಿ ಮೌಢ್ಯ ಮೆರೆಯುತ್ತಾನೆ. ಈ ನೆಲದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕನೊಬ್ಬ ಬೌದ್ಧ ಧರ್ಮದ ಉದಾತ್ ತತ್ವಗಳನ್ನು ಮತ್ತು ಲಿಂಗಾಯತ ಧರ್ಮದ ವೈಚಾರಿಕ ವಚನಗಳನ್ನು ಉಪನಿಷತ್ತುಗಳಲ್ಲಿ ಇರುವ ಸಂಗತಿಗಳು ಎಂದು ವಿಡಿಯೊ ಮಾಡಿ ಉಡಾಫೆಯ ಪ್ರಚಾರ ಮಾಡ್ತಾನೆ.

ಅದೇ ಉಪನಿಷತ್ತುಗಳನ್ನು ಶರಣರು ತತ್ವಮಸಿ ಅಥವಾ ವಾಗ್ವಾದ್ವೈತವೆಂದು ದಿಕ್ಕರಿಸುತ್ತಾರೆ. ಇಲ್ಲೊಬ್ಬ ಭೌತಶಾಸ್ತ್ರದ ಉಪನ್ಯಾಸಕ ಸೃಷ್ಠಿಯ ನೈಸರ್ಗಿಕ ಕ್ರೀಯೆಯಾದ ಗ್ರಹಣವನ್ನು ಪಾಠ ಮಾಡುತ್ತ ನವಗ್ರಹಪೂಜೆˌ ಗೃಹದೋಷ ಪೂಜೆˌ ಹೋಮ-ಹವನಗಳಿಗೆ ಮೊರೆಹೋಗುತ್ತಾನೆ. ಇದು ಕೆಲವರ ವೈಯಕ್ತಿಕ ನಂಬಿಕೆಯಾಗಿದ್ದರೆ ಅದರಿಂದ ಭಾರತ ದೇಶಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಕೆಲವರು ಈ ಮೌಢ್ಯಗಳನ್ನು ಉಳಿದವರಿಗೆ ನಂಬಿಸಲು ಈ ರೀತಿಯ ವಿದ್ವಂಸಕಾರಿ ಹುನ್ನಾರಗಳು ಮಾಡುತ್ತಿರುತ್ತಾರೆ. ಕೆಲವರ ಈ ಹುನ್ನಾರಗಳು ಹಳೆಯವೇ ಆದರೂˌ ತಂತ್ರಗಳು ಮಾತ್ರ ಹೊಸದು ಅಷ್ಟೆ. ಕಾಲಕ್ಕೆ ತಕ್ಕಂತೆ ತಮ್ಮ ತಂತ್ರ-ಕುತಂತ್ರಗಳನ್ನು ಅಪ್ಡೇಟ್ ಮಾಡಿಕೊಳ್ಳುವ ಅವರ ಗುಣಲಕ್ಷಣಗಳನ್ನು ನಾವು ಗುರತಿಸಬೇಕಷ್ಟೆ.

ಬೆರಳೆಣಿಕೆಯ ಜನರ ನಂಬಿಕೆಗಳನ್ನು ಬಹುಜನರ ಮೇಲೆ ಹೇರುವ ಹುನ್ನಾರಕ್ಕೆ ಸಾಂಪ್ರದಾಯವಾದಿಗಳು ಧರ್ಮˌ ಸಂಸ್ಕೃತಿ ಎಂದು ಹೆಸರಿಟ್ಟಿದ್ದಾರೆ. ತಮ್ಮ ಹಿತಾಸಕ್ತಿಯನ್ನು ಕಾಪಿಟ್ಟುಕೊಳ್ಳಲು ಬಹುಜನರನ್ನು ರಾಷ್ಟ್ರೀಯವಾದˌ ದೇಶಭಕ್ತಿಯ ನಶೆಯಲ್ಲಿ ಮುಳುಗಿಸಿ ಹಾದಿ ತಪ್ಪಿಸಿ ತಮ್ಮ ಪೀಳಿಗೆಗೆ ಉನ್ನತ ಶಿಕ್ಷಣ ಕೊಡಿಸಿ ವಿದೇಶಕ್ಕೆ ಕಳುಹಿಸುತ್ತಾರೆ. ಅನ್ಯ ಧರ್ಮೀಯರಿಂದ ತಮ್ಮ ಧರ್ಮಕ್ಕೆ ಅಪಾಯವಿದೆ ಎನ್ನುವ ಕತೆಯನ್ನು ಸೃಷ್ಟಿಸಿ ಮುಗ್ಧ ಜನರನ್ನು ಬಳಸಿಕೊಂಡು ತಮ್ಮ ರಾಜಕೀಯದ ಮೇಲಿನ ನಿಯಂತ್ರಣವನ್ನು ಬಲಪಡಿಸಿಕೊಳ್ಳುತ್ತಾರೆ. ದೇವರುˌ ಧರ್ಮˌ ದೇಶಭಕ್ತಿ ಇವೆಲ್ಲವು ಇವರ ಪಾಲಿಗೆ ವ್ಯಾಪಾರದ ಸರಕುಗಳು ಎನ್ನುವ ಸಂಗತಿ ಮುಗ್ಧ ಜನರಿಂದ ಮುಚ್ಚಿಡುತ್ತಾರೆ.

ಈ ದೇಶದ ಪರಿಶಿಷ್ಟ ಜಾತಿˌ ದಲಿತ ದಮನಿತˌ ಪರಿಶಿಷ್ಟ ಪಂಗಡˌ ಇತರ ಹಿಂದುಳಿದ ವರ್ಗದ ಜನರು ಒಂದು ಬಾರಿ ಭಾರತ ದೇಶದೊಳಗಿರುವ ದೊಡ್ಡ ದೊಡ್ಡ ಮಂದಿರಗಳ ಅರ್ಚಕರ ಹುದ್ದೆಗಾಗಿ ಬೇಡಿಕೆಯನ್ನಿಟ್ಟು ನೋಡಲಿ. ಈ ಪುರೋಹಿತಶಾಹಿಗಳು ಅವರ ಬೇಡಿಕೆಯನ್ನು ಯಾವ ರೀತಿಯಾಗಿ ಸ್ವೀಕರಿಸುತ್ತಾರೆ ಎನ್ನುವುದು ಅರ್ಥವಾದರೆ ಶೂದ್ರರೆಲ್ಲರೂ ತಾವು ಹಿಂದೂಗಳೆಂಬ ಭ್ರಮೆಯಿಂದ ಆಗ ತಾವಾಗಿಯೇ ಹೊರ ಬರುತ್ತಾರೆ. ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕಠಿಣ ಹೋರಾಟದ ಬದುಕುˌ ಅವರ ಸವಾಲಿನ ಶೈಕ್ಷಣಿಕ ಯಾತ್ರೆ ಹಾಗು ಅವರ ಸ್ವಾಭಿಮಾನದ ದಂಡಯಾತ್ರೆಯ ಕುರಿತು ಪಾಠ ಮಾಡುವುದಿಲ್ಲ. ಏಕೆಂದರೆ ಜನರು ಕಾನೂನು ಕಲಿತರೆ ಇಲ್ಲಿನ ಪುರೋಹಿತಶಾಹಿಗಳ ಗುಲಾಮಗಿರಿಗೆ ಕಾಲಾಳುಗಳು ಸಿಗುವುದಿಲ್ಲವಲ್ಲ.

ಈ ದೇಶದಲ್ಲಿ ಗೌತಮ ಬುದ್ಧ-ಮಹಾವೀರರ ಅಹಿಂಸೆˌ ಬಸವಣ್ಣನವರ ಸಮಾನತೆ ಮತ್ತು ಸಹಬಾಳ್ವೆ ˌ ತುಕಾರಾಮˌ ಫುಲೆˌ ನಾರಾಯಣಗುರುˌ ಪೆರಿಯಾರ ಮುಂತಾದವರ ವೈಚಾರಿಕತೆˌ ಗಾಂಧಿಜಿಯವರ ಸಹಿಷ್ಣತೆˌ ಶಾಂತಿˌ ಸತ್ಯದ ಮಾರ್ಗ ನಮ್ಮ ಪೀಳಿಗೆಗೆ ಮನವರಿಕೆ ಮಾಡಿಸುವುದಿಲ್ಲ. ಏಕೆಂದರೆ ಜನ ವಿಚಾರವಂತರಾದರೆ ಪುರೋಹಿತಶಾಹಿಗಳ ಮೌಢ್ಯಕ್ಕೆ ಬಲಿಯಾಗುವವರು ಯಾರು? ಗಂಗೆಯ ನೀರು ನಮಗೆಲ್ಲರಿಗೂ ಪವಿತ್ರವೆಂದು ಭೋದಿಸಲಾಗುತ್ತದೆ. ಧಾರ್ಮಿಕತೆಯ ಹೆಸರಿನಲ್ಲಿ ಅದೇ ಗಂಗೆಯ ಒಡಲೊಳಗೆ ಅರ್ಧ ಸುಟ್ಟ ಹೆಣಗಳನ್ನು ಎಸೆಯುವ ಮೂಲಕ ಆಕೆಯನ್ನು ಮಲೀನ ಹಾಗು ಅಪವಿತ್ರಗೊಳಿಸಲಾಗುತ್ತದೆ. ಗಂಗೆ ಕೇವಲ ಶೂದ್ರರಿಗೆ ಮಾತ್ರ ಪವಿತ್ರವೆಂದು ಬಿಂಬಿಸಲಾಗುತ್ತಿದೆ.

ಆದರೆˌ ನಾನು ವಾರಣಾಸಿಯ ಮಾರುಕಟ್ಟೆಯ ರಸ್ತೆಗಳಲ್ಲಿ ಬಿಸಲೇರಿ ಬಾಟಲಿಯ ನೀರು ಮಾರುವುದನ್ನು ನೋಡಿದ್ದೇನೆ. ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಲು ನಮ್ಮ ದೇಶದ ಅನೇಕ ಜನ ತತ್ವಜ್ಞಾನಿಗಳುˌ ಸಂತರುˌ ಚಿಂತಕರುˌ ವಿಚಾರವಾದಿಗಳು ಪ್ರತಿಪಾದಿಸಿದ ಜ್ಞಾನವನ್ನು ಮರೆಮಾಚಲಾಗುತ್ತಿದೆ. ಪ್ರಗತಿಪರತೆ ಅಪಾಯದಲ್ಲಿದೆˌ ಆದ್ದರಿಂದ ಶಿಕ್ಷಣವನ್ನು ಹೆಚ್ಚು ದುಬಾರಿಯನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಬುದ್ಧಿವಂತಿಕೆಯ ಎತ್ತುಗಳನ್ನು ಮೂಢನಂಬಿಕೆಯನ್ನು ಉಳುಮೆ ಮಾಡಲು ಬಳಸಲಾಗುತ್ತಿದೆ. ಇಲ್ಲಿನ ಟಿವಿ ವಾಹಿನಿಗಳು ನೆಲಮೂಲದ ಜನಪದ ಸಂಸ್ಕ್ರತಿಯನ್ನು ಮರೆಮಾಚಿ ಸನಾತನಿಗಳ ವಾಣಿಜ್ಯೀಕರಣಗೊಂಡ ದೇವಸ್ಥಾನಗಳು ಹಾಗೂ ದೇವರುಗಳ ಪ್ರಚಾರವನ್ನು ನಿರಂತರವಾಗಿ ದಾರವಾಹಿಗಳ ಮೂಲಕ ಮಾಡುತ್ತವೆ.

ಶೂದ್ರ ಶೋಷಕˌ ಸ್ತ್ರೀಶೋಷಕ ಬೌದ್ದ ದ್ವೇಷಿˌ ಲಿಂಗಾಯತ ದ್ವೇಷಿˌ ಶರಣ ಪೀಡಕ ಮತ್ತು ಜೀವವಿರೋಧಿ ಸಿದ್ಧಾಂತಗಳೇ ಈ ದೇಶದ ಸಂಸ್ಕ್ರತಿ ಎಂದು ನಮ್ಮೆಲ್ಲರ ತಲೆಯ ಮೇಲೆ ಹೇರಲಾಗಿದೆ. ಅವುಗಳನ್ನೆಲ್ಲ ಸ್ಥಾಪಿತ ಆಚರಣೆಗಳಾಗಿˌ ಸಾಂಸ್ಕ್ರತಿಕ ಮೌಲ್ಯಗಳಾಗಿ ಬಿಂಬಿಸಲಾಗಿದೆ. ತಂದೆಯೊಬ್ಬ ಕುಡುಕˌ ಲಂಪಟˌ ಸುಳ್ಳ ˌ ದುರ್ಮಾರ್ಗಿಯಾಗಿದ್ದರೂ ಆತನ ಮಾತು ಕೇಳಿ ಪಿತೃವಾಕ್ಯ ಪರಿಪಾಲಕನೆನ್ನಿಸಿಕೊಳ್ಳಬೇಕುˌ ಗಂಡ ಎಷ್ಟೇ ದುರ್ಮಾರ್ಗಿಯಾಗಿದ್ದರೂ ಹೆಂಡತಿಯಾದವರು ಪ್ರಶ್ನಿಸದೆ ಆತನ ಆಜ್ಞಾಧಾರಕಳಾಗಿ ಬದುಕಬೇಕು ಎನ್ನುವ ಸ್ಥಾಪಿತ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ. ಗಂಡಸು ಏಕಪತ್ನಿ ವೃತಸ್ಥನಾಗಿರಬೇಕೆನ್ನುವ ಸ್ಥಾಪಿತ ಮೌಲ್ಯವನ್ನು ಬಿತ್ತಿದವರು ಉದ್ದಕ್ಕೂ ಅದನ್ನು ಉಲ್ಲಂಗಿಸಿಯೂ ಸಮರ್ಥಿಸಿಕೊಳ್ಳುವ ಬಂಡತನ ತೋರುತ್ತಾರೆ.

ಜನರ ಸಂಪರ್ಕವೇ ಇಲ್ಲದˌ ಸ್ವಂತ ಲಿಪಿ ಇಲ್ಲದˌ ಎರಡು ಸಾವಿರ ವರ್ಷಗಳ ಹಿಂದಷ್ಟೆ ವ್ಯಾಕರಣವನ್ನು ಅಳವಡಿಸಿಕೊಂಡಿರುವ ಪುರೋಹಿತಶಾಹಿಗಳ ಗ್ರಾಂಥಿಕ ಮತ್ತು ಪೌರೋಹಿತ್ಯದ ಭಾಷೆಯನ್ನು ದೇವರ ಭಾಷೆ ಎಂದು ಹುಸಿ ಸುದ್ದಿ ವ್ಯವಸ್ಥಿತವಾಗಿ ಹರಡಲಾಗಿದೆ. ಸಂಸ್ಕೃತ ಭಾಷೆಯ ಕಲಿಕೆಯನ್ನು ಒಂದು ಕಾಲದಲ್ಲಿ ಬಹುಜನರಿಂದ ದೂರವಿಡಲಾಗಿತ್ತು. ಅಂದು ಸಂಸ್ಕೃತದ ಶ್ಲೋಕಗಳು ಸಾಮಾನ್ಯ ಜನರ ಕಿಯಿಗೆ ಬಿದ್ದರೂ ಸಾಕು ಪ್ರಾಣಿಯಂತೆ ಕ್ರೂರವಾಗಿ ಶಿಕ್ಷಿಸುತ್ತಿದ್ದರು. ಈಗ ಬಹುಜನರು ಇಂಗ್ಲೀಷ್ ಶಿಕ್ಷಣ ಪಡೆಯುತ್ತಿರುವುದು ಈ ಸಾಂಪ್ರದಾಯವಾದಿಗಳು ಸಹಿಸದಾಗಿದ್ದಾರೆ. ಆದ್ದರಿಂದ ಸಂಸ್ಕೃತವನ್ನು ಒತ್ತಾಯಪೂರ್ವಕವಾಗಿ ಎಲ್ಲರ ತಲೆಯ ಮೇಲೆ ಹೇರಲು ಹವಣಿಸುತ್ತಿದ್ದಾರೆ.

ಇಲ್ಲಿನ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಸ್ತೆಗಿಳಿದು ಚಳುವಳಿ ಮಾಡಬೇಕಾಗುತ್ತದೆ. ಆದರೆˌ ಬಹುಜನರಿಗೆ ಯಾವುದೇ ರೀತಿಯಲ್ಲಿ ಉಪಯೋಗವಿಲ್ಲದ ಪರಾವಲಂಬಿ ಪುರೋಹಿತರ ಬದುಕನ್ನು ಹಸನಗೊಳಿಸುವ ದೇವಸ್ಥಾನಗಳನ್ನು ಕಟ್ಟಲು ಅಪಾರ ಪ್ರಮಾಣದ ಹಣದ ರಾಶಿ ಸಂಗ್ರಹವಾಗುತ್ತದೆ. ಈ ರೀತಿಯ ಪ್ರಸಂಗಗಳಿಂದˌ ಈ ದೇಶವು ಅಂಧಶ್ರದ್ಧೆಗಳ ವಿಶ್ವಗುರುವಾಗಬಲ್ಲುದೇ ಹೊರತು ಜ್ಞಾನ ಮತ್ತು ಶಿಕ್ಷಣದ ಕೇಂದ್ರವಾಗಲಾರದು. ಈ ದೇಶದಲ್ಲಿ ಮಂದಿರಗಳು ಪ್ರಾಚೀನ ಕಾಲದಿಂದಲೂ ಅನುತ್ಪಾದಕ ಹಾಗು ಮೈಗಳ್ಳರ ಪುನರ್ವಸತಿ ಕೇಂದ್ರಗಳಾಗಿವೆ. ಇಂದಿಗೂ ಭಾರತದ ಚಲಾವಣೆಯಲ್ಲಿರುವ ಹಣಕ್ಕಿಂತ ಸಾವಿರ ಪಟ್ಟು ಹಣ ಮಂದಿರಗಳಲ್ಲಿ ಕೊಳೆಯುತ್ತಿದೆ. ಅದು ಸಾರ್ವಜನಿಕ ಬಳಕೆಗೆ ಬಂದರೆ ಭಾರತ ಜಗತ್ತಿನಲ್ಲೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ.

ಇನ್ನೊಂದು ವಿಷಯವೆಂದರೆ, ವಿಜ್ಞಾನಿ ಐಸಾಕ್ ನ್ಯೂಟನ್ ಅಕಸ್ಮಾತ್ ಭಾರತದಲ್ಲಿ ಜನಿಸಿದ್ದರೆ, ಮರದ ಮೇಲಿನಿಂದ ಬಿದ್ದ ಸೇಬು ಹಣ್ಣು ದೈವೀ ಕೃಪೆಯಿಂದ ಕೆಳಗೆ ಬಿತ್ತೆಂದು ಭ್ರಮಿಸಿ ಅದನ್ನು ಆತ ತನ್ನ ಬಂಜೆ ಹೆಂಡತಿಗೆ ತಿನ್ನಿಸುತ್ತಿದ್ದನೆನೊ. ದೇವರ ಅನುಗ್ರಹದಿಂದ ಪ್ರಸಾದದಂತೆ ದೊರೆತ ಆ ಹಣ್ಣಿನ ದೆಸೆಯಿಂದಲೇ ತನ್ನ ಪತ್ನಿ ಗರ್ಭಿಣಿಯಾದಳೆಂದು ಆತ ಭ್ರಮಿಸುತ್ತಿದ್ದ ಹಾಗೂ ಜನರನ್ನೆಲ್ಲ ಅದೇ ಭ್ರಮೆಯಲ್ಲಿ ಬೀಳಿಸುತ್ತಿದ್ದನೆನೊ. ನ್ಯೂಟನ್ನನ ನಿಯಮಗಳಾಗಲಿˌ ವೈಜ್ಞಾನಿಕ ಸಿದ್ಧಾಂತಗಳಾಗಲಿ ಯಾವುವೂ ಆಗ ಅವಿಷ್ಕಾರಗೊಳ್ಳುತ್ತಿರಲಿಲ್ಲ. ಅದರ ಬದಲಿಗೆ ದೇವರ ಕೃಪೆಯಿಂದ ಮೇಲಿಂದ ಕೆಳಗೆ ಬಿದ್ದ ಹಣ್ಣಿನ ದೆಸೆಯಿಂದ ಮಕ್ಕಳಾದವೆಂದು ಮೌಢ್ಯ ಮಾರಾಟ ಮಾಡುವ ಒಂದು ಬಹುದೊಡ್ಡ ಅಂಗಡಿ ಸಂಕೀರ್ಣ ಈ ನೆಲದಲ್ಲಿ ತೆರೆಯಲ್ಪಡುತ್ತಿತ್ತು.

ಈ ನೆಲದಲ್ಲಿ ವಿಜ್ಞಾನವನ್ನು ಮೊದಲಿನಿಂದಲೂ ಪ್ರಜ್ಞಾಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಆದರೆˌ ಸನಾತನಿಗಳು ತಮ್ಮ ಅನೇಕ ಮೌಢ್ಯಗಳಿಗೆ ಕಪೋಲಕಲ್ಪಿತ ವೈಜ್ಞಾನಿಕ ಹಿನ್ನೆಲೆಯ ಕಥೆಯನ್ನು ಹೆಣೆಯುವುದು ಮರೆಯುವುದಿಲ್ಲ. ಭಾರತದಲ್ಲಿ ಸಾರ್ವಜನಿಕವಾಗಿ ಎಲ್ಲ ಬಗೆಯ ಧಾರ್ಮಿಕ ಆಚರಣೆಗಳ ಪ್ರದರ್ಶನಗಳನ್ನು ನಿಲ್ಲಿಸಬೇಕಿದೆ. ಧರ್ಮ ಗ್ರಂಥಗಳನ್ನು ಪ್ರಚಾರ ಮಾಡುವ ಬದಲಿಗೆ ನಮ್ಮ ಅಧುನಿಕ ಬದುಕಿಗೆ ಆಸರೆಯಾಗಿರುವ ಸಂವಿಧಾನದ ಗ್ರಂಥವನ್ನು ಓದುವಂತೆ ನಾವು ಜನರನ್ನು ಜಾಗೃತಗೊಳಿಸಬೇಕಿದೆ. ಆಗ ಮಾತ್ರ ನಾವು ನಮ್ಮ ಮೂಲಭೂತ ಹಕ್ಕುಗಳನ್ನು ತಿಳಿದುಕೊಂಡು ಅವುಗಳ ಬೇಡಿಕೆಗಾಗಿ ಹೋರಾಡಬಹುದು. ಧರ್ಮಗ್ರಂಥಗಳು ಜನರ ಬದುಕನ್ನು ಹಸನಗೊಳಿಸಲಾರವು.

ಧಾರ್ಮಿಕ ಮೌಢ್ಯವನ್ನು ಬಿತ್ತುವ ಪುಸ್ತಕಗಳನ್ನು ಓದಿದರೆ ನಾವು ಧಾರ್ಮಿಕ ಮೌಢ್ಯಗಳ ದಾಸರಾಗಿ ಪುರೋಹಿತಶಾಹಿಗಳ ಕುಠಿಲ ಹುನ್ನಾರಗಳಿಗೆ ಬಲಿಯಾಗುತ್ತ ದಾಸರಾಗಿ ಬದುಕಬೇಕಾಗುತ್ತದೆ. ಸಂವೇದನೆ ರಹಿತˌ ವಿಚಾರಹೀನ ಧಾರ್ಮಿಕತೆ ನಮ್ಮನ್ನು ದೇವಸ್ಥಾನಗಳ ಸರತಿ ಸಾಲಿನಲ್ಲಿ ನಿಲ್ಲಿಸಿ ಪುರೋಹಿತರ ಹಿತಾಸಕ್ತಿಗೆ ಬಲಿ ತೆಗೆದೆಕೊಳ್ಳುತ್ತದೆ. ನಾವು ಯಾವ ರೀತಿ ಯೋಚಿಸಿ ನಡೆದುಕೊಳ್ಳುತ್ತೇವೆಯೊ ಅದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಾವು ದೇಶದ ಮೂಲ ನಿವಾಸಿ ಶೂದ್ರರ ಸ್ವಾಭಿಮಾನವನ್ನು ಕಸಿದುಕೊಳ್ಳುತ್ತಿರುವ ನಮ್ಮ ಶತೃಗಳಾದ ಪುರೋಹಿತಶಾಹಿಗಳ ಅಡಿಯಾಳಾದರೆ ನಮ್ಮ ಗೌರವವು ನಾಶವಾಗುತ್ತದೆ. ಸಿಂಹ ಎಚ್ಚರವಾಗಿದ್ದರೆ ದರೋಡೆಕೋರ ಗುಳ್ಳೆ ನರಿಗಳು ಬಾಲಮುದುಡಿಕೊಂಡು ಓಡಿಹೋಗುತ್ತವೆ.

ಶತಮಾನಗಳಿಂದ ನಮ್ಮನ್ನು ದಾಸ್ಯಕ್ಕೆ ದೂಡಿರುವ ಧಾರ್ಮಿಕ ಮೌಢ್ಯಗಳನ್ನು ನಾವು ದಿಕ್ಕರಿಸುವ ಅಗತ್ಯವಿದೆ. ನಾವು ನಮ್ಮೊಳಗಿನ ಅಂಧವಿಶ್ವಾಸ ಹೊಡೆದೊಡಿಸಬೇಕಿದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಬೆಳಗು ಮತ್ತು ಬೆಳಕು ಕೇವಲ ಸೂರ್ಯೋಯದಿಂದ ಮಾತ್ರ ಕಾಣುತ್ತದೆ ಎನ್ನುವ ಭ್ರಮೆಯಿಂದ ನಾವು ಹೊರಬರಬೇಕಿದೆ. ನಾವು ಬೆಳಗು ಮತ್ತು ಬೆಳಕು ಕಾಣಬೇಕಾದರೆ ಅದಕ್ಕಾಗಿ ನಮ್ಮ ಕಣ್ಣುಗಳನ್ನು ತೆರೆಯಬೇಕಾಗುತ್ತದೆ. ಕಣ್ಣು ತೆರೆಯುವುದು ಕೂಡ ದೇವರ ಕೃಪೆ ಎಂಬ ಸ್ಥಾಪಿತ ಭ್ರಮೆಯನ್ನು ನಾವು ಕಳಚಿಕೊಂಡು ಹೊರಬರದ ಹೊರತು ನಮ್ಮ ಬದುಕು ಹಸನಾಗಲಾರದು. ನಮ್ಮ ನಂಬಿಕೆಯು ನಾವು ಮಾಡುವ ಕೆಲಸ ಕಾರ್ಯಗಳುˌ ನಮ್ಮೊಳಗಿನ ಆತ್ಮವಿಶ್ವಾಸ ಮತ್ತು ನಮ್ಮ ದೇಶದ ಸಂವಿಧಾನದ ಮೇಲಿರಲಿ.

~ ಡಾ. ಜೆ ಎಸ್ ಪಾಟೀಲ.

Tags: BJPCongress Partyconsciousnessconstitutionaleducation ˌ scienceIndian ConstitutionindianpoliticspoliticalPreamble of Indian Constitutionಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಸಿದ್ದರಾಮಯ್ಯ
Previous Post

Hevy Rain in Bengalore : ಬೆಂಗಳೂರಿನಲ್ಲಿ ಮೊದಲ ಮಳೆಗೆ ಮುಳುಗಿ ಸತ್ತ ಯುವತಿ..! ಸಿಎಂ ಕೆಂಡಾಮಂಡಲ..!

Next Post

Siddaramaiah ‘Guaranteed Money | ಮೋದಿ ಅಕೌಂಟ್​ಗೆ ಬರುತ್ತಾ ಸಿದ್ದರಾಮಯ್ಯ ‘ಗ್ಯಾರಂಟಿ ಹಣ’..!? ಡೌಟ್​ ಡೌಟ್​..!

Related Posts

Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
0

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ....

Read moreDetails

ಕರ್ನಾಟಕದ AI-ಸಿದ್ಧ ಭವಿಷ್ಯವನ್ನು ಎತ್ತಿ ತೋರಿಸಿದ ಪ್ರಿಯಾಂಕ್ ಖರ್ಗೆ

June 13, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

Bangalore Stampede: ಬಿಜೆಪಿಗರು ಐಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧ ಹೋರಾಟ ಮಾಡಲಿ : ಬಿ.ಕೆ.ಹರಿಪ್ರಸಾದ್..!!

June 11, 2025
ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

June 9, 2025
Next Post
Siddaramaiah ‘Guaranteed Money | ಮೋದಿ ಅಕೌಂಟ್​ಗೆ ಬರುತ್ತಾ ಸಿದ್ದರಾಮಯ್ಯ ‘ಗ್ಯಾರಂಟಿ ಹಣ’..!? ಡೌಟ್​ ಡೌಟ್​..!

Siddaramaiah 'Guaranteed Money | ಮೋದಿ ಅಕೌಂಟ್​ಗೆ ಬರುತ್ತಾ ಸಿದ್ದರಾಮಯ್ಯ ‘ಗ್ಯಾರಂಟಿ ಹಣ’..!? ಡೌಟ್​ ಡೌಟ್​..!

Please login to join discussion

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada