Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹಾಸನದಲ್ಲಿ ಕುಮಾರಸ್ವಾಮಿ ಮಾತಿಗೆ ಸಿಗ್ತಿಲ್ಲ ಕಿಂಚಿತ್ತು ಮರ್ಯಾದೆ..!!

ಕೃಷ್ಣ ಮಣಿ

ಕೃಷ್ಣ ಮಣಿ

February 6, 2023
Share on FacebookShare on Twitter

ಹಾಸನ ಜಿಲ್ಲೆಯಲ್ಲಿ ಜೆಡಿಎಸ್​​ ನಾಯಕರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ತಿದ್ದಾರಾ..? ಈ ರೀತಿಯ ಅನುಮಾನ ಕಾರ್ಯಕರ್ತರಲ್ಲಿ ಕಾಡುವುದಕ್ಕೆ ಶುರುವಾಗಿದೆ. ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ, ‘ತಮ್ಮ ಮನೆಗೆ ತಾವೇ ಬೆಂಕಿ ಹಾಕಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಯಾರನ್ನು ಸುಡುತ್ತದೆ ನೋಡಿ’ ಎಂದು ಹೇಳಿದ್ರು. ಇದೀಗ ಎ.ಟಿ ರಾಮಸ್ವಾಮಿ ಮಾತಿನಂತೆಯೇ 2ನೇ ಹಂತದ ಮುಸುಕಿನ ಗುದ್ದಾಟ ಶುರುವಾಗಿದೆ. ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ಅಗತ್ಯವಿಲ್ಲ ಎಂದಿದ್ದ ಕುಮಾರಸ್ವಾಮಿ ಮಾತಿಗೆ ರೇವಣ್ಣ ಪುತ್ರರು ತಿರುಗೇಟು ನೀಡಿದ್ದರು. ಇದೀಗ ಅರಕಲಗೂಡು ಹಾಗು ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕರಾದ ಎ.ಟಿ ರಾಮಸ್ವಾಮಿ ಹಾಗು ಶಿವಲಿಂಗೇಗೌಡ ಈಗಾಗಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ದೂರ ಉಳಿದಿದ್ದಾರೆ. ಹೀಗಾಗಿ ಅರಕಲಗೂಡಿನಿಂದ ಎ. ಮಂಜು ಜೊತೆಗೆ ಚರ್ಚೆ ಮಾಡಿದ್ದೇವೆ, ಟಿಕೆಟ್​ ಕ್ಲಿಯರ್​ ಮಾಡ್ತೇವೆ ಎಂದಿದ್ದರು. ಇನ್ನು ಅರಸೀಕೆರೆ ಕ್ಷೇತ್ರದಲ್ಲೂ ನಮಗೆ ಅಭ್ಯರ್ಥಿ ಇದ್ದಾರೆ ಎಂದಿದ್ದರು. ಇದೀಗ ಶಾಸಕ ರೇವಣ್ಣ ಹಾಗು ಸಂಸದ ಪ್ರಜ್ವಲ್​ ರೇವಣ್ಣ ಉಲ್ಟಾ ಹೊಡೆದಿದ್ದಾರೆ. 

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಅರಕಲಗೂಡು ಕಾರ್ಯಕರ್ತರ ಸಭೆ ಬಳಿಕ ಅಂತಿಮ..!

ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆಯಾಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿರುವ ರೇವಣ್ಣ, ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿ ಕಾರ್ಯಕರ್ತರ ಸಭೆ ಕರೆದಿದ್ದು ಚರ್ಚೆ ನಡೆಸುತ್ತೇವೆ. ಬರೋಬ್ಬರಿ ಇಪ್ಪತ್ತೈದು ಸಾವಿರ ಮತಗಳಿರುವ ಹಳ್ಳಿಮೈಸೂರು ಗ್ರಾಮ. 

ಈ ಗ್ರಾಮದ ಮತದಾರರೇ ಗೆಲುವು, ಸೋಲಿಗೆ ನಿರ್ಣಾಯಕ. ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಾವೆಲ್ಲ ಒಂದೂವರೆ ಸಾವಿರ ಜನ ಸೇರಿ ಸಭೆಯಲ್ಲಿ ಒಂದು ತೀರ್ಮಾನ ಮಾಡಿದ್ದೀವಿ. ಅಲ್ಲಿ ಏನ್ಮಾಡಬೇಕು ಅಂತ ಹದಿನಾಲ್ಕು ಜನರ ಕಮಿಟಿ ಮಾಡಿದ್ದೀವಿ. ದೇವೇಗೌಡರಿಗೆ ಅರವತ್ತು ವರ್ಷ ರಾಜಕೀಯ ಶಕ್ತಿ ಕೊಟ್ಟಂತಹ ಹೋಬಳಿ ಇದು. ಅವರಿಗೆ ಯಾವುದೇ ತರಹದ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಮ್ಮ ಮೊದಲ‌ ಆದ್ಯತೆ. ಕೆಲ ಮುಖಂಡರ ಮತ್ತೊಂದು ಸಭೆ ಮಾಡಿದ ಬಳಿಕ ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಎ. ಮಂಜು ಪಕ್ಷಕ್ಕೆ ಸೇರ್ತಿವಿ ಅಂತ ಕುಮಾರಣ್ಣನ ಹತ್ರ ಹೋಗವ್ರೆ. ಹಾಸನ ಜಿಲ್ಲೆದು ಕೂತ್ಕಂಡು ಮಾತನಾಡೋಣ ಅಂತ ಕುಮಾರಣ್ಣ ಹೇಳವ್ರೆ. ಜನಾಭಿಪ್ರಾಯ ತಗೊಂಡು ನಾವು ತೀರ್ಮಾನ ಮಾಡ್ತಿವಿ ಎಂದಿದ್ದಾರೆ. 

ಅರಸೀಕೆರೆ ಬಗ್ಗೆಯೂ ಹೆಚ್​ಡಿಕೆಗೆ ಪ್ರಜ್ವಲ್  ಟಾಂಗ್​..!

ಅರಸೀಕೆರೆ ಟಿಕೆಟ್​ ಗೊಂದಲದ ಬಗ್ಗೆ ಪ್ರಜ್ವಲ್​ ರೇವಣ್ಣ ಮಾತನಾಡಿದ್ದು, ಮೊನ್ನೆ ನಡೆದ ದಿಶಾ ಸಭೆಯಲ್ಲೂ ಶಿವಲಿಂಗೇಗೌಡರಿಗೆ ಹೇಳಿದ್ದೇನೆ. ಕಾಲ ಮಿಂಚಿ ಹೋಗುವ ಮೊದಲು ನಿರ್ಧಾರ ಮಾಡಲು ತಿಳಿಸಿದ್ದೇವೆ. ಫೆವ್ರವರಿ 12ರಂದು ನಮ್ಮ ಪಕ್ಷದ ಸಭೆ ಕರೆದಿದ್ದೇವೆ. ಆ ಸಭೆಗೆ ಶಿವಲಿಂಗೇಗೌಡರೇ ಬಂದು ಮಾತನಾಡಬಹುದು. ಒಂದು ವೇಳೆ ಶಿವಲಿಂಗೇಗೌಡರು ಸಭೆಗೆ ಬಾರದಿದ್ದರೆ ನಾವು ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಫೆಬ್ರವರಿ 12ರಂದು ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಆ ಸಭೆಯಲ್ಲಿ ಭಾಗಿಯಾಗ್ತಾರೆ. ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಕ್ಷೇತ್ರವನ್ನು ಖಾಲಿ ಬಿಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೂ ಮೊದಲು ಶಿವಲಿಂಗೇಗೌಡರನ್ನೇ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ. ಅಂದರೆ ಕುಮಾರಸ್ವಾಮಿ ಹೇಳಿದ ಎರಡೂ ಹೇಳಿಕೆಗಳಿಗೂ ರೇವಣ್ಣ ಹಾಗು ಪ್ರಜ್ವಲ್​ ರೇವಣ್ಣ ಫುಲ್​ಸ್ಟಾಪ್​ ಇಟ್ಟಿದ್ದಾರೆ. 

ಹಾಸನದ ಮೂರು ಕ್ಷೇತ್ರಗಳಲ್ಲಿ ಟಿಕೆಟ್​ ಗೊಂದಲ..! 

ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಮಾತನಾಡಿರುವ ರೇವಣ್ಣ, ಎಲ್ಲವನ್ನೂ ಬಗೆಹರಿಸುತ್ತೇವೆ. ಕುಮಾರಣ್ಣ ಅವರು ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಎರಡು ಸಾರಿ ಆಪರೇಷನ್ ಆಗಿದ್ದು, ಆರೋಗ್ಯ ಲೆಕ್ಕಿಸದೆ ಹೋರಾಟ ಮಾಡ್ತವ್ರೆ. ಅವರಿಗೆ ಯಾವುದೇ ನೋವಾಗದಂಗೆ ಎಲ್ಲಾ ಬಗೆಹರಿಸುತ್ತೇವೆ. ನಮ್ಮ ನಾಯಕರು ಕುಮಾರಣ್ಣ. ಕುಮಾರಣ್ಣ ನಾನು ಬದುಕಿರುವವರೆಗರ ಹೊಡೆದಾಡುವ ಪ್ರಶ್ನೆಯೇ ಇಲ್ಲಾ. ದೇವೇಗೌಡರಿಗೆ ದೇವರು ಆರೋಗ್ಯ ಕೊಡಲಿ . ದೇವೇಗೌಡರ ಮುಂದೆ 123 ಸೀಟ್ ಗೆದ್ದು ಕುಮಾರಣ್ಣನ್ನ ಮುಖ್ಯಮಂತ್ರಿ ವಿಧಾನಸೌಧಲ್ಲಿ ಜೆಡಿಎಸ್ ಬಾವುಟ ಹಾರಿಸಬೇಕು. ಕುಮಾರಣ್ಣ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ರಾಜ್ಯದ ಮುಖ್ಯಮಂತ್ರಿ. ಅವರು ಈಗಾಗಲೇ 28 ಸಾವಿರ ಕೋಟಿ ಸಾಲಮನ್ನಾ ಮಾಡವ್ರೆ. ನಮ್ಮ ಜಿಲ್ಲೆಯ ಕೆಲವು ಹಿರಿಯ ಮುಖಂಡರಿದ್ದಾರೆ. ಅವರಿಗೆ ಯಾವ ರೀತಿ ಶಕ್ತಿ ತುಂಬಬೇಕು ಅನ್ನೋ ಬಗ್ಗೆ ಕೂತ್ಕಂಡು ಮಾತಾಡ್ತಿವಿ ಎಂದಿದ್ದಾರೆ. 

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ಇದೀಗ

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ

by ಪ್ರತಿಧ್ವನಿ
March 23, 2023
ಆಟೋ ಬಂದ್ : ಅನಧೀಕೃತ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಒತ್ತಾಯ #PRATIDHVANI
ಇದೀಗ

ಆಟೋ ಬಂದ್ : ಅನಧೀಕೃತ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಒತ್ತಾಯ #PRATIDHVANI

by ಪ್ರತಿಧ್ವನಿ
March 20, 2023
ನಾಳೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿರುವ ಕೋಲಾರದ ಒಕ್ಕಲಿಗ ಸಮುದಾಯ..! VOkkaliga Community
ಇದೀಗ

ನಾಳೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿರುವ ಕೋಲಾರದ ಒಕ್ಕಲಿಗ ಸಮುದಾಯ..! VOkkaliga Community

by ಪ್ರತಿಧ್ವನಿ
March 20, 2023
SIDDARAMAIAH | ನಟ ಚೇತನ್ ಬಂಧನದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್…! #PRATIDHVANI
ಇದೀಗ

SIDDARAMAIAH | ನಟ ಚೇತನ್ ಬಂಧನದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್…! #PRATIDHVANI

by ಪ್ರತಿಧ್ವನಿ
March 21, 2023
ChethanAhimsa : ಕೋರ್ಟ್​ನಿಂದ ಹೊರಬರುವಾಗ ನಟ ಚೇತನ್ ರಿಯಾಕ್ಟ್ . #pratidhvani #chethana #politics #hinduism
ಇದೀಗ

ChethanAhimsa : ಕೋರ್ಟ್​ನಿಂದ ಹೊರಬರುವಾಗ ನಟ ಚೇತನ್ ರಿಯಾಕ್ಟ್ . #pratidhvani #chethana #politics #hinduism

by ಪ್ರತಿಧ್ವನಿ
March 21, 2023
Next Post
ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ: 2300 ಕ್ಕೂ ಅಧಿಕ ಸಾವು

ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ: 2300 ಕ್ಕೂ ಅಧಿಕ ಸಾವು

ದಶಪಥದ ಪಯಣದಲಿ ಏನೆಲ್ಲಾ ಕಳೆದುಕೊಳ್ಳುತ್ತೇವೆ ?

ದಶಪಥದ ಪಯಣದಲಿ ಏನೆಲ್ಲಾ ಕಳೆದುಕೊಳ್ಳುತ್ತೇವೆ ?

ನೋಟು ಅಮಾನ್ಯಗೊಳಿಸುವ ಸರಕಾರದ ಸಲಹೆಯನ್ನು ಮಾರ್ಚ್ 2016 ರಲ್ಲಿ ತಿರಸ್ಕರಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ನೋಟು ಅಮಾನ್ಯಗೊಳಿಸುವ ಸರಕಾರದ ಸಲಹೆಯನ್ನು ಮಾರ್ಚ್ 2016 ರಲ್ಲಿ ತಿರಸ್ಕರಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist