ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ದಿನದ ರಾಜ್ಯ ಪ್ರವಾಸ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನವನ್ನ ಒಂದು ದಿನ ಮುಂಚಿತವಾಗಿ ಮೊಟಕುಗೊಳಿಸಿದ್ದ ವಿಚಾರವಾಗಿ ಕಾಂಗ್ರೆಸ್ ಟೀಕೆ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈ ಪ್ರತಿಪಕ್ಷಗಳ ನಾಯಕರ ಒಪ್ಪಿಗೆ ಪಡೆದೇ ಮೊಟಕುಗೊಳಿಸಲಾಗಿದೆ ಈಗ ಕೆಲವರು ವಿರೋಧಿಸುತ್ತಿರುವುದು ಅವರ ಗುಂಪುಗಾರಿಕೆ ತೋರಿಸುತ್ತಿದೆ ಅವರ ನಾಯಕರನ್ನು ಅವರೇ ವಿರೋಧ ಮಾಡ್ತಾ ಇದ್ದಾರೆ ಅವರ ನಾಯಕರನ್ನೇ ಕೇಳಲಿ ಅವರ್ಯಾಕೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಗುಂಪುಗಾರಿಕೆ ಇಲ್ಲೂ ಹೊರಗೆ ಬರುತ್ತಿದೆ ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಗೌರವ ಇಲ್ಲವೇ ನಿಮ್ಮ ಪಕ್ಷದ ಆಂತರಿಕ ಗೊಂದಲ, ಗುಂಪುಗಾರಿಕೆಯನ್ನು ಇಲ್ಲಿ ತರಬೇಡಿ ಸಭಾಧ್ಯಕ್ಷರು ಮೂರು ಪಕ್ಷದ ನಾಯಕರ ಒಪ್ಪಿಗೆ ಪಡೆದೇ, ಮೊಟಕುಗೊಳಿಸಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಒಬಿಸಿಗೆ ಅನ್ಯಾಯ ಮಾಡಲ್ಲ ಅನ್ನೋದು ಈ ಸರ್ಕಾರದ ನಿರ್ಣಯ 102 ಜಾತಿಗಳಿಗೆ ಇರೋ ಮೀಸಲಾತಿಗೆ ತೊಂದರೆಯಾಗಲ್ಲ ನಮ್ಮ ಮೀಸಲಾತಿ ತೆಗೆಯುತ್ತಾರೆ ಎಂಬ ಭಯವಿತ್ತು ಒಂದು ಪರ್ಸೆಂಟ್ ಕೂಡ ತೆಗೆಯಲ್ಲ ಆ ನಿಟ್ಟಿನಲ್ಲಿ ಮೀಸಲಾತಿ ಹಂಚಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದಲ್ಲಿ ಅನ್ಯಾಯವಾಗಿಲ್ಲ ನಾನು ಈ ವಿಚಾರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಪಂಚಮಸಾಲಿ ವರ್ಗದವರು ಇದನ್ನು ವಿರೋಧಿಸಿಲ್ಲ ಸಂಭ್ರಮಾಚರಣೆ ಬೇಕು. ಸ್ಷಷ್ಟತೆ ಇನ್ನಷ್ಟು ಬೇಕು ಅನ್ನೋದು ಶ್ರೀಗಳ ಹೇಳಿಕೆ ಮೀಸಲಾತಿ ಪ್ರಮಾಣ ಹಂಚಿಕೆ ನಂತರ ಸ್ಪಷ್ಟತೆ ಸಿಗಲಿದೆ 2ಡಿ, 2ಸಿ ಮೀಸಲಾತಿಯನ್ನು ಘೋಷಣೆ ಸ್ವಾಹತಾರ್ಹ ಎಂದು ಹೇಳಿದ್ದಾರೆ.
ಇನ್ನು ಗೃಹ ಸಚಿವ ಅಮಿತ್ ಶಾ ಸ್ವಾಗತಕ್ಕೆ ಸಂಸದೆ ಸುಮಲತಾ ಫ್ಲೆಕ್ಸ್ ಹಾಕಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ದೇಶದ ಗೃಹಸಚಿವರು ಮಂಡ್ಯಕ್ಕೆ ಬರುತ್ತಿದ್ದಾರೆ ಆ ಕಾರಣಕ್ಕೆ ಸ್ವಾಗತ ಮಾಡಿದ್ದಾರೆ ಅಲ್ಲಿನ ಸಂಸದರು ಸ್ವಾಗತ ಮಾಡುವುದು ತಪ್ಪೇನಲ್ಲ ಅವರು ಬಿಜೆಪಿ ಸೇರ್ತಾರೋ ಬಿಡ್ತಾರೋ ಗೊತ್ತಿಲ್ಲ ಬರುವಂತ ದಿನಗಳಲ್ಲಿ ಅದು ನಿಮಗೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನು ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ವಿರುದ್ದ FIR ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ ಯಾರಿಗೂ ಚಾಕು ಹಾಕಿ ಅಂದಿಲ್ಲ ಪ್ರಜ್ಞಾಸಿಂಗ್ ಹೇಳಿದ್ದನ್ನು ಇಡೀ ಪ್ರಪಂಚ ನೋಡಿದೆ ಮನೆಯಲ್ಲಿ ಪಿಸ್ತೂಲ್, ಬಾಂಬ್ ಇಟ್ಟುಕೊಳ್ಳಿ ಅಂದಿಲ್ಲ ನಿಮ್ಮ ರಕ್ಷಣೆಗೆ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಿ ಅಂದಿದ್ದಾರೆ. ನೀವಾಗೇ ನೀವು ನೇರವಾಗಿ ಆಘಾತ, ಕೊಲೆ ಮಾಡಿ ಎಂದೂ ಎಲ್ಲೂ ಹೇಳಿಲ್ಲ ನಿಮ್ಮ ರಕ್ಷಣೆಗೆ ಚಾಕುಗಳನ್ನು ಇಟ್ಟುಕೊಳ್ಳಿ ಅಂದಿದ್ದಾರೆ. ಕಾಂಗ್ರೆಸ್ ನವರು ಇಲ್ಲೂ ರಾಜಕಾರಣದ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.