Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

KKR vs RCB IPL2023 :‌ ಶಾರ್ದೂಲ್‌ ಬ್ಯಾಟಿಂಗ್ ಅಬ್ಬರಕ್ಕೆ ಮಂಡಿಯೂರಿದ ಆರ್‌ ಸಿಬಿ

ಪ್ರತಿಧ್ವನಿ

ಪ್ರತಿಧ್ವನಿ

April 7, 2023
Share on FacebookShare on Twitter

ಕೋಲ್ಕತ್ತಾ :ಏ,೦7: ಐಪಿಎಲ್​ನ 9ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 81 ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ RCB ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ 204 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ, 123 ರನ್‌ಗಳಿಗೆ ಸರ್ವಪತನ ಕಂಡಿತು.

ಹೆಚ್ಚು ಓದಿದ ಸ್ಟೋರಿಗಳು

ಮಥುರಾ ರೈಲ್ವೆ ಜಂಕ್ಷನ್ ಬಳಿ ಹಳಿತಪ್ಪಿದ EMU ರೈಲು

ಗಣೇಶೋತ್ಸವ ಮೆರವಣಿಗೆ ವೇಳೆ ‘ಮೀಲಾದ್’ ಬ್ಯಾನರ್ ಹರಿದ ಕಿಡಿಗೇಡಿಗಳು

ತಮಿಳುನಾಡು ಈಗಾಗಲೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ: ಬೊಮ್ಮಾಯಿ


ಆರ್​ಸಿಬಿಯನ್ನು ಸೋಲಿಸಿದ ಕೆಕೆಆರ್​​​, ಈ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿತು. ಶ್ರೇಯಸ್​ ಅಯ್ಯರ್ ಅಲಭ್ಯತೆಯಲ್ಲಿ ನಾಯಕತ್ವ ಅಲಂಕರಿಸಿದ ನಿತೀಶ್​ ರಾಣಾ ಅವರಿಗೂ ಇದು ಮೊದಲ ಗೆಲುವು ಆಗಿದೆ. ಅಲ್ಲದೆ ಈ ಪಂದ್ಯದಲ್ಲಿ ಪ್ರಮುಖ ದಾಖಲೆಗಳು ನಿರ್ಮಾಣವಾಗಿವೆ. IPL​ನ 9ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆರ್​ಸಿಬಿ ವಿರುದ್ಧದ ಕಣಕ್ಕಿಳಿಯುವ ಮೂಲಕ ಕೆಕೆಆರ್ ಪರ 150 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ 2 ವಿಕೆಟ್​ ಪಡೆದು ಮಿಂಚಿದರು.
ಆರ್​ಸಿಬಿ ವಿರುದ್ಧ ಕೆಕೆಆರ್ ಸ್ಪಿನ್ನರ್​​ಗಳು 9 ವಿಕೆಟ್​ ಕಬಳಿಸಿ ವಿಶೇಷ ದಾಖಲೆ ಬರೆದಿದ್ದಾರೆ. ಆ ಮೂಲಕ ಐಪಿಎಲ್​ನ ಇನ್ನಿಂಗ್ಸ್​ವೊಂದರಲ್ಲಿ ಸ್ಪಿನ್ನರ್​​ಗಳು ಹೆಚ್ಚು ವಿಕೆಟ್​ ಉರುಳಿಸಿದ ದಾಖಲೆ ನಿರ್ಮಾಣ ಮಾಡಿದ್ದಾರೆ. ಕೆಕೆಆರ್​ ಈ ವಿಶೇಷ ದಾಖಲೆಗೆ ಪಾತ್ರವಾದ ಮೊದಲ ತಂಡ ಎನಿಸಿದೆ. ಕೆಕೆಆರ್​​ ಪರ ವರುಣ್​ ಚಕ್ರವರ್ತಿ 4 ವಿಕೆಟ್​​, ಸುಯೇಶ್​ ಶರ್ಮಾ 3 ವಿಕೆಟ್​​​, ಸುನಿಲ್​ ನರೈನ್​​ 2 ವಿಕೆಟ್​, ಶಾರ್ದೂಲ್​ ಠಾಕೂರ್​ 1 ವಿಕೆಟ್​ ಪಡೆದು ಮಿಂಚಿದರು. ಈ ಹಿಂದೆ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಸ್ಪಿನ್ನರ್​ಗಳು ಇನ್ನಿಂಗ್ಸ್​​ವೊಂದರಲ್ಲಿ ಒಟ್ಟು 3 ಬಾರಿ 8 ವಿಕೆಟ್​ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

7ನೇ ಕ್ರಮಾಂಕದಲ್ಲಿ ಕ್ರೀಸ್​​ಗಿಳಿದು ಅದ್ಭುತ ಸೃಷ್ಟಿಸಿದ ಶಾರ್ದೂಲ್​ ಠಾಕೂರ್​​​​, ಮಹತ್ವದ ದಾಖಲೆಯನ್ನು ಬರೆದರು. 2023ರ ಐಪಿಎಲ್​​​ನಲ್ಲಿ ವೇಗದ ಅರ್ಧಶತಕ ದಾಖಲಿಸಿದರು, 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಜೋಸ್​ ಬಟ್ಲರ್​ ದಾಖಲೆಯನ್ನು ಸರಿಗಟ್ಟಿದರು. KKR ಪರ 7ನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ 4ನೇ ಆಟಗಾರ​ ಎಂಬ ದಾಖಲೆಯನ್ನೂ ಬರೆದರು. ಅಲ್ಲದೆ, 68 ರನ್​ಗಳಿಸಿದ ಶಾರ್ದೂಲ್​​​ 7ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ಸ್ಕೋರರ್​ ಎನಿಸಿದರು. ಹಾಗೆಯೇ ರಿಂಕು ಸಿಂಗ್​ ಜೊತೆಗೆ 103 ರನ್​ ಜೊತೆಯಾಟ ಕಟ್ಟಿದ್ದು, ಐಪಿಎಲ್​ ಇತಿಹಾಸದಲ್ಲಿ 6 ವಿಕೆಟ್​​ಗೆ ಶತಕ ಜೊತೆಯಾಟವಾಡಿದ 4ನೇ ಜೋಡಿ ಎನಿಸಿದೆ.
ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ನಿರ್ಮಾಣವಾಗಿದೆ. ಉಭಯ ತಂಡಗಳ ಹೆಚ್ಚಿನ ಬ್ಯಾಟ್ಸ್​​ಮನ್​ಗಳು ಸ್ಪಿನ್ನರ್​ಗಳಿಗೆ ವಿಕೆಟ್​ ಒಪ್ಪಿಸಿರುವುದು. ಒಟ್ಟು 12 ಆಟಗಾರರು ಸ್ಪಿನ್​​ ದಾಳಿಗೆ ಬಲಿಯಾಗಿದ್ದಾರೆ. ಪಂದ್ಯವೊಂದರಲ್ಲಿ 12 ಆಟಗಾರರು ಸ್ಪಿನ್ನರ್​​​​ಗಳಿಗೆ ಔಟಾಗಿರುವುದು ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೂ ಹಿಂದೆ ಕೆಕೆಆರ್​​ ಮತ್ತು ಸಿಎಸ್​ಕೆ ತಂಡಗಳ ಸ್ಪಿನ್ನರ್​ಗಳು ಪಂದ್ಯವೊಂದರಲ್ಲಿ 11 ವಿಕೆಟ್​ ಉರುಳಿಸಿದ್ದರು

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

CWMA ಶಾಕ್‌ ಕೊಟ್ಟ ಬೆನ್ನಲ್ಲೇ ಹಿರಿಯ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಸಿಎಂ ಸುದೀರ್ಘ ಚರ್ಚೆ..!
Top Story

CWMA ಶಾಕ್‌ ಕೊಟ್ಟ ಬೆನ್ನಲ್ಲೇ ಹಿರಿಯ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಸಿಎಂ ಸುದೀರ್ಘ ಚರ್ಚೆ..!

by Prathidhvani
September 29, 2023
ದಿನ ದಿನಕ್ಕೂ ಉಲ್ಬಣಿಸುತ್ತಿದೆ ಡೆಲಿವರಿ ಸ್ಟಾರ್ಟ್‌ಅಪ್ ಡಂಜೋದ ಬಿಕ್ಕಟ್ಟು!
Top Story

ದಿನ ದಿನಕ್ಕೂ ಉಲ್ಬಣಿಸುತ್ತಿದೆ ಡೆಲಿವರಿ ಸ್ಟಾರ್ಟ್‌ಅಪ್ ಡಂಜೋದ ಬಿಕ್ಕಟ್ಟು!

by ಪ್ರತಿಧ್ವನಿ
October 3, 2023
ಪರಿಪೂರ್ಣತೆಯೆಡೆಗೆ ಪಯಣ..!
ಅಂಕಣ

ಪರಿಪೂರ್ಣತೆಯೆಡೆಗೆ ಪಯಣ..!

by ಡಾ | ಜೆ.ಎಸ್ ಪಾಟೀಲ
October 1, 2023
ಸತ್ಯಂ, ಶಿವಂ, ಸುಂದರಂ: ರಾಹುಲ್ ಗಾಂಧಿ ಟ್ವೀಟ್
Top Story

ಸತ್ಯಂ, ಶಿವಂ, ಸುಂದರಂ: ರಾಹುಲ್ ಗಾಂಧಿ ಟ್ವೀಟ್

by ಪ್ರತಿಧ್ವನಿ
October 1, 2023
“ಗರಡಿ” ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ: ಬಹು ನಿರೀಕ್ಷಿತ ‘ಗರಡಿ’ ಚಿತ್ರ ನವೆಂಬರ್ 10 ರಂದು ತೆರೆಗೆ
Top Story

“ಗರಡಿ” ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ: ಬಹು ನಿರೀಕ್ಷಿತ ‘ಗರಡಿ’ ಚಿತ್ರ ನವೆಂಬರ್ 10 ರಂದು ತೆರೆಗೆ

by ಪ್ರತಿಧ್ವನಿ
September 27, 2023
Next Post
ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ : ಎಫ್​ಐಆರ್​ ದಾಖಲು

ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ : ಎಫ್​ಐಆರ್​ ದಾಖಲು

ಪ್ರಧಾನಿ ಮೋದಿ ರಾಜ್ಯ ಭೇಟಿ ದಿನವೇ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್​

ಪ್ರಧಾನಿ ಮೋದಿ ರಾಜ್ಯ ಭೇಟಿ ದಿನವೇ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್​

ದಿ. ಆರ್​. ಧ್ರುವನಾರಾಯಣ ಪತ್ನಿ ವೀಣಾ ಧ್ರುವನಾರಾಯಣ್​ ವಿಧಿವಶ

ದಿ. ಆರ್​. ಧ್ರುವನಾರಾಯಣ ಪತ್ನಿ ವೀಣಾ ಧ್ರುವನಾರಾಯಣ್​ ವಿಧಿವಶ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist